PLACE YOUR AD HERE AT LOWEST PRICE
ಕೆಜಿಎಫ್ ನಗರದ ಕೆ.ಎನ್.ಜೆ.ಎಸ್ ಬ್ಲಾಕ್ ನಲ್ಲಿ ಯುವಕರ ನಡುವಿನ ಮಾರಾಕಾಸ್ತ್ರಗಳ ದಾಳಿಯ ವೇಳೆ ಅಡ್ಡ ಬಂದ ಓರ್ವ ವ್ಯಕ್ತಿಯ ಭೀಕರ ಕೊಲೆಯಾಗಿದೆ.
ಚೆನ್ನೈ ಮೂಲದ 26 ವರ್ಷದ ದಿವಾಕರ್ ಕೊಲೆಯಾದ ದುರ್ಧೈವಿ, ದಿವಾಕರ್ ಸಣ್ಣಪುಟ್ಟ ಪೈಂಟಿಂಗ್ ಕೆಲಸ ಮಾಡಿಕೊಂಡು ಕೆ.ಎನ್.ಜೆ.ಎಸ್ ವಾರ್ಡ್ ನ ತನ್ನ ಸಹೋದರಿಯ ಮನೆಯಲ್ಲಿ ವಾಸವಿದ್ದ.
ಬ್ಲಾಕ್ ನ ಯುವಕ ಸಂತೋಷ್ ಮತ್ತು ದಿವಾಕರ್ ಮಾತನಾಡುತ್ತಿದ್ದ ವೇಳೆ, ಸುನೋಜ್ ಎಂಬ ಯುವಕ ತನ್ನ ಯುವಕರ ಗುಂಪಿನೊಂದಿಗೆ ಬಂದು ಮಾರಕಾಸ್ತ್ರಗಳಿಂದ ದಾಳಿ ಮಾಡಲು ಆರಂಭಿಸಿದ್ದಾನೆ.
ಈ ವೇಳೆ ಅಡ್ಡ ಬಂದ ದಿವಾಕರ್ ತಲೆಗೆ ತೀವ್ರತರನಾದ ಪೆಟ್ಟುಬಿದ್ದ ಕಾರಣ ದಿವಾಕರರನ್ನು ಚಿಕಿತ್ಸೆಗೆಂದು ಕೋಲಾರ ಜಿಲ್ಲಾಸ್ಪತ್ರಗೆ ಸಾಗಿಸಲಾಗಿತ್ತು.
ನಂತರ ಬೆಂಗಳೂರಿಗೆ ಸಾಗಿಸಿ ಉನ್ನತ ಚಿಕಿತ್ಸೆ ನೀಡಲಾಗಿ, ಚಿಕಿತ್ಸೆ ಫಲಕಾರಿಯಾಗದೆ ದಿವಾಕರ್ ಮೃತಪಟ್ಟಿದ್ದಾನೆ. ಉರಿಗಾಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.