ಕೆಜಿಎಫ್
ಕೋಲಾರ
ತಾಲ್ಲೂಕು ಸುದ್ದಿ
ದೇಶ
ನಮ್ಮ ಕೋಲಾರ
ಪ್ರಪಂಚ
ಬಂಗಾರಪೇಟೆ
ಮಕ್ಕಳ ಸುದ್ದಿ
ಮಾಲೂರು
ಮುಳಬಾಗಿಲು
ರಾಜಕೀಯ
ರಾಜ್ಯ ಸುದ್ದಿ
ಶ್ರೀನಿವಾಸಪುರ
PLACE YOUR AD HERE AT LOWEST PRICE
ಪ್ರೀತಿ , ವಿಶ್ವಾಸಕ್ಕೆ ,ಅಭಿಮಾನಕ್ಕೆ ತಲೆಬಾಗಿ ನಮಸ್ಕರಿಸುತ್ತೇನೆ ಹಾಗೂ ಸದಾಕಾಲ ಚಿರರುಣಿಯಾಗಿರುತ್ತೇನೆ ಎಂದು ಜೆ.ಡಿ.ಎಸ್.ಮುಖಂಡ ಹಾಗೂ ಟಿ.ಎ.ಪಿ.ಸಿ.ಎಂ.ಸಿ. ಸದಸ್ಯ ಹಾಗೂ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಆಲಂಗೂರು ಶಿವಣ್ಣ ತಿಳಿಸಿದರು.
ಗುರುವಾರ ಅವರ ಅಭಿಮಾನಿಗಳು, ಒಕ್ಕಲಿಗರ ಸಂಘದ ಪಧಾದಿಕಾರಿಗಳು ಮುಳಬಾಗಿಲು ತಾಲ್ಲೂಕು ಆಲಂಗೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಅವರ 64 ನೇ ಹುಟ್ಟು ಹಬ್ಬದ ಆಚರಣೆಯಲ್ಲಿ ಅಭಿಮಾನಿಗಳು ತಂದಿದ್ದ 64 ಕೆ.ಜಿ ಯ ಕೇಕ್ ಕತ್ತರಿಸಿ ಹುಟ್ಟು ಹಬ್ಬದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾಧ್ಯದವರೊಂದಿಗೆ ಅವರು ಮಾತನಾಡುತ್ತಾ, ಮನೆಯವರು ತಮ್ಮೊಂದಿಗೆ ನಮ್ಮ ಹುಟ್ಟು ಹಬ್ಬ ಆಚರಣೆ ಮಾಡಿಕೊಳ್ಲಲು ಇಚ್ಛೆ ಪಡಿಸಿದಾದರೂ, ಅಭಿಮಾನಿಗಳಿಗೆ ಮೊದಲ ಆಧ್ಯತೆ ನೀಡಿ ಅವರೊಂದಿಗೆ ಸಂತಸವನ್ನು ಹಂಚಿಕೊಳ್ಳುತ್ತಿದ್ದೆನೆಂದರು.
ಮುಂದಿನ ವರ್ಷಗಳಿಂದ ನನ್ನ ಹುಟ್ಟು ಹಬ್ಬದ ಆಚರಣೆಯನ್ನು ಕುಟುಂಬದವರೊಂದಿಗೆ ಆಚರಣೆ ಮಾಡಲು ಇಚ್ಚಿಸಿದ್ದು ಅದಕ್ಕೆ ಅಭಿಮಾನಿಗಳು ಅವಕಾಶ ಮಾಡಿಕೊಡುವಂತೆ ಅವರು ಮನವಿ ಮಾಡಿದರು.
ಈ ಸಂಧರ್ಭದಲ್ಲಿ ಅವರ ಅಭಿಮಾನಿಗಳಾದ ನಗರ ಸಭೆ ಮಾಜಿ ಅಧ್ಯಕ್ಷ ಹಾಗೂ ನಗರ ಘಟಕದ ಜೆ.ಡಿ.ಎಸ್ ಅಧ್ಯಕ್ಷ ನಾಗರಾಜ್, ಕೆ.ಇ.ಬಿ.ರಮೇಶ್, ರಾಮಾಂಜಿ, ರವಿ, ಸೊಣ್ಣೇಗೌಡ, ಚಾಮರೆಡ್ಢಿಹಳ್ಳಿ ಗಿರಿ, ವಿಜಿ ರವರುಗಳು ಮಾತನಾಡಿ ಆಲಗೂರ ಶಿವಣ್ಣನವರಿಗೆ ದೇವರು ಇನ್ನೂ ಹೆಚ್ಚಿನ ಆಯಸ್ಸು ಆರೋಗ್ಯ, ಸಂಪತ್ತು , ಸಂತೋಷ ನೀಡಲಿ ಎಂದು ಶುಭ ಕೋರಿದರು.
ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಅಪಾರ ಅಭಿಮಾನಿ ಬಳಗ, ಸ್ನೇಹಿತರು, ರಾಜಕೀಯ ಮುಖಂಡರು, ವಕ್ಕಲಿಗರ ಸಂಘದ ಪದಾಧಿಕಾರಿಗಳು ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಿದರು.