PLACE YOUR AD HERE AT LOWEST PRICE
ದಾವಣಗೆರೆ ಜಿಲ್ಲೆಯಲ್ಲಿ ನಡೆದ ರಾಜ್ಯ ಕಾನೂನು ವಿವಿ ವ್ಯಾಪ್ತಿಯ ಅಂತರ ಕಾಲೇಜು ವಾಲಿಬಾಲ್ ಟೂರ್ನಿಯಲ್ಲಿ ಕೋಲಾರದ ಬಸವಶ್ರೀ ಕಾನೂನು ಕಾಲೇಜು ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದುಕೊಂಡರು.
ಬೆಂಗಳೂರಿನ ಅಲ್ ಅಮೀನ್ ಕಾಲೇಜು ವಿರುದ್ಧ ನಡೆದ ರೋಚಕ ಫೈನಲ್ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನದ ನಡುವೆಯು ಕೋಲಾರ ಬಸವಶ್ರೀ ಕಾನೂನು ಕಾಲೇಜು ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಮುಡಿಗೇರಿಸಿಕೊಂಡರು.
ಬಸವಶ್ರೀ ಕಾನೂನು ಕಾಲೇಜಿನ ಕೆ.ಎ.ಹರೀಶ್ ಬೆಸ್ಟ್ ಆಲ್ರೌಂಡರ್ ಪ್ರಶಸ್ತಿಗೆ ಭಾಜನರಾದರು. ಬಸವಶ್ರೀ ಕಾನೂನು ಕಾಲೇಜು ಕಾರ್ಯದರ್ಶಿ ಒಡೆಯರ್ ಸೇರಿದಂತೆ ತಂಡದ ಆಟಗಾರರಾದ ಮದನ್, ಹರೀಶ್, ಸತೀಶ್, ಕಿರಣ್, ಕಿಶೋರ್, ಅರ್ಜುನ್, ಉದಯಕಿರಣ್, ಮಹೇಶ್, ನಾಗ, ಗಣೇಶ್, ಲೋಕೇಶ್, ದಿಲೀಪ್, ರೋಹಿತ್ ಉಪಸ್ಥಿತರಿದ್ದರು.
ಕ್ರೀಡಾಪಟುಗಳನ್ನು ಕಾಲೇಜಿನ ವತಿಯಿಂದ ಅಭಿನಂದಿಸಿದ್ದಾರೆ.
ಸುದ್ದಿ ಓದಿ ಹಂಚಿ: