PLACE YOUR AD HERE AT LOWEST PRICE
ಕೆಜಿಎಫ್:ಹಸಿದವರ ಹೊಟ್ಟೆಯನ್ನು ತುಂಬಿಸುವ ನಿಟ್ಟಿನಲ್ಲಿ ಎಲ್ಲಾ ಜನರಿಗೆ ಉಚಿತವಾಗಿ ಊಟ ಕೊಡಲು ನಾಳೆಯಿಂದ ಕೆಜಿಎಫ್ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿ ಭಾರತ ಮಾತಾ ಕ್ಯಾಂಟಿನ್ಗೆ ಚಾಲನೆ ನೀಡಲಾಗುವುದು ಎಂದು ಕಮ್ಮಸಂದ್ರ ಗ್ರಾಪಂ ಅಧ್ಯಕ್ಷ ಹಾಗೂ ಓ.ಎಸ್.ಆರ್ ಚಾರಿಟಬಲ್ ಟ್ರಸ್ಟ್ ಅದ್ಯಕ್ಷ ಬಿ.ಸುರೇಶ್ ಹೇಳಿದರು.
ನಗರಸಭೆ ಸದಸ್ಯ ಗಾಂಧಿ ರವರ ಹುಟ್ಟು ಹಬ್ಬದ ಹಿನ್ನಲೆ ಅವರ ಸ್ವಗೃಹಕ್ಕೆ ಭೇಟಿ ನೀಡಿ ಶುಭ ಹಾರೈಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಹಿರಿಯರ ದಾರ್ಶನಿಕರ ಹಿತ ನುಡಿಗಳಂತೆ ಧಾನಗಳಲ್ಲಿ ಶೇಷ್ಟವಾದ ಧಾನವೆಂದರೆ ಆದು ಅನ್ನದಾನ ಎಂಬುದನ್ನು ಅರಿತುಕೊಂಡು ರಾಜಕೀಯ ರಹಿತ ಧರ್ಮ ರಹಿತಿ ಜಾತಿ ರಹಿತವಾಗಿ ನಾಳೆಯಿಂದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿ ನಿತ್ಯ ಉಚಿತ ಕ್ಯಾಂಟಿನ್ ಪ್ರಾರಂಭಿಸಲಾಗುತ್ತಿದೆ ಎಂದರು.
ನಾಳೆಯಿಂದ ಪ್ರತಿ ದಿನ ಮಧ್ಯಾಹ್ನ 1 ರಿಂದ 3 ಗಂಟೆಯವರೆಗೆ ಯಾರು ಬಂದರು ಪಕ್ಷತೀತವಾಗಿ ಎಲ್ಲರಿಗೂ ಉಚಿತವಾಗಿ ಊಟವನ್ನು ನೀಡುವ ಕೆಲಸವನ್ನು ಮಾಡಲಾಗುತ್ತದೆ ಇದು ಓಎಸ್ಆರ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಉಚಿತ ಕ್ಯಾಂಟಿನ್ಗೆ ಉದ್ಘಾಟನೆಗೆ ಮುಖಂಡರು ಹಾಗೂ ಸಮಾಜದ ಗಣ್ಯ ವ್ಯಕ್ತಿಗಳು ಆಗಮಿಸುತ್ತಿದ್ದಾರೆ ಎಂದ ಅವರು . ಕೆಜಿಎಫ್ ತಾಲ್ಲೂಕಿನ ಜನತೆ ಸೇರಿದಂತೆ ಸಾರ್ವಜನಿಕ ಆಸ್ವತ್ರೆಗೆ ಭೇಟಿ ನೀಡುವ ರೋಗಿಗಳು ಹಾಗೂ ಸಾರ್ವಜನಿಕರು ಉಚಿತವಾಗಿ ಊಟ ಮಾಡಬಹುದು ಎಂದರು.