• Thu. Apr 18th, 2024

ಕೆಜಿಎಫ್: ಗ್ರಾಮಾಂತೆ ಭಾಗದಲ್ಲಿ ಮಡಿವಾಳ ಮಾಚೀದೇವರ ಜಯಂತಿ.

PLACE YOUR AD HERE AT LOWEST PRICE

ಮಡಿವಾಳ ಮಾಚಿದೇವರ ಜಯಂತೋತ್ಸವ ಪ್ರಯುಕ್ತ ಬೇತಮಂಗಲ, ಟಿ.ಗೊಲ್ಲಹಳ್ಳಿ ಗ್ರಾಪಂಯ ಜಯಮಂಗಲ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಸಡಗರ ಸಂಭ್ರಮದಿಂದ ಪಲ್ಲಕ್ಕಿಗಳೊಂದಿಗೆಮಡಿವಾಳ ಮಾಚೀದೇವರ ಜಯಂತಿ ಆಚರಿಸಿದರು.
ಬೇತಮಂಗಲದ ಗ್ರಾಪಂ ಬಳಿ ಮಡಿವಾಳ ಮಾಚಿದೇವರ ಭಾವಚಿತ್ರವಿರುವ ಪಲ್ಲಕ್ಕಿಗಳನ್ನು ವಿವಿಧ ಬಣ್ಣಗಳ ಹೂವುಗಳಿಂದ ಅಲಂಕಾರ ಮಾಡಿದ್ದರು, ಮಡಿವಾಳ ಸಮುದಾಯದ ಮತ್ತು ಎಲ್ಲ ಸಮುದಾಯದ  ಜನರು ಬೆರತು ಜಯಂತೋತ್ಸವವನ್ನು ಆಚರಿಸಿದ್ದು ಮೆರಗು ನೀಡಿತು.
ಈ ಜಯಂತೋತ್ಸವದಲ್ಲಿ ಬಿಜೆಪಿ ಟಿಕೇಟ್ ಆಕಾಂಕ್ಷಿ ವಿ.ಮೋಹನ್ ಕೃಷ್ಣ ಭಾಗವಹಿಸಿ ಪಲ್ಲಕ್ಕಿಯಲ್ಲಿ ಕೂತು ಚಾಲನೆ
ನೀಡಿದರು. ನಂತರ ಮಡಿವಾಳ ಸಮುದಾಯದ ವತಿಯಿಂದ ಅವರನ್ನು ಆತ್ಮಿಯವಾಗಿ ಸನ್ಮಾನಿಸಿ ಗೌರವಿಸಿದರು.
ಈ ವೇಳೆ ಆರ್.ಕೆ ಪೌಡೇಶನ್ ಅಧ್ಯಕ್ಷ ವಿ.ಮೋಹನ್ ಕೃಷ್ಣ ಮಾತನಾಡಿ, ಸಮುದಾಯದ ಏಳಿಗೆಗೆ ಸದಾ ಸಿದ್ಧನಿರುತ್ತೇನೆ. ಮಡಿವಾಳ ಸಮುದಾಯಕ್ಕೆ  ರಾಜಕೀಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅನ್ಯಾಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಮಮತಾ ಗಣೇಶ, ಪಿಡಿಒ ಮಂಜುನಾಥ್, ಕೆಜಿಎಫ್ ನಗರಾಧ್ಯಕ್ಷ ಕಮಲನಾಥನ್,
ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ರವಿ ರೆಡ್ಡಿ, ಮಡಿವಾಳ ಸಮುದಾಯ ಅಧ್ಯಕ್ಷ ಚಲಪತಿ, ಕಾರ್ಯದರ್ಶಿ
ವೆಂಕಟೇಶ್, ಕೋತ್ತೂರು ಶ್ರೀನಿವಾಸ್, ಗೌ.ಅಧ್ಯಕ್ಷ ಕುಟ್ಟಿ, ಖಚಾಂಚಿ ರಾಜು, ಜಯಮಂಗಲ ಸದಸ್ಯ ವೆಂಕಟೇಶಪ್ಪ, ಮದ್ದಿನಾಯಕನಹಳ್ಳಿ ಸದಸ್ಯ ವೆಂಕಟೇಶ್, ಬಡಮಾಕನಹಳ್ಳಿ ಕಾಂತರಾಜ್, ಮುಖಂಡರಾದ ಓಬಲಪ್ಪ, ನಾರಾಯಣಸ್ವಾಮಿ, ನಾಗರಾಜ್, ತೊಳಸಮ್ಮ, ರಾಧಪ್ಪ, ಚಲಪತಿ, ಆನಂದ್,ಸುಭ್ರಮಣಿ, ರಾಜೇಂದ್ರ, ತಮ್ಮಣ್ಣ, ಆಂಜಪ್ಪ, ಕುಮಾರ್ ಹಾಗೂ ಸಮುದಾಯದ ಅನೇಕ ಮುಖಂಡರು ಇತರರು ಉಪಸ್ಥಿತರಿದ್ದರು.

Related Post

ಶೇ.೯೦ ರಷ್ಟು ದೇಶದ ಸಮುದಾಯಗಳು ಮುಖ್ಯವಾಹಿನಿ ಮಾದ್ಯಮಗಳಲ್ಲಿ, ಕಾರ್ಪೋರೇಟ್ ವಿಭಾಗದಲ್ಲಿ ಮತ್ತು ಅತ್ಯುನ್ನತ ಸರ್ಕಾರಿ ಹುದ್ದೆಗಳಲ್ಲಿ ಭಾಗವಹಿಸುವಿಕೆ ಇಲ್ಲ! : ರಾಹುಲ್ ಗಾಂಧಿ
ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಅನ್ಯಾಯ ಮಾಡಿವೆ : ಸಮುದಾಯ ಮುಖಂಡರ ಆಕ್ರೋಶ,
ಸಂವಿಧಾನ ಉಳಿಸಲು ದೇಶದ ಸಮಗ್ರತೆ ಕಾಪಾಡಲು ಬಿಜೆಪಿಯನ್ನು ಸೋಲಿಸಿ: ಮಂಜುನಾಥ್ ಅಣ್ಣಯ್ಯ

Leave a Reply

Your email address will not be published. Required fields are marked *

You missed

error: Content is protected !!