• Fri. Mar 29th, 2024

PLACE YOUR AD HERE AT LOWEST PRICE

ಸಂವಿಧಾನದ ಮೂಲ ಆಶಯವಾದ ಸಾರ್ವಭೌಮ ಸಮಾಜವಾದಿ, ಧರ್ಮನಿರಪೇಕ್ಷ,ಪ್ರಜಾಪ್ರಭುತ್ವದ
ಸಂರಕ್ಷಣೆಗಾಗಿ ನಗರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವಿಭಾಗ ಮಟ್ಟದ ಪ್ರಬುದ್ಧ ಭಾರತಕ್ಕಾಗಿ ಬೃಹತ್
ಸಮಾವೇಶವನ್ನು ಇದೇ ತಿಂಗಳ 15 ರ ಬುಧವಾರ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ರಾಜ್ಯ ಸಂಚಾಲಕ ಹೆಣ್ಣೂರು
ಶ್ರೀನಿವಾಸ್ ತಿಳಿಸಿದರು.

ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡುತ್ತಾ, ರಾಜ್ಯದ ನಾಲ್ಕು ಕಂದಾಯ
ವಿಭಾಗಗಳಲ್ಲಿ ಹಿಂದುಳಿದ ಜಾತಿಗಳು,ಅಲ್ಪಸಂಖ್ಯಾತರು, ದಲಿತರನ್ನೊಳಗೊಂಡ ಸಮಾವೇಶ ನಡೆಯಲಿದ್ದು,ಸಮಾವೇಶದಲ್ಲಿ ಜ್ಞಾನ ಮೂರ್ತಿ ಸ್ವಾಮೀಜಿ, ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಹಾಗೂ ರಾಜ್ಯದ
ಜನಪರ ಚಿಂತಕರು,ವಿಚಾರವಾದಿಗಳು,ಸಾಹಿತಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸಮಾವೇಶವನ್ನು ನಗರದ ಹಳೆ ಬಸ್ ನಿಲ್ದಾಣದ ಬಳಿ ಆಯೋಜಿಸಲಾಗಿದ್ದು,ಮಧ್ಯಾಹ್ನ 12 ಗಂಟೆಗೆ ಪ್ರಾರಂಭ ಆಗಲಿದೆಯೆಂದು ತಿಳಿಸಿದರಲ್ಲದೆ ಸಮಾವೇಶದಲ್ಲಿ ಪ್ರಗತಿಪರ ಸಂಘಟನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಅವರು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಕ.ದಂ.ಸಂ.ಸ.ರಾಜ್ಯ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕರುಗಳಾದ ಹಾಸನದ ಎಸ್.ಎನ್.ಮಲ್ಲಪ್ಪ,ಧಾರವಾಡದ ಮರೀಶ್ ನಾಗಣ್ಣವರ್,ಜಿಲ್ಲಾ ಸಂಚಾಲಕರುಗಳಾದ ನಾಗನಾಳ ಮುನಿಯಪ್ಪ,ಮದನಹಳ್ಳಿ ಮುದವತ್ತಿ ವೆಂಕಟೇಶ್,ಕೇಶವ ಮೂರ್ತಿ, ಜಿಲ್ಲಾ ಖಜಾಂಚಿ ಗೋವಿಂದ ರಾಜು
ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You missed

error: Content is protected !!