PLACE YOUR AD HERE AT LOWEST PRICE
ಬಂಗಾರಪೇಟೆ ಪಟ್ಟಣದ ಬಾಯ್ಸ್ ಜೂನಿಯರ್ ಕಾಲೇಜ್ ಆವರಣದಲ್ಲಿ ಸಮೂಹ ಸಂಪನ್ಮೂಲ ದೇಶಿಹಳ್ಳಿ ಶಾಲೆಯ ವಿದ್ಯಾರ್ಥಿಗಳ ಕಲಿಕಾ ಹಬ್ಬವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಶಂಕರಪ್ಪ ವಹಿಸಿದ್ದರು.
ಈ ವೇಳೆ ಶಂಕರಪ್ಪ ಮಾತನಾಡುತ್ತಾ, ವಿದ್ಯಾರ್ಥಿಗಳಲ್ಲಿ ನಾನಾ ರೀತಿಯ ವಿಶೇಷ ಜ್ಞಾನ ಬಂಡಾರ ಶಕ್ತಿ ಇದೆ. ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಲು ಸರ್ಕಾರ ಇಂತಹ ಉತ್ತಮವಾದ ಕೆಲಸವನ್ನು ಮಾಡುತ್ತಿದೆ.
ವಿದ್ಯಾರ್ಥಿಗಳು ನಾನಾ ರೀತಿಯ ವಸ್ತುಗಳನ್ನು ತಂದು ತಮ್ಮ ಸ್ವಂತ ಕೈಯಿಂದ ತಯಾರಿಸಿ ಶಿಕ್ಷಕರಿಗೆ ಹಾಳೆಯಲ್ಲಿ ಕಿರೀಟಗಳನ್ನು ನೀಡಿ ಗೌರವಿಸುತ್ತಿರುವುದು ನಮಗೆ ಬಹಳ ಸಂತೋಷ ತಂದಿದೆ ಎಂದರು.
ಇನ್ನು ಕೆಲವರು ಹಾಳೆಗಳ ಮೇಲೆ ಹೂವಿನ ಚಿತ್ರಗಳ ರಚನೆ, ಮರ ಗಿಡಗಳ ರಚನೆ, ಪ್ರಕೃತಿಗೆ ಸಂಬಂಧಪಟ್ಟ ಚಿತ್ರ ರಚನೆ ಹಾಗೂ ಕೆಲವರು ವಿವಿಧ ಕಲಾ ಕೃತಿಯನ್ನು ತಯಾರಿಸಿ ಮೆಚ್ಚುಗೆಗೆ ಪಾತ್ರರಾಗಿರುವುದು ಹೆಮ್ಮೆಯ ವಿಚಾರವಾಗಿದೆ.
ಮುಖ್ಯ ಅತಿಥಿಗಳಾಗಿ ಆದರ್ಶ ಶಾಲೆಯ ಮುಖ್ಯ ಶಿಕ್ಷಕರಾದ ಎಂ. ಕೆ. ಶಶಿಕಲಾ, ಸಿಆರ್ಪಿ ದೇಶಿಹಳ್ಳಿ ವೆಂಕಟೇಶಪ್ಪ, ಕೆ.ಎನ್.ಲಲಿತ, ಸುಮಿತ್ರ, ರಾಧಾ, ರಾಜೇಶ್ವರಿ, ವೆಂಕಟೇಶಪ್ಪ, ರಮೇಶ್, ಚಂದ್ರಪ್ಪ, ವಿಜಯ್ ಕುಮಾರ್, ಮಂಜುನಾಥ್, ಚಂದ್ರಶೇಖರ್, ಪ್ರಭು, ಪ್ರಸಾದ್ ಹಾಗೂ ದೇಶಿಹಳ್ಳಿ ಕ್ಲಸ್ಟರ್ ನ ಎಲ್ಲಾ ಶಿಕ್ಷಕರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.