PLACE YOUR AD HERE AT LOWEST PRICE
ಕೋಲಾರ ವಿಧಾನ ಸಭಾಕ್ಷೇತ್ರಕ್ಕೆ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯರನ್ನು ಕರೆತಂದು ‘ಬಲಿಕಾ ಬಕರಾ’ ಮಾಡಲು ಕಾಂಗ್ರೆಸ್ ಪಕ್ಷದ ರಮೇಶ್ಕುಮಾರ್ ಸೇರಿದಂತೆ ಘಟಬಂಧನ್ ನಾಯಕರು ಹುನ್ನಾರ ನಡೆಸಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿ ಮುಖಂಡ ಹಾಗೂ ಪಕ್ಷದ ಸಂಭಾವನೀಯ ಅಭ್ಯರ್ಥಿ ಸುಹೈಲ್ ದಿಲ್ ನವಾಜ್ ತಿಳಿಸಿದರು.
ನಗರ ಹೊರವಲಯದ ಖಾಸಗಿ ಹೋಟಲ್ ನಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷದ ಶಾಸಕರುಗಳು ಮುಖಂಡರುಗಳು ಯಾವುದೇ ಅಭಿವೃದ್ಧಿ ಕೆಲಸ ಮಾಡದೆ ಜನರ ಬಳಿ ಹೋಗಲು ಮುಖ ಇಲ್ಲ, ಆದ್ದರಿಂದ ದೊಡ್ಡ ಮರದ ನೆರಳು ಅವರಿಗೆ ಬೇಕಾಗಿದ್ದು,ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಎಂಬ ಬೃಹತ್ ಮರ ಕರೆತಂದು ಅವರುಗಳ ಬೇಳೆ ಬೇಯಿಸಿ ಕೊಳ್ಳಲು ಘಟಬಂಧನ್ನ ಮುಖಂಡರು ಶತಪ್ರಯತ್ನ ಮಾಡುತ್ತಿದ್ದಾರೆಂದು ಆರೋಪಿಸಿದರು.
ಸಿದ್ದರಾಮಯ್ಯ ನವರು ಕೋಲಾರದಲ್ಲಿ ಸ್ಪರ್ಧೆ ಮಾಡಿದರೆ ನನ್ನ ಗೆಲುವಿಗೆ ತೊಂದರೆ ಇಲ್ಲ,ಸ್ಪರ್ಧೆ ಮಾಡಲು ಅಲ್ಪಸಂಖ್ಯಾತರ ವಿರೋಧ ಇದೆ. ಸಿದ್ದರಾಮಯ್ಯನವರಿಗೆ ಕೋಲಾರದಲ್ಲಿ ಸ್ಪರ್ಧೆ ಮಾಡಲು ಇಷ್ಟ ಇಲ್ಲದಿದ್ದರೂ ಬಲವಂತವಾಗಿ ಕರೆ ತರುವ ಪ್ರಯತ್ನ ಮಾಡಲಾಗುತ್ತಿದೆ. ಕಳೆದ ಸಂಸದರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಹೆಚ್.ಮುನಿಯಪ್ಪರನ್ನು ಸೋಲಿಸಿ ಬಿ.ಜೆ.ಪಿಯ ಮುನಿಸ್ವಾಮಿ ರವರನ್ನು ಗೆಲ್ಲಿಸಿದರು. ಈ ಬಾರಿ ಸಿದ್ದರಾಮಯ್ಯ ರವರನ್ನು ಬಲಿಕಾ ಬಕರಾ ಮಾಡಲು ಹೊರಟಿದ್ದಾರೆಂದು ಟೀಕಿಸಿದರು.
ದೆಹಲಿಯ ಮಾದರಿಯಲ್ಲಿ ಅರವಿಂದ್ ಕ್ರೇಜಿವಾಲ್ರ ಯೋಜನೆಗಳನ್ನು ಕ್ಷೇತ್ರದಲ್ಲಿ ತರಲು ಚಿಂತನೆ ನಡೆಸಿದ್ದು,ಈಗಾಗಲೇ ಪಕ್ಷದ ಯೋಜನೆಗಳನ್ನು ಕ್ಷೇತ್ರದ ಪ್ರತಿ ಮನೆ ಮನೆಗೆ ತಲುಪಿಸಲು ಪ್ರಚಾರ ಪ್ರಾರಂಭಿಸಲಾಗಿದೆಯೆಂದರು.
ಅಲ್ಪಸಂಖ್ಯಾತರ ಮತಗಳು ಎಂ.ಎಲ್.ಸಿ.ಅನಿಲ್ ಕುಮಾರ್ ಹಾಗೂ ನಿಸಾರ್ ಅಹ್ಮದ್ ಅವರ ಮನೆ ಮತಗಳಲ್ಲ, ಕನಿಷ್ಠ ೧೦೦ ಮತಗಳನ್ನು ಅವರ ಬೂತ್ನಲ್ಲಿ ಅನಿಲ್ ಕುಮಾರ್ ಹಾಕಿಸಿಲ್ಲವೆಂದು ಛೇಡಿಸಿದರು.
ನಮಗೆ ಜನ ಬೆಂಬಲ ಹೆಚ್ಚಿನ ರೀತಿಯಲ್ಲಿ ದೊರೆಯುತ್ತಿದ್ದು, ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ತಾವು ಆಮ್ ಆದ್ಮಿ ಪಕ್ಷದಿಂದ ಸ್ಪರ್ಧೆ ಮಾಡವುದು ಖಚಿತ, ಜನರ ಆಶೀರ್ವಾದ ದಿಂದ ಗೆಲವು ಸಾಧಿಸುತ್ತೇನೆ.ಕಾಂಗ್ರೆಸ್ ಪಕ್ಷಕ್ಕೆ ಜನರು ಪಾಠ ಕಲಿಸುತ್ತಾರೆ ಎಂದರು.
ಚಿತ್ರಶೀರ್ಷಿಕೆ:(ಫೋಟೊ-೮ಕೋಲಾರ೪); ಆಮ್ ಆದ್ಮಿ ಪಾರ್ಟಿ ಮುಖಂಡ ಹಾಗೂ ಪಕ್ಷದ ಸಂಭಾವನೀಯ ಅಭ್ಯರ್ಥಿ ಸುಹೈಲ್ ದಿಲ್ ನವಾಜ್,