• Thu. Apr 25th, 2024

PLACE YOUR AD HERE AT LOWEST PRICE

ಬಂಗಾರಪೇಟೆ: ಕುಂಬಾರಪಾಳ್ಯ ಸ್ಮಶಾನದಲ್ಲಿ ಅಮಾವಾಸ್ಯೆ ಪ್ರಯುಕ್ತ ವಿಭಿನ್ನವಾಗಿ ಮತ್ತು ವಿಶೇಷವಾಗಿ ಪೂಜೆಯನ್ನು ನೆರವೇರಿಸಲಾಯಿತು.

ಮೈ ನವಿರೇಳಿಸುವ ರೀತಿ ಹಾಗೂ ಭಯಾನಕ ರೀತಿಯಲ್ಲಿ ನಡೆದ ಸ್ಮಶಾನ ಪೂಜೆ ವಿಶೇಷ ಆಕರ್ಷಣೀಯವಾಗಿತ್ತು.

ಕರುಮಾರಿಯಮ್ಮ ದೇವಿ 13 ನೇ ವಾರ್ಷಿಕೋತ್ಸವ ಪ್ರಯುಕ್ತ ಮಂಗಳಮುಖಿಯರು ಆಚರಿಸುವ ವಿಭಿನ್ನ ಪೂಜೆಯಲ್ಲಿ ಸಾವಿರಾರು ಭಕ್ತರು ಭಾಗಿಯಾಗಿದ್ದರು.

ಕರುಮಾರಿಯಮ್ಮ ದೇವಿಗೆ ಕುರಿ ಬಲಿಕೊಟ್ಟು ರಕ್ತ ಕುಡಿದ ದೇವಿ ವೇಷಾಧಾರಿ ಕಪ್ಪು ಬಣ್ಣದ ಕಾಳಿ ವೇಷ ಧರಿಸಿದ ಮಂಗಳಮುಖಿ ವೇಷಾಧಾರಿಯಿಂದ ಭಯಾನಕ ಆಚರಣೆ ನಡೆಯಿತು.

ಬಲಿಕೊಟ್ಟ ಕುರಿಯ ರಕ್ತ ಕುಡಿದ ಕಾಳಿ ವೇಷಧಾರಿ ಸ್ಮಶಾನದಲ್ಲಿ ಘೋರಿ ಮೇಲೆ ನಿಂತು ನೃತ್ಯ ಮಾಡುತ್ತಾ, ಸಿಗರೇಟ್ ಸೇದಿದ ವೇಷಾಧಾರಿ ನೃತ್ಯ ವಿಶೇಷವಾಗಿತ್ತು.

ಕಾಳಿ ವೇಷಾಧಾರಿ ಅರ್ಚಕಿ ರಕ್ತ ಸೇವಿಸುತ್ತಿದ್ದಂತೆ ಹತ್ತಾರು ಮಂಗಳಮುಖಿಯರಿಂದ ಮೈ ಮೇಲೆ ದೆವ್ವ ಬಂದಂತೆ ನೃತ್ಯ ಮಾಡಲಾರಂಭಿಸಿದರು.

ದೇವಿ ಪವಾಡ ವೀಕ್ಷಿಸಲು ಸಾವಿರಾರು ಸಂಖ್ತೆಯಲ್ಲಿ ಮಹಿಳಾ ಭಕ್ತರು ನೆರೆದಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!