• Fri. Apr 19th, 2024

ತಲ್ಲಪ್ಪಲ್ಲಿ ಸೋಮೇಶ್ವರ ದೇವರ ರಥೋತ್ಸವಕ್ಕೆ ಆರ್ಥಿಕ ಸಹಾಯ ಮಾಡಿದ ಸುರೇಶ್.

PLACE YOUR AD HERE AT LOWEST PRICE

ಕ್ಯಾಸಂಬಳ್ಳಿ ಹೋಬಳಿ , ಸುಂದರಪಳ್ಯ ಗ್ರಾಮ ಪಂಚಾಯತಿಯ ವ್ಯಾಪ್ತಿಗೆ ಸೇರಿರುವ ತಲ್ಲಪಲ್ಲಿ ಗ್ರಾಮದಲ್ಲಿ ಪುರಾತನ ಪ್ರಸಿದ್ದವಾದ ಶ್ರೀ ಪ್ರಸನ್ನ ಪಾರ್ವತೀ ಸಮೇತ ಸೋಮೇಶ್ವರ ಸ್ವಾಮಿ ರಥೋತ್ಸವ ಮತ್ತು ಶ್ರೀ ಚೌಡೇಶ್ವರಿ ಅಮ್ಮನವರ ಕರಗ ಮಹೋತ್ಸವ ನಡೆಯಿತು.
ಈ ಮಹೋತ್ಸವದಲ್ಲಿ ಕಮ್ಮಸಂದ್ರ ಗ್ರಾಮ ಪಂಚಾಯತಿಯ ಅಧ್ಯಕ್ಷ OSR ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ, ಬಿಜೆಪಿಯ ಆಕಾಂಕ್ಷಿ  ಹಾಗೂ KGF ವಿಧಾನ ಸಭಾ ಕ್ಷೇತ್ರದ ಸಮಾಜ ಸೇವಕರಾದ B . ಸುರೇಶ ರವರು ತಲ್ಲಪಳ್ಳಿ ಗ್ರಾಮದ ಮುಖ್ಯಸ್ಥರೊಂದಿಗೆ ಭಾಗವಹಿಸಿ ರಥೋತ್ಸವಕ್ಕೆ ಆರ್ಥಿಕ ಸಹಾಯ ಮಾಡಿ ಮಹೋತ್ಸವವನ್ನು ವೈಭವದಿಂದ ನಡೆಸಲು ಸಹಕಾರಿಯಾದರು.
ಈ ವೇಳೆ ಕಮ್ಮಸಂದ್ರ ಗ್ರಾಪಂ‌ ಅದ್ಯಕ್ಷ ಸುರೇಶ್ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಕೋವಿಡ್ ಕಾರಣದಿಂದ ಗ್ರಾಮಗಳಲ್ಲಿ ದೇವತಾ ಕಾರ್ಯಗಳು ಸ್ಥಗಿತಗೊಂಡಿದ್ದವು, ಕೊವಿಡ್ ಕಡಿಮೆಯಾಗಿದ್ದು ಜನ ಈಗೀಗ ಆರ್ಥಿಕವಾಗಿ ಸುಧಾರಿಸಿಕೊಳ್ಳುತ್ತಿದ್ದಾರೆ.
ಇಂಥಹ ಸಂರ್ಧದಲ್ಲಿ ಗ್ರಾಮಗಳಲ್ಲಿ ಜನ ದೇವತಾ ಕಾರ್ಯಕ್ರಮಗಳನ್ನು ಶಕ್ತಿಮೀರಿ ವಿಜೃಂಭಣೆಯಿಂದ ಮಾಡುತ್ತಿದ್ದು, ಇಂಥಹ ಕಾರ್ಯಗಳಿಗೆ ಸಹಾಯ ಮಾಡುವುದು ಈ ಮಣ್ಣಿನ ಮಗನಾದ ಆದ್ಯ ಕರ್ತವ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮದ  ಸದಸ್ಯರಾದ ಸುರೇಶ್ ರೆಡ್ಡಿ, ಮಂಜುನಾಥ್ ರೆಡ್ಡಿ, ಶ್ರೀನಿವಾಸ್, ನಾಗಭೂಶನ್, M ಶ್ರೀನಿವಾಸ್, ಬಿಜೆಪಿ ಮುಖಂಡರಾದ ಮುನಿಸ್ವಾಮಿರೆಡ್ಡಿ, ಅಪ್ಪಿ ರೆಡ್ಡಿ, ಜಯರಾಮರೆಡ್ಡಿ, D.V ಸುಬ್ರಮಣ್ಯಂ, ಶಿವಾರೆಡ್ಡಿ, ಸಂಪಂಗಿ, ಕಿರಣ್, ಯಶು, ಮಧು,ಹರೀ, ಮಂಜು ಮೊದಲಾದವರಿದ್ದರು.

Related Post

ಶೇ.೯೦ ರಷ್ಟು ದೇಶದ ಸಮುದಾಯಗಳು ಮುಖ್ಯವಾಹಿನಿ ಮಾದ್ಯಮಗಳಲ್ಲಿ, ಕಾರ್ಪೋರೇಟ್ ವಿಭಾಗದಲ್ಲಿ ಮತ್ತು ಅತ್ಯುನ್ನತ ಸರ್ಕಾರಿ ಹುದ್ದೆಗಳಲ್ಲಿ ಭಾಗವಹಿಸುವಿಕೆ ಇಲ್ಲ! : ರಾಹುಲ್ ಗಾಂಧಿ
ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಅನ್ಯಾಯ ಮಾಡಿವೆ : ಸಮುದಾಯ ಮುಖಂಡರ ಆಕ್ರೋಶ,
ಸಂವಿಧಾನ ಉಳಿಸಲು ದೇಶದ ಸಮಗ್ರತೆ ಕಾಪಾಡಲು ಬಿಜೆಪಿಯನ್ನು ಸೋಲಿಸಿ: ಮಂಜುನಾಥ್ ಅಣ್ಣಯ್ಯ

Leave a Reply

Your email address will not be published. Required fields are marked *

You missed

error: Content is protected !!