PLACE YOUR AD HERE AT LOWEST PRICE
ಕೋಲಾರ ಜಿಲ್ಲೆಗೆ ಹೊಸದಾಗಿ ಹಂಚಿಕೆಯಾಗಿರುವ ೦೩ ಹೆದ್ದಾರಿ ಗಸ್ತು ವಾಹನಗಳನ್ನು ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಹಸಿರು ನಿಶಾನೆ ತೋರಿಸುವ ಮೂಲಕ ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಎಂ ಚಾಲನೆ ನೀಡಿದರು.
ನಂತರ ಜಿಲ್ಲೆಯಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಮತ್ತು ಹೊಸದಾಗಿ ಹಂಚಿಕೆಯಾಗಿರುವ ಹೆದ್ದಾರಿ ಗಸ್ತು ವಾಹನಗಳ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಉದ್ದೇಶಿಸಿ ಮಾತನಾಡಿ, ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು, ಅಪಘಾತಗಳು ಸಂಭವಿಸಿದಾಗ ತುರ್ತಾಗಿ ಸ್ಪಂದಿಸುವುದು ಮತ್ತು ಅವಶ್ಯವಿದಲ್ಲಿ “ಗೋಲ್ಡ್ನ್ ಅವರ್”ನಲ್ಲಿ ಆಸ್ಪತ್ರೆಗೆ ದಾಖಲಿಸಲು ಕ್ರಮಕೈಗೊಳ್ಳಲು ಸೂಚಿಸಿದರು.
೧೧೨ ತುರ್ತುಸ್ಪಂದನ ವಾಹನದ ಅಧಿಕಾರಿ/ಸಿಬ್ಬಂದಿಗಳನ್ನು ಉದ್ದೇಶಿಸಿ ಮಾತನಾಡಿ, ೧೧೨ ಕರೆಗಳ ದೂರನ್ನು ಸ್ವೀಕರಿಸಿದ ತಕ್ಷಣ ಸ್ಪಂದಿಸಿ ಅಗತ್ಯ ಕ್ರಮಕೈಗೊಳ್ಳುವಂತೆ ಸೂಚಿಸಿದರು. ಕೋಲಾರ ಜಿಲ್ಲೆಯಲ್ಲಿ ಈಗಾಗಲೆ ೧೧೨ ತುರ್ತುಸ್ಪಂದನ ವ್ಯವಸ್ಥೆ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಅದರ ಸದುಪಯೋಗ ಪಡೆಯುವಂತೆ ಸಾರ್ವಜನಿಕರಲ್ಲಿ ಕೋರಿದರು.
ಈ ಸಂದರ್ಭದಲ್ಲಿ ಎ.ಎ.ಒ ರವಿಕುಮಾರ್, ಆರ್.ಪಿ.ಐ ಮಹಾಲಿಂಗಪ್ಪ ಜುಮನಾಳ್, ಪಿ.ಐ ಶಿವಕುಮಾರ್, ಪಿ.ಎಸ್.ಐ ಕಂಟ್ರೋಲ್ ರೂಂ ಶಬಾಜ್ ಅಹಮದ್ ಮತ್ತು ಆಪ್ತಸಹಾಯಕ ನಾಗರಾಜ್ ಉಪಸ್ಥಿತರಿದ್ದರು.