• Sat. Apr 20th, 2024

ಗ್ರಾಮಾಂತರ ಭಕ್ತಾಧಿಗಳಿಗೆ 9 ಬಸ್‍ಗೆ ಚಾಲನೆ ನೀಡಿದ ಶಾಸಕಿ ಎಂ.ರೂಪಕಲಾ.

PLACE YOUR AD HERE AT LOWEST PRICE

ಕೆಜಿಎಫ್ ಕ್ಷೇತ್ರದ ಗ್ರಾಮಾಂತರ ಪ್ರದೇಶದಲ್ಲಿ ಓಂ ಶಕ್ತಿ ದೇವಾಲಯಕ್ಕೆ 8 ಹಾಗೂ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ 1 ಒಟ್ಟು 9 ಬಸ್‍ಗಳಿಗೆ ಶಾಸಕಿ ಎಂ.ರೂಪಕಲಾ ಭಾನುವಾರ ಚಾಲನೆ ನೀಡಿ ಯಾತ್ರಿಗಳಿಗೆ ಶುಭ ಹಾರೈಸಿದರು.
ಕೆಜಿಎಫ್ ತಾಲ್ಲೂಕಿನ ಸುಂದರಪಾಳ್ಯ ಗ್ರಾಮಕ್ಕೆ 3, ಐಸಂದ್ರ ಮಿಟ್ಟೂರು ಗ್ರಾಮಕ್ಕೆ 2, ಕಾವೇರಹಳ್ಳಿ, ಬೀರನಕುಪ್ಪ,
ಪಾರಂಡಹಳ್ಳಿಗೆ ತಲಾ 1 ಬಸ್‍ಗಳನ್ನು ಓಂ ಶಕ್ತಿ ಮಾಲಾಧಾರೆಗಳಿಗೆ ಒಟ್ಟು 8 ಬಸ್ ಹಾಗೂ ಕಮ್ಮಸಂದ್ರ ಗ್ರಾಪಂಯ ಚೆನ್ನಪ್ಪಲ್ಲಿ ಗ್ರಾಮದಲ್ಲಿ ಅಯ್ಯಪ್ಪ ಸ್ವಾಮಿ ಭಕ್ತಾಧಿಗಳಿಗೆ 1 ಬಸ್ ಉಚಿತವಾಗಿ ವ್ಯವಸ್ಥೆ ಮಾಡಿ ಆರ್ಥಿಕ ನೆರವು ನೀಡಿದರು.
ಕೊರೊನಾ ಹಿನ್ನಲೆ 2 ವರ್ಷಗಳಿಂದ ಬಡವ, ಶ್ರಮಿಕ, ಕೂಲಿ ಕಾರ್ಮಿಕರಿಗೆ ಸಮರ್ಪಕವಾಗಿ ವ್ಯಾಪರಗಳಿಲ್ಲ, ಸಾರಿಗೆ
ಇತರೆ ಸೌಲಭ್ಯ ವಿಲ್ಲದೆ ಭಕ್ತಾಧಿಗಳು ಪರದಾಡಿದ್ದರು, ಆಯಾ ವ್ಯಾಪ್ತಿಯ ಮುಖಂಡರ ಮನವಿಯಂತೆ ಭಕ್ತಾಧಿಗಳಿಗೆ ಉಚಿತ ಸಾರಿಗೆ ವ್ಯವಸ್ಥೆ ಮಾಡಿ ಊಟಕ್ಕೆ ಆರ್ಥಿಕ ನೆರವವು ನೀಡಲಾಗುತ್ತಿದೆ ಎಂದು ಶಾಸಕಿ ಎಂ.ರೂಪಕಲಾ ಹೇಳಿದರು.
ಈ ಸಂದರ್ಭದಲ್ಲಿ ಸುಂದರಪಾಳ್ಯ ಗ್ರಾಪಂ ಅಧ್ಯಕ್ಷ ರಾಂ ಬಾಬು, ಟಿ.ಗೊಲ್ಲಹಳ್ಳಿ ಅಧ್ಯಕ್ಷೆ ಪವಿತ್ರಾ ಗೋಪಾಲ್, ಉಪಾಧ್ಯಕ್ಷ ಶ್ರೀರಾಮಪ್ಪ, ತಾಪಂ ಮಾಜಿ ಸದಸ್ಯ ಜಯರಾಮ ರೆಡ್ಡಿ, ವೆಂಕಟ್ರಾಮ್, ಸುವರ್ಣಹಳ್ಳಿ ಕೃಷ್ಣಮೂರ್ತಿ, ಮುಖಂಡರಾದ ನಾರಾಯಣಪ್ಪ, ಸುರೇಂದ್ರಗೌಡ, ಪ್ರಸಾದ್, ಸೀನಪ್ಪ ಉಪಸ್ಥಿತರಿದ್ದರು.

Related Post

2024ರ ಲೋಕಸಭಾ ಚುನಾವಣೆ ಸಂವಿಧಾನ ಪರ ಮತ್ತು ಸಂವಿಧಾನ ವಿರೋಧಿ ಧೋರಣೆ ಹಾಗೂ ಮನಸ್ಥಿತಿಗಳ ನಡುವಿನ ಯುದ್ಧವಾಗಿದೆ – ಎಂ.ಎಲ್.ಸಿ. ಸುಧಾಮದಾಸ್
ಶೇ.೯೦ ರಷ್ಟು ದೇಶದ ಸಮುದಾಯಗಳು ಮುಖ್ಯವಾಹಿನಿ ಮಾದ್ಯಮಗಳಲ್ಲಿ, ಕಾರ್ಪೋರೇಟ್ ವಿಭಾಗದಲ್ಲಿ ಮತ್ತು ಅತ್ಯುನ್ನತ ಸರ್ಕಾರಿ ಹುದ್ದೆಗಳಲ್ಲಿ ಭಾಗವಹಿಸುವಿಕೆ ಇಲ್ಲ! : ರಾಹುಲ್ ಗಾಂಧಿ
ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಅನ್ಯಾಯ ಮಾಡಿವೆ : ಸಮುದಾಯ ಮುಖಂಡರ ಆಕ್ರೋಶ,

Leave a Reply

Your email address will not be published. Required fields are marked *

You missed

error: Content is protected !!