• Tue. Apr 23rd, 2024

ಕೆ. ಎಸ್ .ಆರ್. ಟಿ. ಸಿ. ವಿರುದ್ಧ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಂದ ರಸ್ತೆ ತಡೆ ಕೋಲಾರ ಹೊಸೂರು ರಸ್ತೆ ಬಂದ್

PLACE YOUR AD HERE AT LOWEST PRICE

 

ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರದ ಬಳಿ ಕೆ.ಎಸ್. ಆರ್. ಟಿ. ಸಿ. ಬಸ್ ನಿಲುಗಡೆ ಮಾಡುತ್ತಿಲ್ಲ ಎಂದು ಕೋಲಾರ ಮಾಲೂರು ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಲಾಗಿದೆ.

ಕೋಲಾರದಿಂದ ಮಾಲೂರು ಮಾರ್ಗವಾಗಿ ತಮಿಳುನಾಡಿನ  ಹೊಸೂರು ನಗರಕ್ಕೆ ಹೋಗುವ ರಸ್ತೆಯಲ್ಲಿ ನಿತ್ಯ ನೂರಾರು ಕೆ.ಎಸ್.ಆರ್.ಟಿ.ಸಿ.ಬಸ್ಸುಗಳ ಓಡಾಟ ಇದ್ದರೂ ಅದೇ ರಸ್ತೆಯಲ್ಲಿ ಬರುವ ಮಂಗಸಂದ್ರ ಬಳಿ ಇರುವ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರದ ಬಸ್ ನಿಲ್ದಾಣದಲ್ಲಿ ಬಸ್ಸು ನಿಲ್ಲಿಸದೇ ಇರುವುದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ದ ಹತ್ತಿರ ವೇಗದೂತ ಬಸ್ಗಳು ,ಹೊಸೂರು ಬಸ್ ಗಳು ನಿಲ್ಲಿಸುವುದಿಲ್ಲ. ರಾತ್ರಿ 7.30 ಆದರೂ ವಿದ್ಯಾರ್ಥಿಗಳು  ವಿವಿ ಗೇಟ್ ಬಳಿ  ಇರುತ್ತಾರೆ. ಇದರಿಂದ  ವಿದ್ಯಾರ್ಥಿಗಳು  ಬಹಳ ತೊಂದರೆ ಅನುಭವಿಸಬೇಕಾಯಿತು. ಮುಖ್ಯವಾಗಿ  ಹೆಣ್ಣು  ಮಕ್ಕಳಿಗೆ ತುಂಬಾ ತೊಂದರೆ ಆಗುತ್ತಿದೆಯಲ್ಲದೆ  ಮಾರನೆ ದಿನ   ತರಗತಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಆದುದ್ದರಿಂದ ವಿದ್ಯಾರ್ಥಿಗಳೇ ಮಾಡುತ್ತಿರುವ ಹೋರಾಟದಿಂದ . ಇಡೀ ಮಾಲೂರು ರೋಡ್ ಜಾಮ್ ಆಗಿದೆ.

ವಿದ್ಯಾರ್ಥಿಗಳು ಟಿಕೇಟ್ ತೆಗೆದುಕೊಳ್ಳುವುದಿಲ್ಲ, ಎಲ್ಲರೂ ವಿದ್ಯಾರ್ಥಿ ಪಾಸ್ ತೋರಿಸುತ್ತಾರೆ ಅದಕ್ಕೆ ನಿಲ್ಲಿಸಲ್ಲ, ಎಕ್ಸ್ ಪ್ರೆಸ್ ಬಸ್ಸುಗಳಲ್ಲಿ  ಪಾಸ್ ಅಲೋ ಮಾಡೋಕಾಗಲ್ಲ ಅಂತಾರೆ. ಇದು ಕೋಲಾರ ಕೆಎಸ್ ಆರ್ ಟಿಸಿ ವಿದ್ಯಾರ್ಥಿಗಳಿಗೆ ಮಾಡುತ್ತಿರುವ ಮಹಾ ಮೋಸ ಆರೋಪಿಸಿದ್ದಾರೆ.

ಈ ಪ್ರತಿಭಟನೆಯಿಂದ ಮಾಲೂರು ಹಾಗೂ ನೆರೆಯ ತಮಿಳು ನಾಡಿನ ಹೊಸೂರು ನಗರಕ್ಕೆ ತೆರಳುತ್ತಿದ್ದ ಸಾವಿರಾರು ಪ್ರಯಾಣಿಕರು ತೊಂದರೆಗೆ ಸಿಲುಕಿದರು. ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಮುಖ್ಯ ರಸ್ತೆಯಲ್ಲಿ ಧರಣಿ ಕುಳಿತ ಕಾರಣ ಸುಮಾರು 3-4 ಕಿ. ಮೀ.ರಸ್ತೆ ಜಾಮ್ ಆಗಿದೆ .

Related Post

ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ರವರಿಗೆ ಜಿಲ್ಲಾ ದಲಿತ ಸಂಘಟನೆಗಳ ಸಂಯುಕ್ತ ರಂಗ ಬೆಂಬಲ : ಡಾ.ಎಂ. ಚಂದ್ರಶೇಖರ್
ಬಲಗೈ ಸಮುದಾಯದ ಬಹುಸಂಖ್ಯಾತ ಚಿಕ್ಕತಾಳಿ ಸಮಾಜವನ್ನು ಕಾಂಗ್ರೆಸ್ ಅಭ್ಯರ್ಥಿ ನಿರ್ಲಕ್ಷ್ಯ ಮಾಡಿದ್ದಾರೆ : ಸಮುದಾಯ ಮುಖಂಡರ ಆರೋಪ
ಕೆ.ಹೆಚ್.ಮುನಿಯಪ್ಪ ಬಲಗೈಭಂಟ ಜಿಪಂ ಮಾಜಿ ಸದಸ್ಯ ಎಂ.ರಾಮಚ0ದ್ರ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆ

Leave a Reply

Your email address will not be published. Required fields are marked *

You missed

error: Content is protected !!