• Thu. Apr 25th, 2024

ರೇಣುಕಾ ಯಲ್ಲಮ್ಮ ಜ್ಯೋತಿ ಮತ್ತು ಸಮಾವೇಶಕ್ಕೆ ಮಹತ್ವದ ನಿರ್ಣಯ , ಶೀಘ್ರದಲ್ಲೇ ದಿನಾಂಕ ಮತ್ತು ಸ್ಥಳ ಪ್ರಕಟ

PLACE YOUR AD HERE AT LOWEST PRICE

 

ರೇಣುಕಾ ಯಲ್ಲಮ್ಮ ಜ್ಯೋತಿ ಮತ್ತು ಸ್ವಾಭಿಮಾನಿ ಸಮಾವೇಶಕ್ಕೆ ಪ್ರತಿ ಗ್ರಾಮದಲ್ಲಿರುವ ಬಳಗದ ಜನರಿಗೆ ಮಾಹಿತಿ ಒದಗಿಸಿ ಅಮ್ಮನ ದರ್ಶನ ಮತ್ತು ಸಮಾವೇಶಕ್ಕೆ ಆಗಮಿಸುವ ವ್ಯವಸ್ಥೆಯನ್ನು ಕೈಗೊಳ್ಳಲು ತೀರ್ಮಾನಿಸಲಾಗಿದೆ.

ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ರೇಣುಕಾ ಯಲ್ಲಮ್ಮ ಬಳಗದ ಕೋಲಾರ ತಾಲ್ಲೂಕು ಮಟ್ಟದ ಸಭೆಯಲ್ಲಿ
ಕೋಲಾರ ತಾಲ್ಲೂಕಿನ ವಿವಿಧ ಹೋಬಳಿ ಹಾಗೂ ಗ್ರಾಮ ಪಂಚಾಯ್ತಿಗಳಿoದ ಆಗಮಿಸಿದ್ದ ಯಲ್ಲಮ್ಮ ಬಳಗದ ಮುಖಂಡರು ಚರ್ಚೆ ನಡೆಸಿದರು.

ಸವದತ್ತಿಯಿಂದ ಜ್ಯೋತಿಯನ್ನು ಜಿಲ್ಲೆಗೆ ತರಿಸಿ ರೇಣುಕಾ ಯಲ್ಲಮ್ಮ ಬಳಗದ ಜನಸಂಖ್ಯೆ ಹೆಚ್ಚಿರುವ ಕಡೆ ಸಮುದಾಯದ ಜನರು ದೊಡ್ಡ ಮಟ್ಟದಲ್ಲಿ ಜಮಾವಣೆಗೊಂಡು ತಾಲ್ಲೂಕ ಮಟ್ಟದಲ್ಲಿ ಅದ್ದೂರಿಯಾಗಿ ಸ್ವಾಗತ ಕೋರಲು ಆಯಾ ಪ್ರದೇಶದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಜವಾಬ್ದಾರಿ ವಹಿಸಿಕೊಂಡು ಹೋಬಳಿ ಮಟ್ಟ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಸಂಚಾರ ಮಾಡಿ ಅಮ್ಮನ ದರ್ಶನವನ್ನು ಪಡೆಯಲು ಬಳಗದ ಜನರಿಗೆ ಅನುಕೂಲ ಮಾಡಿಕೊಡುವ ಉದ್ದೇಶವನ್ನು ಪ್ರಸ್ತಾಪಿಸಲಾಯಿತು. ಇದಕ್ಕೆ ಸಭೆಯಲ್ಲಿ ಎಲ್ಲರೂ ಒಮ್ಮತದಿಂದ ಒಕ್ಕೊರಲಿನಿಂದ ಸಮ್ಮತಿಸಿದ ಹಿನ್ನಲೆಯಲ್ಲಿ, ಈ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿ ರೇಣುಕಾ ಯಲ್ಲಮ್ಮ ಬಳಗದ ಸ್ವಾಭಿಮಾನಿ ಸಮಾವೇಶದ ದಿನಾಂಕ ಮತ್ತು ಸಮಾವೇಶದ ಸ್ಥಳವನ್ನು ಕಾರ್ಯಕಾರಿ ಸಮಿತಿ ಶೀಘ್ರದಲ್ಲೇ ಪ್ರಕಟಿಸಲು ನಿರ್ಣಯ ಕೈಗೊಳ್ಳಲಾಯಿತು.

