• Fri. Apr 19th, 2024

PLACE YOUR AD HERE AT LOWEST PRICE

ಬಂಗಾರಪೇಟೆ ತಾಲ್ಲೂಕು ಕಾಮಸಮುದ್ರ ಹೋಬಳಿಯ ಬಿಸಾನತ್ತಂ ರೈಲ್ವೆ ನಿಲ್ದಾಣ ಆಂದ್ರ ಪ್ರದೇಶದ ಗಡಿಗೆ ಹೊಂದಿಕೊಂಡಿರುವ ಕರ್ನಾಟಕದ ಗಡಿ ನಿಲ್ದಾಣವಾಗಿದ್ದು, ಸಂಸದ ಎಸ್.ಮುನಿಸ್ವಾಮಿರಿಂದಾಗಿ ಇಲ್ಲಿ ಎಲ್ಲಾ ರೀತಿಯ ಟಿಕೆಟ್ ಗಳಲ್ಲಿ ತೆಲುಗು ಭಾಷೆಗೆ ಬದಲು ಕನ್ನಡ ಭಾಷೆಯಲ್ಲಿ ಬರುವಂತಾಗಿದೆ.

ಎಷ್ಟೋ ವರ್ಷಗಳ ನಂತರ ಇಂದು ಮದ್ಯಾನ್ಹ ಮುದ್ರಣಗೊಂಡ ರೈಲು ಟಿಕೆಟ್ ನಲ್ಲಿ ತೆಲುಗು ಭಾಷೆಗೆ ಬದಲು ಕನ್ನಡ ಮುದ್ರಣವಾಗಿರುವುದನ್ನು ಕಂಡು ಜನ ಸಂತೋಷ ವ್ಯಕ್ತಪಡಿಸಿ ಸಿಹಿ ಹಂಚಿ ಸಂಸದರಿಗೆ ಮತ್ತು ರೈಲ್ವೆ ಸಚಿವರಿಗೆ ಹಾಗೂ ಇಲಾಖೆಗೆ ಅಭಿನಂದನೆ ಸಲ್ಲಿಸಿದರು.

ಈ ರೈಲ್ವೆ ನಿಲ್ದಾಣವು ಕರ್ನಾಟಕಕ್ಕೆ ಸೇರಿದೆಯಾದರೂ ಇಲ್ಲಿ ಮೊದಲಿನಿಂದಲೂ ಎಲ್ಲಾ ಟಿಕೆಟ್ ಗಳು ತೆಲುಗು, ಹಿಂದಿ ಮತ್ತು ಇಂಗ್ಲೀಷ್ ಮೂರೂ ಭಾಷೆಗಳನ್ನೊಳಗೊಂಡಂತೆ ಅಚ್ಚಾಗುತ್ತಿದ್ದವು. ಕನ್ನಡ ಭಾಷೆ ಇಲ್ಲದ ಬಗ್ಗೆ ಸ್ಥಳೀಯರು ಅನೇಕ ಬಾರಿ ರೈಲ್ವೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು.

ಆದರೆ ಕನ್ನಡ ನಾಡಿನ ಈ ರೈಲು ನಿಲ್ದಾಣದಲ್ಲಿ ಮಾತ್ರ ತೆಲುಗು ಭಾಷೆಯಲ್ಲಿ ಟಿಕೆಟ್ ಮುಂದುವರೆದಿತ್ತು. ಈ ಬಗ್ಗೆ ಸ್ಥಳೀಯರು ಸಂಸದ ಎಸ್.ಮುನಿಸ್ವಾಮಿರ ಗಮನಕ್ಕೆ ತಂದು ಕನ್ನಡ ಭಾಷೆಯಲ್ಲಿ ಟಿಕೆಟ್ ಮುದ್ರಣವಾಗುವಂತೆ ಮಾಡಲು ಮನವಿ ಮಾಡಿದ್ದರ ಪರಿಣಾಮ ಇಂದು ಫಲ ನೀಡಿದೆ.

ಸಂಸದ ಎಸ್.ಮುನಿಸ್ವಾಮಿ ದಿನಾಂಕ:12-12-2022 ರಂದು ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ರಿಗೆ ಪತ್ರ ಬರೆದು ಬಿಸಾನತ್ತಂ ರೈಲು ನಿಲ್ದಾವು ಕರ್ನಾಟಕಕ್ಕೆ ಸೇರಿದ್ದು ಇಲ್ಲಿ ಟಿಕೆಟ್ ತೆಲುಗು ಭಾಷೆಗೆ ಬದಲಾಗಿ ಕನ್ನಡದಲ್ಲಿ ಮುದ್ರಣಗೊಳ್ಳುವಂತೆ ಕ್ರಮಕ್ಕೆ ಮನವಿ ಮಾಡಿದ್ದರು.

