• Tue. Apr 23rd, 2024

ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್‌ಗೆ ಸರ್ಕಾರಿ ನೌಕರರ ಗೌರವ ಬೀಳ್ಕೊಡುಗೆ

PLACE YOUR AD HERE AT LOWEST PRICE

 

ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡಿ ಹೆಸರು ಗಳಿಸಿದ್ದ ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್ ಅವರನ್ನು ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಹಾಗೂ ಶಿಕ್ಷಕ ಗೆಳೆಯರ ಬಳಗದ ಪದಾಧಿಕಾರಿಗಳು ಅತ್ಯಂತ ಪ್ರೀತಿ ಗೌರವಗಳಿಂದ ಸನ್ಮಾನಿಸಿ ಆತ್ಮೀಯವಾಗಿ ಬೀಳ್ಕೊಟ್ಟರು.

ನಗರದ ಜಿಲ್ಲಾ ಪೊಲೀಸ್ ಅಧೀಕ್ಷರ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸಂಜೆ ಜಿಲ್ಲಾ ನೌಕರರ ಸಂಘ ಹಾಗೂ ಶಿಕ್ಷಕ ಗೆಳೆಯರ ಬಳಗದ ಪದಾಧಿಕಾರಿಗಳು ಆಗಮಿಸಿ ಗೌರವ ಸನ್ಮಾನ ಅರ್ಪಿಸಿದರು. ಸನ್ಮಾನದ ನಂತರ ಮಾತನಾಡಿದ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು, ಡಿ.ದೇವರಾಜ್‌ರವರು ಸ್ಥಳೀಯರೇ ಆಗಿದ್ದು, ಒಂದು ವರ್ಷದ ಹಿಂದೆ ಅಧಿಕಾರ ವಹಿಸಿಕೊಂಡ ನಂತರ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ್ದರು.

ಅಪರಾಧಿಗಳಿಗೆ ಸಿಂಹಸ್ವಪ್ನವಾಗಿದ್ದು, ಜಿಲ್ಲೆಯಲ್ಲಿ ಅನೇಕ ಪ್ರಕರಣಗಳನ್ನು ಪತ್ತೆ ಹಚ್ಚುವ ಮೂಲಕ ಜನಾನುರಾಗಿಯಾಗಿದ್ದರು ಮತ್ತು ಹೊರಗಿನ ವ್ಯಕ್ತಿಗಳಿಂದ ನೌಕರರಿಗೆ ಆಗುತ್ತಿದ್ದ ಕಿರುಕುಳ ತಡೆಯುವಲ್ಲಿಯೂ ಮುಖ್ಯಪಾತ್ರ ವಹಿಸಿದ್ದರು ಸ್ಮರಿಸಿದರು.

ಕೋಲಾರ ಜಿಲ್ಲೆಯ ಅಭಿವೃದ್ದಿಯ ಕನಸು ಹೊಂದಿದ್ದ ಅವರು, ಸಿಎಸ್‌ಆರ್ ನಿಧಿಯನ್ನು ವಿವಿಧ ಕಂಪನಿಗಳು, ಸ್ನೇಹಿತರಿಂದ ತರಿಸಿ ನಗರದಲ್ಲಿ ಬಾಲಕಿಯರ ಪಿಯು ಕಾಲೇಜಿಗೆ ಮೂಲಸೌಲಭ್ಯ ಒದಗಿಸಿದ್ದರು. ನಗರದ ಬಾಲಕರ ಪದವಿ ಕಾಲೇಜಿಗೆ ಅತ್ಯಂತ ಸುಂದರ ಕಾಂಪೌAಡ್ ನಿರ್ಮಿಸುವಂತೆ ಮಾಡಿಸಿ ‘ನಮ್ಮ ಕೋಲಾರ ನಮ್ಮ ಹೆಮ್ಮ’ ಘೋಷಣೆಯ ದೀಪಾಲಂಕಾರ ಅಳವಡಿಸುವ ಮೂಲಕ ಜಿಲ್ಲೆಯ ಯುವಕರು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಇಷ್ಟೇ ಅಲ್ಲದೆ ತಮ್ಮ ಅಧಿಕಾರ ವ್ಯಾಪ್ತಿಯ ವೇಮಗಲ್ ಠಾಣೆ, ಕೋಲಾರ ಸಂಚಾರಿ ಪೊಲೀಸ್ ಠಾಣೆ ಸುಸಜ್ಜಿತ ಕಟ್ಟಡಗಳ ನಿರ್ಮಾಣ, ಕೋಲಾರ ನಗರ ಠಾಣೆ ಅಭಿವೃದ್ದಿ ಮತ್ತಿತರ ಕಾರ್ಯಗಳಿಂದ ಇಲಾಖೆಯ ಹಂತದಲ್ಲೂ ಮೆಚ್ಚುಗೆಗೆ ಪಾತ್ರರಾಗಿದ್ದರು ಎಂದರು.

ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ, ಕೋಲಾರದಲ್ಲಿ ಯುಗಾದಿ ಸಂಭ್ರಮ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮನೆಮಾತಾಗಿದ್ದರು ಎಂದ ಅವರು, ಸರ್ಕಾರಿ ನೌಕರರು, ಬಡವರನ್ನು ಪೀಡಿಸುವ ಅನೇಕರಿಗೆ ಸಿಂಹ ಸ್ಪಪ್ನವಾಗಿ ಜಿಲ್ಲೆಯಲ್ಲಿ ಅಪರಾಧಗಳ ಸಂಖ್ಯೆ ಕಡಿಮೆಯಾಗಲು ಅವರ ಪ್ರಯತ್ನವೇ ಕಾರಣವಾಗಿತ್ತು ಎಂದ ಅವರು, ಜಿಲ್ಲೆಯ ಓರ್ವ ಉತ್ತಮ ಅಧಿಕಾರಿ ಇಂದು ವರ್ಗಾವಣೆಯಾಗಿ ಬೇರೆ ಕಡೆ ಹೋಗುತ್ತಿರುವುದು ಜಿಲ್ಲೆಗೆ ಆಗಿರುವ ನಷ್ಟ ಎಂದ ಅವರು, ಮತ್ತೆ ಕೋಲಾರಕ್ಕೆ ಬನ್ನಿ, ಇಲ್ಲಿನ
ಅಭಿವೃದ್ದಿಗೆ ಸಹಕರಿಸಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ನೌಕರರ ಸಂಘದ ಕಾರ್ಯಾಧ್ಯಕ್ಷ ಎನ್.ಶ್ರೀನಿವಾಸರೆಡ್ಡಿ, ಪ್ರಧಾನ ಕಾರ್ಯದರ್ಶಿ ಅಜಯ್‌ಕುಮಾರ್, ರಾಜ್ಯಪರಿಷತ್ ಸದಸ್ಯ ಗೌತಮ್, ಉಪಾಧ್ಯಕ್ಷ ಅರಣ್ಯ ಇಲಾಖೆ ಮಂಜುನಾಥ್, ಕ್ರೀಡಾ ಕಾರ್ಯದರ್ಶಿ ಶ್ರೀರಾಮ್, ಆಂತರಿಕ ಲೆಕ್ಕಪರಿಶೋಧಕ ಅನಿಲ್, ಎಸ್ಪಿ ಕಚೇರಿಯ ನಾಗರಾಜ್, ಶಿಕ್ಷಕ ಗೆಳೆಯರ ಬಳಗದ ಗೌರವಾಧ್ಯಕ್ಷ ಆರ್.ಶ್ರೀನಿವಾಸನ್, ಉಪಾಧ್ಯಕ್ಷ ವೀರಣ್ಣಗೌಡ, ಕಾರ್ಯದರ್ಶಿ ಗೋವಿಂದು, ಸಲಹೆಗಾರರಾದ ಚಿಕ್ಕಣ್ಣ, ಎಲ್.ಶ್ರೀನಿವಾಸ್, ಕಸಾಪ ಮಾಜಿ ಅಧ್ಯಕ್ಷ ನಾಗಾನಂದ್ ಕೆಂಪರಾಜ್ ಮತ್ತಿತರರಿದ್ದರು.

 

ಇದನ್ನೂ ಓದಿ : ಕೋಲಾರ ಎಸ್ಪಿ ಆಗಿ ಎಂ.ನಾರಾಯಣ ಅಧಿಕಾರ ಸ್ವೀಕಾರ

Related Post

ಬಲಗೈ ಸಮುದಾಯದ ಬಹುಸಂಖ್ಯಾತ ಚಿಕ್ಕತಾಳಿ ಸಮಾಜವನ್ನು ಕಾಂಗ್ರೆಸ್ ಅಭ್ಯರ್ಥಿ ನಿರ್ಲಕ್ಷ್ಯ ಮಾಡಿದ್ದಾರೆ : ಸಮುದಾಯ ಮುಖಂಡರ ಆರೋಪ
ಕೆ.ಹೆಚ್.ಮುನಿಯಪ್ಪ ಬಲಗೈಭಂಟ ಜಿಪಂ ಮಾಜಿ ಸದಸ್ಯ ಎಂ.ರಾಮಚ0ದ್ರ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆ
ಕೋಲಾರ ಮೀಸಲು ಕ್ಷೇತ್ರವನ್ನು ಸಾಮಾನ್ಯ ಕ್ಷೇತ್ರ ಮಾಡುತ್ತೇನೆ ಎಂದ ವರ್ತೂರು ಪ್ರಕಾಶ್ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು – ದಲಿತ್ ನಾರಾಯಣಸ್ವಾಮಿ ಅಕ್ರೋಶ

Leave a Reply

Your email address will not be published. Required fields are marked *

You missed

error: Content is protected !!