PLACE YOUR AD HERE AT LOWEST PRICE
ದಲಿತ ಜನಪ್ರತಿನಿಧಿಗಳೇ ದಲಿತರನ್ನು ತುಳಿಯುತ್ತಾ ಡಾ.ಬಿ.ಆರ್.ಅಂಬೇಡ್ಕರ್ ರವರ ತತ್ವ ಸಿದ್ಧಾಂತಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಸಮಾಜ ಸೇವಕ ವಿ.ಮೋಹನಕೃಷ್ಣ ಬೇತಮಂಗಲದಲ್ಲಿ ಆರೋಪಿಸಿದರು.
ಜನಾಂದೋಲನ ಮಹಾ ಮೈತ್ರಿ, ಸಿಟಿಜನ್ ಫಾರ್ ಡೆಮೊಕ್ರಸಿ, ಜನತಂತ್ರ ಪ್ರಯೋಗ ಶಾಲೆ ಮತ್ತು ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟದ ಸಂಯುಕ್ತಾಶ್ರಯಲ್ಲಿ ನಡೆಯುತ್ತಿರುವ ಸಂವಿಧಾನ ಸಂರಕ್ಷಣಾ ಜಾಥಾವನ್ನು ವಿವಿದ ದಲಿತ ಸಂಘಟನೆಗಳು ಕೆಜಿಎಫ್ ತಾಲ್ಲೂಕಿನ ಬೇತಮಂಗಲದಲ್ಲಿ ಬರಮಾಡಿಕೊಂಡರು.
ಈ ವೇಳೆ ಆರ್.ಕೆ.ಫೌಂಡೇಷನ್ ಸಂಸ್ಥಾಪಕ ಸಮಾಜ ಸೇವಕ ವಿ.ಮೋಹನಕೃಷ್ಣ ಮಾತನಾಡಿ, ಚುನಾವಣೆಗಳು ಬಂದಾಗ ದಲಿತರನ್ನು ರಾಜಕೀಯವಾಗಿ ದಲಿತ ಜನಪ್ರತಿನಿಧಿಗಳೇ ತುಳಿಯುತ್ತಾರೆ.
ಸಂವಿಧಾನದ ಮೇಲೆ ಆಣೆ ಪ್ರಮಾಣ ಮಾಡಿ ಅಧಿಕಾರಕ್ಕೇರುವ ದಲಿತ ಜನಪ್ರತಿನಿಧಿಗಳೇ ನಿತ್ಯ ದಲಿತರನ್ನು ತುಳಿಯುತ್ತಾರೆ ಡಾ.ಬಿ.ಆರ್.ಅಂಬೇಡ್ಕರ್ ರವರು ಬರೆದಿರುವ ಸಂವಿಧಾನದ ಆಶಯದಂತೆ ನಡೆದುಕೊಳ್ಳದೆ ದಲಿತ ವಿರೋಧಿಗಳಾಗಿ ನಡೆದುಕೊಳ್ಳುತ್ತಾರೆ.
ಚುನಾವಣೆಗಳು ಬಂದಾಗ ಮಾತ್ರ ಡಾ.ಬಿ.ಆರ್.ಅಂಬೇಡ್ಕರ್ ರವರ ಹೆಸರೇಳುವ ರಾಜಕೀಯ ಪಕ್ಷಗಳ ನಾಯಕರು ನಂತರ ಅವರ ಚಿಂತನೆಗಳ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ ಅಂತಹವರಿಗೆ ಬುದ್ಧಿ ಕಲಿಸಬೇಕು ಎಂದರು.
ಈ ವೇಳೆ ಮುಖಂಡರಾದ ಸಂಗಸಂದ್ರ ವಿಜಯಕುಮಾರ್, ಡಾ.ಮುನಿಆಂಜಿನಪ್ಪ ಶ್ರೀನಿವಾಸ್, ಕಮ್ಮಸಂದ್ರ ಗ್ರಾಪಂ ಅದ್ಯಕ್ಷ ಸುರೇಶ್, ರವಿರೆಡ್ಡಿ, ಮುಬಾರಕ್ ಬಾಗ್ ಬಾನ್, ಪಿಚ್ಚಹಳ್ಳಿ ಮಂಜುನಾಥ್, ಲಕ್ಷ್ಮಯ್ಯ, ರಾಧಾಕೃಷ್ಣ, ಕೂಡಗಲ್ಲು ಬಾಬು, ಶ್ರೀನಾಥ್ ನಾಸ್ತಿಕ್, ಶ್ರೀನಿವಾಸ್, ಸಂದ ಮುನಿಸ್ವಾಮಿ, ಸಂಜೀವಯ್ಯ, ರಾಮಪ್ಪ, ಬಾಬು, ಕೃಷ್ಣಪ್ಪ, ಕೃಷ್ಣಮೂರ್ತಿ, ಸುಬ್ಬರಾಯಪ್ಪ, ಕೆಂಚಪ್ಪ ಮೊದಲಲಾದವರಿದ್ದರು.