PLACE YOUR AD HERE AT LOWEST PRICE
ಕೆಲವು ದಲಿತ ಸಂಘಟನೆಗಳ ಮುಖಂಡರು ಜಿಲ್ಲೆಯ ದಲಿತರ ಪರವಾಗಿ ನಾವು ಇದ್ದೇವೆ ಎಂದು ಹೇಳಿಕೊಂಡು ದಲಿತರನ್ನು ನಿರ್ಲಕ್ಷಿಸಿದ್ದಾರೆ ಇದನ್ನು ಅರ್ಥಮಾಡಿಕೊಂಡಿರುವ ದಲಿತರು ಜಿಲ್ಲೆಯಲ್ಲಿ ಇರುವ ದಲಿತರ ಸವಾಂಗೀಣ ಅಭಿವೃದ್ಧಿಯ ಜೊತೆಗೆ ಸಮಾನತೆಯ ನ್ಯಾಯಕ್ಕಾಗಿ “ಪ್ರಜ್ಞಾವಂತ ದಲಿತ ಸಂಘಟನೆಗಳ ಒಕ್ಕೂಟ” ರಚಿಸಿಕೊಂಡು ಜೆಡಿಎಸ್ ಪಕ್ಷವನ್ನು ಬೆಂಬಲಿಸಲಿದ್ದಾರೆ ಎಂದು ಒಕ್ಕೂಟದ ಮುಖಂಡರು ತಿಳಿಸಿದರು.
ಕೋಲಾರ ನಗರದ ಕುವೆಂಪು ಬಡಾವಣೆಯ ರೈತ ಸಂಘದ ಕಛೇರಿಯಲ್ಲಿ ನಡೆದ ದಲಿತ ಸಂಘಟನೆಗಳ ಸಭೆಯಲ್ಲಿ ಚರ್ಚೆ ನಡೆಸಿದ ಮುಖಂಡರು ದಲಿತರ ಹೆಸರು ಹೇಳಿಕೊಂಡು ಕೆಲವು ದಲಿತ ಮುಖಂಡರು ರಾಜಕೀಯವಾಗಿ ಮತ್ತು ಸರ್ಕಾರದ ವಿವಿಧ ಸೌಲಭ್ಯಗಳನ್ನು ಬಳಿಸಿಕೊಂಡು ಅವರು ಮತ್ತು ಅವರ ಕುಟುಂಬ ಅಭಿವೃದ್ಧಿಯಾಗಿದ್ದಾರೆ ಹೊರತು ದಲಿತರ ಕಟ್ಟಕಡೆಯ ವ್ಯಕ್ತಿಗೆ ಯಾವುದೇ ಸೌಲಭ್ಯಗಳನ್ನು ಒದಗಿಸಿಲ್ಲ ದಲಿತರಿಗಾಗಿ ಇರುವ ಸೌಲಭ್ಯಗಳಿಂದ ದಲಿತರನ್ನು ವಂಚಿಸಿ ಕೋಟ್ಯಾಂತರ ರೂಪಾಯಿ ಮಾಡಿಕೊಂಡಿದ್ದಾರೆ ಇಂತಹ ದಲಿತ ಮುಖಂಡರಿಗೆ ಚುನಾವಣೆಯಲ್ಲಿ ಪಾಠ ಕಲಿಸಲಿದ್ದಾರೆ ಎಂದರು.
ಕೋಲಾರ ಜಿಲ್ಲೆಯ ಜನ ಸ್ವಾಭಿಮಾನದಿಂದ ಜೀವನ ನಡೆಸಿದ್ದು ಇತ್ತಿಚೆಗೆ ಹೊರಗಿನ ವ್ಯಕ್ತಿಗಳಿಗೆ ಮಣೆ ಹಾಕಲಾಗುತ್ತಿದೆ, ಬಿಜೆಪಿಗೆ ಬೆಂಬಲ ನೀಡಿದ್ದ ಘಟ್ಟಬಂಧನ್ ನಾಯಕರು ಇವತ್ತು ಹೊರಗಿನಿಂದ ಮತ್ತೊಬ್ಬರನ್ನು ಕರೆದು ತಂದಿದ್ದಾರೆ ಆ ನಾಯಕರನ್ನು ಸೋಲಿಸಲು ನಿರ್ಧಾರ ಮಾಡಲಾಗಿದೆ ಅದೇ ರೀತಿ ಕೋಲಾರ ವಿಧಾನಸಭಾ ಕ್ಷೇತ್ರ ಜೆಡಿಎಸ್ ಭದ್ರಕೋಟೆಯಾಗಿದೆ. ಈ ಬಾರಿ ಸ್ಥಳೀಯ ಜನನಾಯಕ ಸೂಕ್ತ ವ್ಯಕ್ತಿ ಜೆಡಿಎಸ್ ಅಭ್ಯರ್ಥಿ ಶ್ರೀನಾಥ್ರನ್ನು ಬೆಂಬಲಿಸಲು ನಿರ್ಧರಿಸಿದರು.
ಅದೇ ರೀತಿ ಮುಂದಿನ ತಿಂಗಳು ಮಾರ್ಚ್ ೧೦ ರಂದು ಇದೇ ಸ್ಥಳದಲ್ಲಿ ಬೆಳಗ್ಗೆ ೧೧ ಗಂಟೆಗೆ ಮತ್ತೊಂದು ಸಭೆ ಕರೆಯಲಾಗಿದೆ ಅಂದು ಕೋಲಾರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಅವರನ್ನು ಸಭೆಗೆ ಆಹ್ವಾನಿಸಲು ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನ ತೆಗೆದುಕೊಳ್ಳಲಾಯಿತು ಎಂದು ಒಕ್ಕೂಟದ ಮುಖಂಡರೊಬ್ಬರು ತಿಳಿಸಿದ್ದಾರೆ.