• Fri. Mar 29th, 2024

ಡಿಸಿಸಿ ಬ್ಯಾಂಕ್ ಮಹಿಳೆಯರ ಸಬಲೀಕರಣಕ್ಕೆ ಸಹಕಾರಿ: ಎಂ.ರೂಪಕಲಾ.

PLACE YOUR AD HERE AT LOWEST PRICE

 ಕೆಜಿಎಫ್ ವಿಧಾನ ಸಭಾ ಕ್ಷೇತ್ರದಲ್ಲಿ ಮಹಿಳೆಯರನ್ನು ಮುಖ್ಯ ವಾಹಿನಿಗೆ ತಂದು ಸ್ವಾವಲಂಭಿ ಜೀವನ ನಡೆಸಿಕೊಳ್ಳಲು ಡಿಸಿಸಿ ಬ್ಯಾಂಕ್ ಮೂಲಕ ನೂರಾರು ಕೋಟಿ ರೂ., ಹಣವನ್ನು ಬಡ್ಡಿ ರಹಿತ ಸಾಲವನ್ನಾಗಿ ನೀಡಲಾಗಿದೆ ಎಂದು ಶಾಸಕಿ ಎಂ.ರೂಪಕಲಾ ಹೇಳಿದರು.
ಅವರು ಬೇತಮಂಗಲ ಗ್ರಾಮದ ಹೊಸ ಬಡಾವಣೆಯ 8ನೇ ಬ್ಲಾಕ್ ಹಾಗೂ ಜಕ್ಕರಸನಕುಪ್ಪ ಗ್ರಾಮದಲ್ಲಿ ಓಂ ಶಕ್ತಿ
ಮಾಲಾಧಾರೆಗಳಿಗೆ ಉಚಿತ ಬಸ್‍ಗೆ ಚಾಲನೆ ನೀಡಿ ಮಾತನಾಡಿದರು.
 ಧಾರ್ಮಿಕ ಕ್ಷೇತ್ರಗಳ ದರ್ಶನ ಪಡೆಯಬೇಕೆಂದು ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ, ಓಂ ಶಕ್ತಿ ಮಾಲಾಧರಿಗಳ ಊಟದ ಖರ್ಚಿಗೆ ಶಾಸಕರು ಆರ್ಥಿಕವಾಗಿ ಸಹಾಯ ಹಸ್ತ ಚಾಚಿ ಶುಭ ಹಾರೈಸಿದರು.
ಮಾಲದಾರಿಗಳು 2 ದಿನ ಪ್ರವಾಸ ಕೈಗೊಳ್ಳಲು ಅವಕಾಶವಿದ್ದು, 5 ಪುಣ್ಯ ಕ್ಷೇತ್ರಗಳ ದರ್ಶನ ಪಡೆದುಕೊಳ್ಳಲು ತಿಳಿಸಿ ಯಾತ್ರಿಗಳಿಗೆ ಶುಭ ಹಾರೈಸಿದರು.
 ಉಚಿತ ಬಸ್ ಸೌಕರ್ಯ ಕಲ್ಪಿಸಿದ ಶಾಸಕರಿಗೆ ಮಾಲಾದಾರಿಗಳು ಹರಿಶಿನ-ಕುಂಕುಮ ಕೊಟ್ಟು, ಶಾಲು ಹೊದಿಸಿ, ಹಣ್ಣು ಹಂಪಲು ನೀಡಿ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ನದೀಶ್, ಗ್ರಾಪಂ ಸದಸ್ಯರಾದ ಡೈರಿ ಮಂಜುನಾಥ್, ರೇಣುಕಾ ಸೋಮಣ್ಣ, ವಿನು ಕಾರ್ತಿಕ್, ಸುರೇಂದ್ರ ಗೌಡ, ಇನ್ನಾಯಿತ್ ಉಲ್ಲಾ, ಜಕ್ಕರಸನಕುಪ್ಪ ಗ್ರಾಪಂ ಅಧ್ಯಕ್ಷ ಚಂದ್ರಪ್ಪ, ದಲಿತ
ಜನ ಸೇನೆ ಜಿಲ್ಲಾಧ್ಯಕ್ಷ ಚಂದ್ರಶೇಖರ್, ಪಿಎಲ್‍ಡಿ ಬ್ಯಾಂಕ್ ಮಾಜಿ ನಿರ್ದೇಶಕ ಬೆನ್ನವಾರ ವೆಂಕಟೇಶ, ಎಪಿಎಂಸಿ ಮಾಜಿ ನಿರ್ದೇಶಕಿ ಯಶೋಧಮ್ಮ ಶ್ರೀನಿವಾಸ ರೆಡ್ಡಿ, ಶ್ರೀನಿವಾಸ ರೆಡ್ಡಿ ಗ್ರಾಮದ ಮುಖಂಡರು ಇದ್ದರು.

Leave a Reply

Your email address will not be published. Required fields are marked *

You missed

error: Content is protected !!