• Sat. Apr 20th, 2024

PLACE YOUR AD HERE AT LOWEST PRICE

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದು ಖಚಿತವಾಗಿದ್ದು, ಕೋಲಾರ ನಗರದಲ್ಲಿ ಚುನಾವಣಾ ವಾರ್ ರೂಮ್ ಸಜ್ಜಾಗಿದೆ.

ಕೋಲಾರ ನಗರದ ಟೇಕಲ್ ರಸ್ತೆಯಲ್ಲಿ ಕಿಲಾರಿಪೇಟೆಯ ಮುನಿವೆಂಕಟ್ ಯಾದವ್ ಹೊಸದಾಗಿ ನಿರ್ಮಿಸಿದ್ದ ಕಟ್ಟಡವನ್ನು ವಾರ್ ರೂಮ್‌ಗಾಗಿ ಸಜ್ಜುಗೊಳಿಸಲಾಗುತ್ತಿದೆ. ಇತ್ತೀಚಿಗಷ್ಟೇ ಈ ಕಟ್ಟಡದ ಗೃಹಪ್ರವೇಶ ಪೂಜಾ ಕಾರ್ಯಕ್ರಮ ನಡೆದಿತ್ತು.

ಇದೇ ಕಟ್ಟಡವನ್ನು ಮೂರು ತಿಂಗಳ ಮಟ್ಟಿಗೆ ಬಾಡಿಗೆ ಪಡೆದುಕೊಂಡಿರುವ ತಂಡವೊಂದು ಚುನಾವಣಾ ವಾರ್ ರೂಮ್ ಆಗಿ ಸಜ್ಜುಗೊಳಿಸುತ್ತಿದೆ. ಇದೇ ಕಚೇರಿಯಿಂದ ಚುನಾವಣಾ ಯೋಜನೆ, ಪ್ರಚಾರ ನಡೆಯಲಿದೆ. ಇಡೀ ಚುನಾವಣೆಯ ಕೇಂದ್ರ ಕಚೇರಿಯಾಗಿ ವಾರ್ ರೂಮ್ ಕೆಲಸ ಮಾಡಲಿದೆ.

ಸಿದ್ದರಾಮಯ್ಯ ಸ್ಪರ್ಧೆಯ ಕಾರಣಕ್ಕೆ ಈ ಕಚೇರಿಯ ಕಾರ್ಯವೈಖರಿ ಮುಂದಿನ ಮೂರು ತಿಂಗಳ ಕಾಲ ರಾಜ್ಯ ಮತ್ತು ರಾಷ್ಟ್ರದ ಗಮನ ಸೆಳೆಯಲಿದೆ.

ಸಿದ್ದರಾಮಯ್ಯ ಸೋಮವಾರ ವೇಮಗಲ್‌ನಲ್ಲಿ ಮಹಿಳೆಯರ ಸಮಾವೇಶದಲ್ಲಿ ಪಾಲ್ಗೊಂಡ ನಂತರ ಕೋಲಾರಕ್ಕೆ ಆಗಮಿಸಿ ವಾರ್ ರೂಂ ಅನ್ನು ಉದ್ಘಾಟಿಸಲಿದ್ದಾರೆ. ಆನಂತರ ಪೂರ್ಣ ಪ್ರಮಾಣದಲ್ಲಿ ಚುನಾವಣೆ ಮುಗಿಯುವವರೆವಿಗೂ ವಾರ್ ರೂಮ್ ಚುನಾವಣಾ ಕಾರ್ಯತಂತ್ರಗಳನ್ನು ರೂಪಿಸಲಿದೆ.

ಸುದ್ದಿ ಓದಿ ಹಂಚಿ:

 

Related Post

2024ರ ಲೋಕಸಭಾ ಚುನಾವಣೆ ಸಂವಿಧಾನ ಪರ ಮತ್ತು ಸಂವಿಧಾನ ವಿರೋಧಿ ಧೋರಣೆ ಹಾಗೂ ಮನಸ್ಥಿತಿಗಳ ನಡುವಿನ ಯುದ್ಧವಾಗಿದೆ – ಎಂ.ಎಲ್.ಸಿ. ಸುಧಾಮದಾಸ್
ಶೇ.೯೦ ರಷ್ಟು ದೇಶದ ಸಮುದಾಯಗಳು ಮುಖ್ಯವಾಹಿನಿ ಮಾದ್ಯಮಗಳಲ್ಲಿ, ಕಾರ್ಪೋರೇಟ್ ವಿಭಾಗದಲ್ಲಿ ಮತ್ತು ಅತ್ಯುನ್ನತ ಸರ್ಕಾರಿ ಹುದ್ದೆಗಳಲ್ಲಿ ಭಾಗವಹಿಸುವಿಕೆ ಇಲ್ಲ! : ರಾಹುಲ್ ಗಾಂಧಿ
ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಅನ್ಯಾಯ ಮಾಡಿವೆ : ಸಮುದಾಯ ಮುಖಂಡರ ಆಕ್ರೋಶ,

Leave a Reply

Your email address will not be published. Required fields are marked *

You missed

error: Content is protected !!