PLACE YOUR AD HERE AT LOWEST PRICE
ರಾಗಿ ಖರೀದಿ ಕೇಂದ್ರಗಳಲ್ಲಿ ದಲ್ಲಾಳಿಗಳಿಗೆ ಕಡಿವಾಣ ಹಾಕಿ ರೈತರ ಬೆವರ ಹನಿಗೆ ತಕ್ಕ ಬೆಂಬಲ ಬೆಲೆ ರೈತರಿಗೆ ಸಿಗಬೇಕೆಂದು ರೈತ ಸಂಘದಿಂದ ರಾಗಿ ಖರೀದಿ ಕೇಂದ್ರದ ಅಧಿಕಾರಿಗಳ ಮುಖಾಂತರ ಜಿಲ್ಲಾ ವ್ಯವಸ್ಥಾಪಕರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಹಗಲು ರಾತ್ರಿ ಎನ್ನದೆ ಬಿಸಿಲು ಗಾಳಿಗೆ ಬೆವರು ಸುರಿಸಿ ಬಂಡವಾಳ ಹಾಕಿ ಬೆಳೆದಿರುವ ರಾಗಿಗೆ ಸರ್ಕಾರ ಘೋಷಣೆ ಮಾಡಿರುವ ಬೆಂಬಲ ಬೆಲೆ ಅಧಿಕಾರಿಗಳ ಬೇಜವಬ್ದಾರಿಯಿಂದ ರೈತರಿಗೆ ಸೇರಬೇಕಾದ ಬೆವರಿಗೆ ತಕ್ಕ ಪ್ರತಿಫಲ ದಲ್ಲಾಳಿಗಳಿಗೆ ಸೇರುತ್ತಿರುವುದು ದುರಾದೃಷ್ಟಕರ ಎಂದು ಅವ್ಯವಸ್ಥೆಯ ವಿರುದ್ದ ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು.
ರೈತರಿಗೆ ಸರ್ಕಾರ ಪ್ರತಿ ಕ್ವಿಂಟಾಲ್ ರಾಗಿ ೩೫೭೮ ರೂ ಘೋಷಣೆ ಮಾಡಿರುವ ಬೆಂಬಲ ಬೆಲೆ ೯೦ ದಿನ ಕಷ್ಟಪಟ್ಟಿರುವ ರೈತರ ಹೆಸರಿನಲ್ಲಿ ದಲ್ಲಾಳಿಗಳು ಅಧಿಕಾರಿಗಳು ಲೂಟಿ ಹೊಡೆಯುತ್ತಿರುವುದು ರೈತ ವಿರೋಧಿ ದೋರಣೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾದ್ಯಾಂತ ರಾಗಿ ಖರೀದಿ ಕೇಂದ್ರಗಳಲ್ಲಿ ರೈತರ ಹೆಸರಿನಲ್ಲಿ ದಲ್ಲಾಳರ ವಂಚನೆ ನಿಲ್ಲಬೇಕು ಜೊತೆಗೆ ದಲ್ಲಾಳರು ನೀಡಿರುವ ರೈತರ ಹೆಸರಿನ ದಾಖಲೆಗಳನ್ನು ಪರೀಶೀಲನೆ ಮಾಡಲು ವಿಶೇಷ ತಂಡ ರಚನೆ ಮಾಡಿ ರೈತರ ಬೆವರ ಹನಿಯ ಬೆಂಬಲ ಬೆಲೆ ರೈತರಿಗೆ ಸಿಗಬೇಕು ಇಲ್ಲವಾದರೆ ರಾಗಿ ಖರೀದಿ ಕೇಂದ್ರಗಳ ಹಗಲು ದರೋಡೆ ಬಗ್ಗೆ ದಾಖಲೆಗಳ ಸಮೇತ ಲೋಕಾಯುಕ್ತ ದೂರು ನೀಡಿ ನ್ಯಾಯ ಪಡೆದುಕೊಳ್ಳುವ ಎಚ್ಚರಿಕೆಯೊಂದಿಗೆ ಮನವಿ ನೀಡಿ ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ವ್ಯವಸ್ಥಾಪಕರು ರಾಗಿ ಖರೀದಿಯಲ್ಲಿ ಅವ್ಯವಸ್ಥೆ ಇರುವುದು ನಿಜ ರೈತರ ಹೆಸರಿನಲ್ಲಿ ದಲ್ಲಾಳರು ದಾಖಲೆಗಳನ್ನು ನೀಡಿ ರಾಗಿಯನ್ನು ತರುತ್ತಿದ್ದಾರೆ ಹಿರಿಯ ಅಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
ಮನವಿ ನೀಡುವಾಗ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ತಾಲ್ಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್, ರಾಜ್ಯ ಕಾರ್ಯದರ್ಶಿ ಬಂಗಾರಿ ಮಂಜು, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರಾಜೇಶ್, ಸುನಿಲ್ಕುಮಾರ್, ವಿಶ್ವ, ವಿಜಯ್ಪಾಲ್, ಅಂಬ್ಲಿಕಲ್ ಮಂಜುನಾಥ, ಯಾರಂಘಟ್ಟ ಗಿರೀಶ್, ಪದ್ಮಘಟ್ಟ ಧರ್ಮ, ಜುಬೇರ್ಪಾಷ, ಆದಿಲ್ಪಾಷ, ವೇಣು, ಹೆಬ್ಬಣ್ಣಿ ಆನಂದರೆಡ್ಡಿ ಸುಪ್ರಿಂ ಚಲ, ರಂಜಿತ್, ಸುರೇಶ್, ಗೋಪಿ, ಹರಿ, ಗುರುಮೂರ್ತಿ ಸಂದಿಪ್ರೆಡ್ಡಿ, ಸಂದೀಪ್ಗೌಡ, ರಾಮಸಾಗರ ವೇಣು, ಮುಂತಾದವರು ಇದ್ದರು.