• Fri. Mar 29th, 2024

ತೊಟ್ಟಿಲು ತೂಗುವ ಕೈ ಲೋಕದ ಸೂತ್ರವನ್ನು ಹಿಡಿಯಬಲ್ಲದು ಎಂಬ ಮಾತನ್ನು ಸಾಭೀತು ಮಾಡಿದ  ಇಂದಿನ ಮಹಿಳೆ ಸಮಜಕ್ಕೆ ಆದರ್ಶವಾಗಿದ್ದಾಳೆ- ಕುರ್ಕಿ ರಾಜೇಶ್ವರಿ

PLACE YOUR AD HERE AT LOWEST PRICE

ಮಹಾತ್ಮ ಗಾಂದಿಜಿರವರು ಹೇಳಿರುವಂತೆ ಮದ್ಯರಾತ್ರಿಯಲ್ಲಿ ಹೆಣ್ಣೊಬ್ಬಳು ಸುರಕ್ಷಿತವಾಗಿ ನಡೆದಾಡುವಂತಾದರೆ ಅದುವೆ ನಮಗೆ ದೊರೆತ ನಿಜವಾದ ಸ್ವಾತಂತ್ರ್ಯ ಇಂದು ತೊಟ್ಟಿಲು ತೂಗುವ ಕೈ ಲೋಕದ ಸೂತ್ರವನ್ನು ಹಿಡಿಯಬಲ್ಲದು ಎಂಬ ಮಾತನ್ನು ಸಾಭೀತು ಮಾಡಿದ   ಇಂದಿನ ಮಹಿಳೆ ಸಮಜಕ್ಕೆ ಆದರ್ಶವಾಗಿದ್ದಾಳೆ ಎಂದು ಜೆಡಿಎಸ್ ಪಕ್ಷದ ತಾಲ್ಲೂಕು ಅಧ್ಯಕ್ಷೆ ಕುರ್ಕಿ ರಾಜೇಶ್ವರಿ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಮ್ಮಿಕೊಂಡಿದ್ದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮಹಿಳಾ ಕುಲಕ್ಕೆ ಸ್ಪೂರ್ತಿಯಾಗಿರುವ ಸ್ವಾತಂತ್ರ್ಯ ಹೋರಾಟಗಾರ್ತಿ ಸರೋಜಿನಿ ನಾಯ್ಡು, ದೇಶದ ಪ್ರಥಮ ಪ್ರಧಾನಿ ಇಂದಿರಾಗಾoಧಿ, ರಾಷ್ಟçಪತಿ ದ್ರೊಪತಿ ಮುರ್ಮು, ಕಿತ್ತೂರು ರಾಣಿ ಚೆನ್ನಮ್ಮ, ಮಹಿಳಾ ವಿಜ್ಞಾನಿ ಮೇರಿ ಕ್ಯೂರಿ , ಗಗನ ಯಾತ್ರೆ ಕಲ್ಪನಾಚಾವ್ಲಾ , ಪಿ.ಟಿ ಉಷಾ, ಸುಧಾ ಮೂರ್ತಿ ಸಾವಿತ್ರಿ ಬಾಯಿಪುಲೆ, ಕಿರಣ್ ಬೇಡಿ, ಲತಾ ಮಂಗೇಶ್ವರ್ ಆದರ್ಶಗಳನ್ನು ಇಂದಿನ ಮಹಿಳೆಯರು ಅಳವಡಿಸಿಕೊಳ್ಳಬೇಕೆಂದು ಹಿತವಚನ ನುಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎಂ.ನಾರಾಯಣ್ ಮಾತನಾಡಿ ಹೆಣ್ಣು ಮಕ್ಕಳ ಮೇಲೆ ಎಲ್ಲೇ ದೌರ್ಜನ್ಯವಾದರೂ ಹೆದರದೆ ೧೧೨ ಕ್ಕೆ ಕರೆ ಮಾಡಿ ನೇರವಾಗಿ ನನ್ನನ್ನು ಸಂಪರ್ಕ ಮಾಡಿ ನಿಮ್ಮ ರಕ್ಷಣೆಗಾಗಿ ನಮ್ಮ ಪೋಲಿಸ್ ಇಲಾಖೆ ಸದಾ ನಿಮ್ಮೊಂದಿಗೆ ಇರುತ್ತೇವೆ.ಜಿಲ್ಲೆಯ ಅಭಿವೃದ್ದಿಗಾಗಿ ಒಳ್ಳೆಯ ಸಮರ್ಥ ನಾಯಕರನ್ನು ಮತದಾನದ ಹಬ್ಬದಲ್ಲಿ ಪಾಲ್ಗೊಂಡು ಮತದಾನ ಮಾಡುವ ಮೂಲಕ ಆಯ್ಕೆ ಮಾಡಿಕೊಳ್ಳಿ ಏನೇ ಸಮಸ್ಯೆ ಆದರೂ ನಮ್ಮ ಪೋಲಿಸ್ ಇಲಾಖೆ ಗಮನಕ್ಕೆ ತನ್ನಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಅಭಯ ನೀಡಿದರು.

ಜನವಾದಿ ಮಹಿಳಾ ಸಂಘಟನೆಯ ವಿ.ಗೀತಾ ಮಾತನಾಡಿ, ಹಲವಾರು ಹೋರಾಟಗಳ ಪ್ರತಿಪಲವಾಗಿ ಇಂದು ಮಹಿಳಾ ದಿನಾಚರಣೆ ಆಚರಣೆಗೆ ಬಂದಿದೆ. ಹೆಣ್ಣುಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣದ ಜೊತೆಗೆ ಸ್ವಯಂ ರಕ್ಷಣೆ ತರಬೇತಿಯನ್ನು ಶಾಲಾ ಕಾಲೇಜು ಹಂತದಲ್ಲಿ ಆರಂಭವಾಗಬೇಕು ಸಾಮಾಜಿಕ ಪಿಡುಗುಗಳಾದ ವರದಕ್ಷಿಣೆ, ಕೌಟಂಬಿಕ ದೌರ್ಜನ್ಯ, ಬಾಲ್ಯ ವಿವಾಹ , ಮದ್ಯ ಮತ್ತು ಮಾದಕ ವಸ್ತು ಸೇವನೆ ಮುಂತಾದವುಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಪ್ರಚಾರ ಕಾರ್ಯಕ್ರಮಗಳು ಮತ್ತು ಶಿಬಿರಗಳನ್ನು ಏರ್ಪಡಿಸುವ ಜೊತೆಗೆ ಸಮಾಜ ಕಂಟಕರಿಗೆ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ವೆಸಗಿದವರಿಗೆ ಅತೀ ಶೀಘ್ರದಲ್ಲೇ ಕಠಿಣ ಶಿಕ್ಷೆ ಆಗಬೇಕೆಂದರು.

ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅದ್ಯಕ್ಷ ಬಿ.ವಿ.ಗೋಫಿನಾಥ್, ಮಾತನಾಡಿ ಸಮಾಜಕ್ಕಾಗಿ ಹೋರಾಟ ಮಾಡುತ್ತಿರುವ ಹೆಣ್ಣುಮಕ್ಕಳು ಇಂದಿನ ಮಹಿಳೆಯರಿಗೆ ಮಾದರಿ ಆಗಬೆಕು, ದಿನಬೆಳಗಾದರೆ ಹೆಣ್ಣುಮಕ್ಕಳ ಮೇಲೆ ಅತ್ಯಚಾರ ಕೊಲೆ ಹಿಂಸೆ ಕಿರುಕುಳದಂತಹ ಶಬ್ದಗಳು ನಮ್ಮ ಕಿವಿಗೆ ಬೀಳುತ್ತಿವೆ ಸುಸಂಸ್ಕೃತರಿಗೆ ಸುಶಿಕ್ಷಿತರಿಗೆ ಇದನ್ನೆಲ್ಲಾ ನೋಡಿಯೂ ನೋಡದಂತೆ ಕಣ್ಣುಮುಚ್ಚಿ ಕೂರುವ ಪರಿಸ್ಥಿತಿ ಬಂದು ಒದಗಿದೆ ವಿಷಾದಕರ ಸಂಗತಿ ಎಂಧರೆ ಇಂತಹ ಪ್ರಕರಣಗಳಲ್ಲಿ ಸಿಗುತ್ತಿರುವುದು ಕೇಲವೇ ಮಂದಿಗೆ ಮಾತ್ರ ಆದರೆ ಪ್ರಜ್ಞಾವಂತರಾದ ನಾವು ಮಹಿಳಾ ದಿನಾಚರಣೆಯ ದಿನದಂದು ಸರ್ಕಾರಕ್ಕೆ ಮನವಿಯನ್ನು ಮಾಡುತ್ತೇವೆ ಮಹಿಳಾ ದೌರ್ಜನ್ಯಕ್ಕೆ ನ್ಯಾಯ ಸಿಗಬೇಕಾದರೆ ಪ್ರತ್ಯೇಕ ಸ್ಥಾಪನೆಗೆ ಅಗ್ರಹಿಸಿದರು.

ಪತ್ರಕರ್ತರ ಸಂಘದ ವಿವಿದ್ದೋದ್ದೇಶ ಸಹಕಾರ ಸಂಘದ ಅದ್ಯಕ್ಷ ಕೆ.ಎಸ್ ಗಣೇಶ್ ಮಾತನಾಡಿ, ಹೋರಾಟಗಾರರು ತಮ್ಮ ಸಮಸ್ಯೆಗಳನ್ನು ಎದುರಿಸುವುದಲ್ಲದೆ ಇತರ ನೋವುಗಳಿಗೂ ಸ್ಪಂಧಿಸುವ ಮೂಲಕ ಸಮಾಜದ ಬದಲಾವಣೆಗೆ ಶ್ರಮಿಸುತ್ತಿದ್ದಾರೆ, ಈ ರೀತಿಯಲ್ಲಿ ತೊಡಗಿಸಿಕೊಂಡಿರುವ ನಮ್ಮೊಳಗಿನ ಹೋರಾಟಗಾರರೇ ಮುಂದಿನ ಪೀಳಿಗೆಗೆ ಆದರ್ಶಪ್ರಾಯವಾಗಿರಬೇಕು ಎಂದು ಅಭಿಪ್ರಾಯಪಟ್ಟರು..

ಪ್ರಸ್ತಾವಿಕ ನುಡಿ ನುಡಿದ ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ ಗೌಡ ಇಲ್ಲದ ಪ್ರಪಂಚ ಊಹೆ ಮಾಡಿಕೊಳ್ಳಲು ಸಾದ್ಯವಿಲ್ಲ, ಮಹಿಳೆಯ ಸುರಕ್ಷತೆ ಮತ್ತು ಉತ್ತಮ ಆರೋಗ್ಯ ಹೊಂದುವುದರ ಜೊತೆಗೆ ಸಾಮಾಜಿಕ ಆರ್ಥಿಕ ರಾಜಕೀಯ ಸಾಂಸ್ಕೃತಿಕ ಭೌದ್ದಿಕ ಮಾನಸಿಕ ಹಾಗೂ ದೈಹಿಕವಾಗಿ ಸಶಕ್ತಗೊಳ್ಳುವ ಅಗತ್ಯತೆ ಇದೆ. ಕಾನೂನು ಗಳನ್ನು ಯಾವುದೇ ಪಕ್ಷಪಾತವಿಲ್ಲದೆ ಸಮರ್ಪಕವಾಗಿ ಜಾರಿಗೆ ತರುವ ತನಕ ಮಹಿಳೆಯರ ಅಪರಾಧಗಳು ನಿರಂತರವಾಗಿ ನಡೆಯುತ್ತಿರುತ್ತವೆ ಜವಹರ್‌ಲಾಲ್ ನೆಹರು ಹೇಳಿದಂತೆ ಜನರನ್ನು ಜಾಗೃತಗೊಳಿಸಬೇಕದರೆ ಮೊದಲು ಮಹಿಳೆಯರು ಜಾಗೃತರಾಗಬೇಕೆಂಧು ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಕಾನೂನಿನ ಅರಿವು ಮಾಡಿಕೊಟ್ಟರು.

ಈ ಸಂದರ್ಭದಲ್ಲಿ ಉಪವಿಭಾಗಧಿಕಾರಿಗಳಾದ ವೆಂಕಟಲಕ್ಷ್ಮಿ ಹಿರಿಯ ಪತ್ರಕರ್ತರಾದ ಮುನಿರಾಜು, ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ, ದಲಿತಯ ಮುಖಂಡ ವಕ್ಕಲೇರಿ ರಾಜಪ್ಪ, ಉಷಾಗಂಗಾದರ್, ಆಹಾರ ಇಲಾಖೆಯ ಉಪ ನಿರ್ದೇಶಕಿ ಶ್ರುತಿ, ಜನಾಧಿಕಾರ ಸಂಘದ ಮಂಜುಳ, ಮಂಗಳ ಮುಖಿ ಆಶ್ವಿನಿ ರಾಜನ್, ಬಸವಶ್ರೀ ಕಾನೂನು ಕಾಲೇಜಿನ ಪ್ರಾದ್ಯಾಪಕರು ವನಜಾ, ವಿಜಯಲಕ್ಷ್ಮಿ ಸೋನಿಯಾ, ಚೌಡಮ್ಮ, ಶೈಲ, ನಾಗರತ್ನ , ಕಾಂತಮ್ಮ, ವೆಂಕಟಮ್ಮ, ವಕ್ಕಲೆರಿ ಹನುಮಯ್ಯ, ಈಕಂಬಳ್ಳಿ ಮಂಜುನಾಥ್ ಇದ್ದರು.

Leave a Reply

Your email address will not be published. Required fields are marked *

You missed

error: Content is protected !!