ಪ್ರಸ್ತುತ ಯಲ್ಲಮ್ಮ ಬಳಗದ ಸ್ವಾಭಿಮಾನಿ ಜಿಲ್ಲಾ ಸಮಾವೇಶವನ್ನು ನಡೆಸುವುದು ಸೂಕ್ತವಾಗಿದ್ದು, ಎಲ್ಲಾ ರೀತಿಯ ಸಕಲ ಸಿದ್ಧತೆಗಳನ್ನು ಕೈಗೊಳ್ಳಲು ಬಳಗದ ಸಂಘಟನೆಗೆ, ಬಳಗದ ಜನಪ್ರತಿನಿಧಿಗಳಿಗೆ ಮಾಹಿತಿ ಒದಗಿಸಿ ಸಭೆಗೆ ಆಹ್ವಾನಿಸುವುದು ಮತ್ತು ಸಮಾವೇಶಕ್ಕೆ ಜವಾಬ್ದಾರಿಗಳನ್ನು ವಹಿಸುವುದು ಸೂಕ್ತವೆಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

ಸಭೆಯಲ್ಲಿ ರೇಣುಕಾ ಯಲ್ಲಮ್ಮ ಬಳಗದ ಜಿಲ್ಲಾಧ್ಯಕ್ಷ ಬಂಡೂರು ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಬೆಳ್ಳಾರಪ್ಪ. ಜಿಲ್ಲಾ ಗೌರವಾಧ್ಯಕ್ಷ ಪ್ರಸನ್ನ ಕುಮಾರ್, ಜಿಲ್ಲಾ ಉಪಾಧ್ಯಕ್ಷ ಡಾ. ನಾರಾಯಣ್, ದಲಿತ ಸಂಘಟನೆಗಳ ಮುಖಂಡ ಡಾ.ಎಂ.ಚ0ದ್ರಶೇಖರ್, ಡಿಪಿಎಸ್.ಮುನಿರಾಜು, ಸಮುದಾಯದ ಹಿರಿಯ ಮುಖಂಡ ಕೆ.ಜಯದೇವ್, ಕೋಲಾರ ತಾಲ್ಲೂಕು ಅಧ್ಯಕ್ಷ ಕೊಡಿಯಪ್ಪ, ಆಟೋ ನಾರಾಯಣಸ್ವಾಮಿ, ವಿ.ಕೆ.ರಾಜೇಶ್, ದಲಿತ ನಾರಾಯಣಸ್ವಾಮಿ, ತಾಲ್ಲೂಕು ಕಾರ್ಯದರ್ಶಿ ಜಗನ್ನಾಥ್, ಕರವೇ ಕದಂಬ ಸೇನೆ ಅಧ್ಯಕ್ಷ ಸೋಮಣ್ಣ, ಯುವ ಮುಖಂಡ ಅನಿಲ್‌ಕುಮಾರ್(ಅಯ್ಯಾ), ಮತ್ತಿಕುಂಟೆ ಕೃಷ್ಣ, ಮಿಲ್ಟಿ ರಾಮಯ್ಯ, ಅಂಬೇಡ್ಕರ್ ನಗರ ಮಂಜುನಾಥ್, ಹುಣಸನಹಳ್ಳಿ ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.

 

Related Post

ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ
ತಳಸಮುದಾಯವರು ಇಂದಿನ ಸುಳ್ಳುಗಳ ಜೊತೆಗೆ ಟ್ಯಾಗ್ ಆಗುತ್ತಿರುವುದು ದುರಂತ – ಎಲ್.ಎನ್.ಮುಕು0ದರಾಜ್
ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ರವರಿಗೆ ಜಿಲ್ಲಾ ದಲಿತ ಸಂಘಟನೆಗಳ ಸಂಯುಕ್ತ ರಂಗ ಬೆಂಬಲ : ಡಾ.ಎಂ. ಚಂದ್ರಶೇಖರ್

Leave a Reply

Your email address will not be published. Required fields are marked *

You missed

error: Content is protected !!