PLACE YOUR AD HERE AT LOWEST PRICE
ಕೋಲಾರ ತಾಲೂಕಿನ ವೇಮಗಲ್ ಹೋಬಳಿಯ ರಾಮಾಪುರ ಗ್ರಾಮದಿಂದ ತೋಟಗಳಿಗೆ ಹೋಗುವ ರಸ್ತೆ ಸುಮಾರು ದಿನಗಳಿಂದ ಹದಗೆಟ್ಟಿದ್ದು ಓಡಾಡಲು ತೊಂದರೆಯಾಗುತ್ತಾ ಇದ್ದು ರಸ್ತೆಯನ್ನು ಗ್ರಾಮಸ್ಥರ ಮನವಿ ಮೇರೆಗೆ ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಜೆಸಿಬಿ ಕಳಸಿ ಸರಿಪಡಿಸಿದ್ದು, ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸುಮಾರು ವರ್ಷಗಳಿಂದ ರಾಮಾಪುರ ಗ್ರಾಮದಿಂದ ತೋಟಗಳಿಗೆ ದಿನನಿತ್ಯ ಕೆಲಸಗಳಿಗೆ ಹೋಗುವ ದಾರಿಯೂ ಸರಿಯಾಗಿ ಇಲ್ಲದೇ ಸಾರ್ವಜನಿಕರಿಗೆ ತೊಂದರೆಯಾಗುತ್ತಾ ಇದ್ದು ರಸ್ತೆ ಸರಿಪಡಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗೆ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಲಿಲ್ಲ ಇತ್ತೀಚೆಗೆ ಗ್ರಾಮಕ್ಕೆ ಭೇಟಿ ನೀಡಿದ್ದ ಕೋಲಾರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಅವರ ಗಮನಕ್ಕೆ ಗ್ರಾಮಸ್ಥರು ತಂದ ಕೂಡಲೇ ಜೆಸಿಬಿ ಕಳಸಿ ರಸ್ತೆಯನ್ನು ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಇವರ ಜನಪರ ಕಾಳಜಿ ಎಲ್ಲರಿಗೂ ಮಾದರಿಯಾಗಿದೆ ಎಂದು ಗ್ರಾಮಸ್ಥರು ತಿಳಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಮುಖಂಡರಾದ ಬೋರ್ವೆಲ್ ನಾಗೇಶ್, ಅಗ್ರಹಾರದವರ ಶ್ರೀನಾಥ್, ಆರ್.ಎನ್ ಚಂದ್ರೇಗೌಡ, ರಾಮಾಪುರ ಹರೀಶ್, ಗ್ರಾಪಂ ಸದಸ್ಯ ಅಂಬರೀಶ್, ಅಗ್ರಹಾರ ನಾರಾಯಣಸ್ವಾಮಿ, ಅಮ್ಮನಲ್ಲೂರು ವರುಣ್, ನಾರಾಯಣಗೌಡ, ಪ್ರತಾಪ್, ಮಡವಳ್ಳಿ ನಾಗೇಶ್, ಮುತ್ತಕದಳ್ಳಿ ನಾಗೇಶ್, ನಾರಾಯಣಸ್ವಾಮಿ, ಮಂಜುನಾಥ್, ಮನೋಜ್ ಮುಂತಾದವರು ಸ್ಥಳದಲ್ಲಿ ಇದ್ದು ರಸ್ತೆ ಸರಿಪಡಿಸಿಕೊಟ್ಟರು.
ಸುದ್ದಿ ಓದಿ ಹಂಚಿ: