• Thu. Apr 25th, 2024

PLACE YOUR AD HERE AT LOWEST PRICE

ಕೆಜಿಎಫ್ ತಾಲ್ಲೂಕ ಬೇತಮಂಗಲ ಹೋಬಳಿ  ಶ್ರೀನಿವಾಸಸಂದ್ರ ಗ್ರಾಪಂ ವ್ಯಾಪ್ತಿಯ ಮೇಲುಪಲ್ಲಿ ಗಂಗಮಾಂಭ ದೇಗುಲ ಜಾತ್ರಾ ಮಹೋತ್ಸವ ಪ್ರಯುಕ್ತ ಪುಷ್ಪ ಪಲ್ಲಕ್ಕಿ ಹಾಗೂ ಮನರಂಜನಾ ಕಾರ್ಯಕ್ರಮವು ವಿಜೃಂಭನೆಯಿಂದ ನಡೆಯಿತು.
ಗಂಗಮಾಂಭ ದೇಗುಲದಲ್ಲಿ ಜ.19ರಿಂದ ವಿವಿಧ ಕಾರ್ಯಕ್ರಮಗಳು ನಡೆಯುತ್ತಿದ್ದು, ಕಬ್ಬಡಿ ಪಂದ್ಯಾವಳಿಯ ವಿಜೇತರಿಗೆ ವೇದಿಕೆಯಲ್ಲಿ ನಗದು ಬಹುಮಾನ, ಟ್ರೋಪಿಗಳನ್ನು ವಿತರಣೆ ಮಾಡಲಾಯಿತು.
ಈ ಭಾಗದ ಪ್ರಭಾವಿ ಮುಖಂಡರು ಜಿಪಂ ಮಾಜಿ ಸದಸ್ಯರಾದ ಜಯಪ್ರಕಾಶ್ ನಾಯ್ಡು ಕಬ್ಬಡಿ ವಿಜೇತ ತಂಡಗಳಿಗೆ 50
ಸಾವಿರ ರೂ., ಟ್ರೋಪಿಗಳನ್ನು ಕೊಡುಗೆಯಾಗಿ ನೀಡಿದರು.
ಆರ್ಕೇಸ್ಟ್ರಾ ಕಾರ್ಯಕ್ರಮವನ್ನು ಜಯಪ್ರಕಾಶ್ ನಾಯ್ಡು ಮತ್ತು ಬಿಜೆಪಿ ಟಿಕೇಟ್ ಆಕಾಂಕ್ಷಿ ವಿ.ಮೋಹನ್ ಕೃಷ್ಣ ಆಯೋಜಿಸಿದ್ದರು. ಕೆಡಿಎ ಮಾಜಿ ಅಧ್ಯಕ್ಷ ಮುನಿರತ್ನಂ ನಾಯ್ಡು, ಗ್ರಾಪಂ ಮಾಜಿ ಅಧ್ಯಕ್ಷ ನವೀಣ್ ರಾಮ್ ಹಾಗೂ ಅನೇಕರು ಆರ್ಥಿಕ ನೆರವು ನೀಡಿದ್ದಾರೆ.
ಈ ವೇಳೆ ಬಿಜೆಪಿ ಮುಖಂಡ ವಿ.ಮೋಹನ್ ಕೃಷ್ಣ ಮಾತನಾಡಿ, ಪ್ರತಿವರ್ಷವೂ ಈ ದೇವಿಯ ಜಾತ್ರೆಯನ್ನು ಆದ್ದೂರಿಯಾಗಿ ಮಾಡಲಾಗುತ್ತಿದೆ. ದೇಗುಲ ಗಡಿ ಭಾಗದಲ್ಲಿದ್ದು, ಮುಂದಿನ ವರ್ಷ ಇನ್ನೂ ಆದ್ದೂರಿಯಾಗಿ ಆಚರಿಸಲು ಸಹಕಾರ ನೀಡುವುದಾಗಿ ಭರವಸೆ ಕೊಟ್ಟರು.
ದೇವಿಯ ಅನುಗ್ರಹದಿಂದ ಒಳ್ಳೆಯ ಮಳೆ-ಬೆಳೆಯಾಗಿ ರೈತರು ಸಂವೃಧ್ಧಿ ಜೀವನ ನಡೆಸುವಂತಾಗಲಿ ನಿಮ್ಮ ಕೃಪೆಯೂ ಈ ಭಾಗದ ರೈತನ ಮಗನ ಮೇಲೆ ಇರಲಿ ಎಂದು ಮತದಾರರನ್ನು ಕೋರಿದರು.
ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಜಯಪ್ರಕಾಶ್ ನಾಯ್ಡು, ನವೀಣ್ ರಾಮ್, ಕೆಜಿಎಫ್ ಸುರೇಶ್
ನಾರಾಯಣ್ ಕುಟ್ಟಿ, ಶ್ರೀನಿವಾಸಸಂದ್ರ ಗ್ರಾಪಂ ಅಧ್ಯಕ್ಷ ರಘು, ಬೇತಮಂಗಲ ಅಧ್ಯಕ್ಷೆ ಮಮತಾಗಣೇಶ್,

ಕೇಶವಗೌಡ, ಶ್ರೀರಾಮಗೌಡ, ಗ್ರಾಪಂ ಸದಸ್ಯ ಆನಂದಗೌಡ, ರಾಜೇಂದ್ರ, ಸುಧಾಕರ್ ರೆಡ್ಡಿ, ನಕ್ಕನಹಳ್ಳಿ ಚಂದ್ರ, ಶಬರೀಶ್, ರವಿಚಂದ್ರ, ಪಾಲ್, ನೈನಾರವಿ, ಮೋಹನ್, ಗಂಗಿರೆಡ್ಡಿ, ತೇಜು, ರಾಮಕೃಷ್ಣಪ್ಪ ಹಾಗೂ ಅನೇಕ
ಮುಖಂಡರು ಇತರರು ಉಪಸ್ಥಿತರಿದ್ದರು.

Related Post

ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ
ತಳಸಮುದಾಯವರು ಇಂದಿನ ಸುಳ್ಳುಗಳ ಜೊತೆಗೆ ಟ್ಯಾಗ್ ಆಗುತ್ತಿರುವುದು ದುರಂತ – ಎಲ್.ಎನ್.ಮುಕು0ದರಾಜ್
ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ರವರಿಗೆ ಜಿಲ್ಲಾ ದಲಿತ ಸಂಘಟನೆಗಳ ಸಂಯುಕ್ತ ರಂಗ ಬೆಂಬಲ : ಡಾ.ಎಂ. ಚಂದ್ರಶೇಖರ್

Leave a Reply

Your email address will not be published. Required fields are marked *

You missed

error: Content is protected !!