PLACE YOUR AD HERE AT LOWEST PRICE
ಬಂಗಾರಪೇಟೆ ಪಟ್ಟಣದ ಭಾರತ ರತ್ನ ಡಾಕ್ಟರ್ ಬಿ. ಆರ್. ಅಂಬೇಡ್ಕರ್ ಭವನದಲ್ಲಿ ಬಹುಜನ ಸಮಾಜ ಪಾರ್ಟಿ(ಬಿ.ಎಸ್.ಪಿ)ವತಿಯಿಂದ ಬಂಗಾರಪೇಟೆ ತಾಲೂಕು ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ಅಧ್ಯಕ್ಷತೆ ಹಾಗೂ ನೇತೃತ್ವವನ್ನು ಬಹುಜನ ಸಮಾಜ ಪಾರ್ಟಿಯ ಜಿಲ್ಲಾ ಮುಖಂಡ ರಮಣ್ ಕುಮಾರ್ ಅವರು ವಹಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಎಸ್.ಆರ್ . ಸುರೇಶ್ ಹಾಗೂ ಆನಂದ ಸಿದ್ದಾರ್ಥ್ ಅವರ ಅಪ್ಪಣೆಯ ಮೇರೆಗೆ ಬಂಗಾರಪೇಟೆ ಬಹುಜನ ಸಮಾಜ ಪಾರ್ಟಿಯ ತಾಲೂಕು ಅಧ್ಯಕ್ಷರಾಗಿ ತ್ಯಾರನಹಳ್ಳಿ ಆರ್. ನಾರಾಯಣಸ್ವಾಮಿ ಅವರನ್ನು ನೇಮಕ ಮಾಡಲಾಯಿತು.
ಉಪಾಧ್ಯಕ್ಷರಾಗಿ ಪಾರ್ವತಮ್ಮ, ಪ್ರಧಾನ ಕಾರ್ಯದರ್ಶಿಯಾಗಿ ಸಂಪಂಗಿಪುರ ಶ್ರೀನಿವಾಸ್, ಸಂಘಟನಾ ಕಾರ್ಯದರ್ಶಿಯಾಗಿ ವೆಂಕಟರಾಮ್, ಖಜಾಂಚಿಯಾಗಿ ಗಂಗಮ್ಮನ ಪಾಳ್ಯ ಗೋವಿಂದಪ್ಪ, ಜಿಲ್ಲಾ ಉಪಾಧ್ಯಕ್ಷರಾಗಿ ರಮಣ ಕುಮಾರ್, ಜಿಲ್ಲಾ ಸಂಯೋಜಕರಾಗಿ ಚಿಕ್ಕಅoಕಂಡಹಳ್ಳಿ ಮೋಹನ್ ಕುಮಾರ್ ಅವರನ್ನು ನೇಮಕ ಮಾಡಲಾಯಿತು.
ಬಹುಜನ ಸಮಾಜ ಪಾರ್ಟಿ ಬಂಗಾರಪೇಟೆ ತಾಲೂಕು ನೂತನ ಅಧ್ಯಕ್ಷರಾದ ನಾರಾಯಣಸ್ವಾಮಿ ಅವರು ಮಾತನಾಡುತ್ತಾ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಅಮ್ಮ ಮಾಯಾವತಿ ಅವರ ಸ್ಥಾಪಿತ ಹಾಗೂ ಆದರ್ಶ, ತತ್ವ, ಸಿದ್ಧಾಂತಗಳ ಅಡಿಯಲ್ಲಿ ಪಕ್ಷವನ್ನು ಗಟ್ಟಿ ಪಡಿಸಿ ಈ ಬಾರಿ 2023 ಚುನಾವಣೆಯಲ್ಲಿ ಪಕ್ಷದಿಂದ ಅಭ್ಯರ್ಥಿಯನ್ನು ಎಂಎಲ್ಎ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸುತ್ತೇವೆ.
ನಮ್ಮ ಪಕ್ಷದಲ್ಲೇ ಯಾರಾದರೂ ನಿಲ್ಲುವ ಆಕಾಂಕ್ಷಿ ಇದ್ದರೆ ಅವರಿಗೂ ಸಹ ನಾವು ಬಿ ಫಾರಂ ನೀಡಿ ಬೆಂಬಲ ನೀಡುತ್ತೇವೆ ಎಂದು ತಿಳಿಸಿದರು.
ಈ ಬಾರಿ ಬಂಗಾರಪೇಟೆ ಕ್ಷೇತ್ರದಲ್ಲಿ ನಮ್ಮ ಬಿಎಸ್ ಪಿ ಅಭ್ಯರ್ಥಿಯನ್ನು ಹೆಚ್ಚು ಮತಗಳಿಂದ ಗೆಲ್ಲಿಸಿಕೊಳ್ಳುತ್ತೇವೆ ಎಂದು ತಿಳಿಸಿದರು.
ಮತದಾರರ ಪ್ರಭುಗಳೇ ಈ ದೇಶ ಬದಲಾವಣೆ ಆಗಬೇಕೆಂದರೆ ನಮ್ಮ ಬಿಎಸ್ ಪಿ. ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತನ್ನಿ, ಬಂಗಾರಪೇಟೆಯಲ್ಲಿ ನಮ್ಮ ಅಭ್ಯರ್ಥಿಗೆ ಅವಕಾಶ ನೀಡಿ ಗೆಲ್ಲಿಸಿಕೊಳ್ಳಿ ಎಂದು ಮನವಿ ಮಾಡಿದರು.
ಇದೇ ರೀತಿ ನಮ್ಮ ಪಕ್ಷದ ಮುಖಂಡರು ಕಾರ್ಯಕರ್ತರು ಸಹ ನಿಷ್ಠೆ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದರೆ ಈ ಬಾರಿ ಗ್ಯಾರಂಟಿ ಗೆಲ್ಲುತ್ತೇವೆ ಎಂಬ ವಿಶ್ವಾಸ ನನ್ನಲ್ಲಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಅಧ್ಯಕ್ಷ ಆನಂದ್ ಸಿದ್ದಾರ್ಥ್, ಸಂಯೋಜಕ ತಿಮ್ಮರಾಯಪ್ಪ, ಉಪಾಧ್ಯಕ್ಷ ವೈ .ಎಂ. ಮುನಿರಾಜಪ್ಪ, ಪ್ರಧಾನ ಕಾರ್ಯದರ್ಶಿ ಆನಂದ, ಮುಳಬಾಗಿಲು ಸುಬ್ರಮಣಿ, ಜಾವಿದ್, ಹಾಗೂ ಇನ್ನು ಮುಂತಾದವರು ಭಾಗವಹಿಸಿದ್ದರು.