• Fri. Mar 29th, 2024

ನೂತನ ನ್ಯಾಯಾಧೀಶರಾಗಿ ಆಯ್ಕೆಯಾಗಿರುವ ಎನ್.ಗಾಯತ್ರಿರಿಗೆ ಶಾಸಕ ಎಸ್.ಎನ್.ರಿಂದ ಸನ್ಮಾನ.

PLACE YOUR AD HERE AT LOWEST PRICE

ನೂತನ ನ್ಯಾಯಾಧೀಶರಾಗಿ ಆಯ್ಕೆಯಾಗಿರುವ ಕುಮಾರಿ ಎನ್.ಗಾಯತ್ರಿ ರವರಿಗೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ  ಕಾರಹಳ್ಳಿಯಲ್ಲಿ ಸನ್ಮಾನ ಮಾಡಿ ಗೌರವ ಸಲ್ಲಿಸಿದರು.

ಶಾಸಕರು  ನಾರಾಯಣಪುರ ಗ್ರಾಮದ ಕುಮಾರಿ ಎನ್.ಗಾಯತ್ರಿ ರವರು ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಕಾರಹಳ್ಳಿಯ ಅವರ  ನಿವಾಸಕ್ಕೆ ತೆರಳಿ ಆತ್ಮೀಯವಾಗಿ ಅಭಿನಂದಿಸಿದರು.

ಈ ವೇಳೆ ಮಾತನಾಡಿದ ಅವರು ಕುಮಾರಿ ಗಾಯಿತ್ರಿರವರು ಅತ್ಯಂತ ಕಿರಿಯ ವಯಸ್ಸಿನಲ್ಲೇ ನ್ಯಾಯಾಧೀಶೆಯಾಗಿರುವುದಕ್ಕೆ ಸಂತಸವಾಗುತ್ತಿದೆ. ನ್ಯಾಯಾಸದೀಶೆಯಾಗಿ ಆಯ್ಕೆಯಾಗಿ ಕ್ಷೇತ್ರಕ್ಕೆ ಕೀರ್ತಿ ತಂದ ಕುಮಾರಿ ಗಾಯತ್ರಿ ರವರ ಸಾಧನೆ ಅನನ್ಯ ಎಂದು ಬಣ್ಣಿಸಿದರು.

ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಹಂತದಿಂದ ಪದವಿತರನಕ ಓದಿ ಕಾನೂನು ಪದವಿ ಮಾಡಿ ತನ್ನ 25ನೇ ವಯಸ್ಸಿಗೇ ನ್ಯಾಯಾದೀಶೆಯಾಗಿ ಆಯ್ಕೆಯಾಗಿರುವ ಗಾಯಿತ್ರಿರವರು ಈ ಕ್ಷೇತ್ರದ ಮತ್ತು ಜಿಲ್ಲೆಯ ವಿದ್ಯಾರ್ಥಿಗಳಿಗೆ ಮತ್ತು ಜನತೆಗೆ ಮಾದರಿಯಾಗಿದ್ದಾರೆ ಎಂದರು.

ಈ‌ ಸಂದರ್ಭದಲ್ಲಿ ಕುಮಾರಿ ಗಾಯತ್ರಿ ರವರ ತಂದೆ ನಾರಾಯಣಸ್ವಾಮಿ, ತಾಯಿ ವೆಂಕಟರತ್ನಮ್ಮ, ,ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಪಿಚ್ಚಹಳ್ಳಿ ಗೋವಿಂದರಾಜು, ಜಿ.ಆರ್.ಸೂಪರ್ ಮಾರ್ಕೆಟ್ ನ ಗೋಪಾಲರೆಡ್ಡಿ ಕರವೇ ಮುಖಂಡ ಕಣಿಂಬೆಲೆ ರಾಮಪ್ರಸಾದ್ ಮೊದಲಾದವರಿದ್ದರು..

Leave a Reply

Your email address will not be published. Required fields are marked *

You missed

error: Content is protected !!