ಜೊತೆಗೆ ಒಂದೇ ಭಾರತ್ ರೈಲನ್ನು ಬಂಗಾರಪೇಟೆ ಮತ್ತು ಮಾಲೂರು ನಿಲ್ದಾಣಗಳಲ್ಲಿ ನಿಲುಗಡೆಗೊಳಿಸುವುದು, ಸಬ್ ಅರ್ಬನ್ ರೈಲನ್ನು ಬಂಗಾರಪೇಟೆಯಿಂದ ವೈಟ್ ಫೀಲ್ಡ್ ವರೆಗೆ ಓಡಿಸಲು ರೈಲ್ವೆ ಸಚಿವರನ್ನು ಮನವಿ ಮಾಡಿದ್ದರು.

ಸಂಸದರ ಮನವಿಯ ಫಲವಾಗಿ ಕನ್ನಡ ನಾಡಿನ ಗಡಿ ರೈಲ್ವೆ ನಿಲ್ದಾಣದಲ್ಲಿ ಎಷ್ಟೋ ವರ್ಷಗಳ ನಂತರ ಕನ್ನಡ ಕಂಡಂತಾಗಿದ್ದು ಇದು ಗಡಿನಾಡಲ್ಲಿ ಕನ್ನಡವನ್ನು ಉಳಿಸುವಂತಹ ಮಹತ್ತರವಾದ ಸಾಧನೆಯಾಗಿದೆ ಎಂದು ಅಲ್ಲಿನ ಜನ ಸಂತಸ ವ್ಯಕ್ತಪಡಿಸಿದ್ದಾರೆ.


ಸುಮಾರು 15 ವರ್ಷಗಳಿಂದ ಟಿಕೆಟ್ ನಲ್ಲಿ ಕನ್ನಡ ಭಾಷೆಗಾಗಿ ಅರ್ಜಿಗಳನ್ನು ನೀಡುತ್ತಾ ಬರುತ್ತಿದ್ದು ಈಗಿನ ಉತ್ತಮ ಬದಲಾವಣೆಗೆ ಸಂಸದ ಎಸ್.ಮುನಿಸ್ವಾಮಿ ಮತ್ತು ರೈಲ್ವೆ ಅಧಿಕಾರಿ ಪ್ರದೀಪ್ ನಾಯ್ಡು ಮುಖ್ಯ ಕಾರಣಕರ್ತರಾಗಿದ್ದು ಈ ಇಬ್ಬರಿಗೂ ವಿಶೇಷ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಗ್ರಾಮಸ್ಥರು ತಿಳಿಸಿದರು.

ಈ ಸಂತೋಷದ ಸಂದರ್ಭದಲ್ಲಿ ಮಾರಿಕುಪ್ಪಂ ರೈಲ್ವೆ ನಿಲ್ದಾಣದ ಕನ್ನಡ ಪ್ರೇಮಿ ಸ್ಷೇಷನ್ ಮಾಸ್ಟರ್ ರಮೇಶ್ ಗೌಡ, ರೈಲ್ವೆ ಅಧಿಕಾರಿಗಳಾದ ಪ್ರದೀಪ್ ನಾಯ್ಡು, ಟಿ.ರಮೇಶ್, ಶೇಖರ್ ಮೊದಲಾದವರಿದ್ದರು.

Related Post

ಶೇ.೯೦ ರಷ್ಟು ದೇಶದ ಸಮುದಾಯಗಳು ಮುಖ್ಯವಾಹಿನಿ ಮಾದ್ಯಮಗಳಲ್ಲಿ, ಕಾರ್ಪೋರೇಟ್ ವಿಭಾಗದಲ್ಲಿ ಮತ್ತು ಅತ್ಯುನ್ನತ ಸರ್ಕಾರಿ ಹುದ್ದೆಗಳಲ್ಲಿ ಭಾಗವಹಿಸುವಿಕೆ ಇಲ್ಲ! : ರಾಹುಲ್ ಗಾಂಧಿ
ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಅನ್ಯಾಯ ಮಾಡಿವೆ : ಸಮುದಾಯ ಮುಖಂಡರ ಆಕ್ರೋಶ,
ಸಂವಿಧಾನ ಉಳಿಸಲು ದೇಶದ ಸಮಗ್ರತೆ ಕಾಪಾಡಲು ಬಿಜೆಪಿಯನ್ನು ಸೋಲಿಸಿ: ಮಂಜುನಾಥ್ ಅಣ್ಣಯ್ಯ

Leave a Reply

Your email address will not be published. Required fields are marked *

You missed

error: Content is protected !!