• Thu. Mar 28th, 2024

PLACE YOUR AD HERE AT LOWEST PRICE

ಬಂಗಾರಪೇಟೆ:ಕಾಂಗ್ರೆಸ್ ಪಕ್ಷದ ನಾಯಕರಿಗೆ ಸದಾ ಕಾಲ ಅಧಿಕಾರದ ಚಿಂತೆಯಾಗಿದ್ದು ತಮ್ಮ ಪ್ರಣಾಳಿಕೆಯಲ್ಲಿ ಸುಳ್ಳು ಭರವಸೆಗಳನ್ನು ನೀಡಲು ಹೊರಟಿದ್ದಾರೆ ಆದರೆ ಬಿಜೆಪಿ ಸರ್ಕಾರ ಅಭಿವೃದ್ಧಿಯ ಕಡೆಗೆ ಹೆಚ್ಚಿನ ಗಮನವನ್ನು ನೀಡುವುದರೊಂದಿಗೆ ಬಲಿಷ್ಠ ರಾಜ್ಯ ನಿರ್ಮಿಸುವುದು ನಮ್ಮ ಪರಮೋಚ ಗುರಿಯಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ ನಾರಾಯಣ ಗೌಡ ತಿಳಿಸಿದರು.

ಪಟ್ಟಣದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ “ವಿಜಯಸಂಕಲ್ಪ ಯಾತ್ರೆಯ” ರಥೋತ್ಸವ ಮೆರವಣಿಗೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಪತ್ರಿಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಸಮಗ್ರ ಅಭಿವೃದ್ಧಿ ಯೋಜನೆಗಳನ್ನು ಮುಂದಿಟ್ಟುಕೊಂಡು 2023ರ ವಿಧಾನಸಭಾ ಚುನಾವಣೆಯನ್ನು ಎದುರಿಸಲಿದ್ದೇವೆ, ಹಾಗೂ ಈ ಬಾರಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಲಿದ್ದೇವೆ ಎಂದು ಹೇಳೀದರು.

ದೇಶದ ಸರ್ಮಾಂಗೀಣ ಅಭಿವೃದ್ಧಿಗಾಗಿ ಗ್ರಾಮೀಣ ಅಭಿವೃದ್ಧಿ, ಕೌಶಲ ಅಭಿವೃದ್ಧಿ, ಶಿಕ್ಷಣ, ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ಸ್ಥಾಪನೆ, ಪೋಷನ್ ಅಭಿಯಾನ, ಮಹಾತ್ಮ ಗಾಂಧಿ ನರೇಗಾ, ನಗರಾಭಿವೃದ್ಧಿ, ಆತ್ಮ ನಿರ್ಧಾರ, ಗರಿಬ್ ಕಲ್ಯಾಣ ಯೋಜನೆ,  ಅಟಲ್ ಪಿಂಚಣಿ, ಸುರಕ್ಷಾ ಭೀಮ ಯೋಜನೆ, ಪಿಎಂ ಸ್ವನಿಧಿ ಯೋಜನೆ, ಉಜ್ವಲ ಯೋಜನೆ ಸೇರಿದಂತೆ ಅನೇಕ ಯೋಜನೆಗಳ ಮೂಲಕ ಜನಕಲ್ಯಾಣ ಮಾಡಲಾಗಿದೆ.

ಕೋಲಾರ ಜಿಲ್ಲೆಗೆ ಜಲಜೀವನ್ ಮಿಷನ್ ಯೋಜನೆಯ ಅಡಿಯಲ್ಲಿ ಸಾವಿರದ 400 ಕೋಟಿ ರೂ ವೆಚ್ಚದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಇದರೊಂದಿಗೆ ಎತ್ತಿನಹೊಳೆ ಯೋಜನೆ ಯರಗೋಳ್ ಯೋಜನೆಯನ್ನು ಸಮರ್ಪಕವಾಗಿ ನಿರ್ವಹಿಸಿದೆ. ನರಸಾಪುರ ಗ್ರಾಮದಲ್ಲಿ ಕೈಗಾರಿಕ ವಲಯವನ್ನು ಸ್ಥಾಪಿಸಲಾಗಿದ್ದು ಸಾವಿರಾರು ಜನರಿಗೆ ಉದ್ಯೋಗ ದೊರೆಯುತ್ತಿದೆ, ಇದರೊಂದಿಗೆ ಜಕ್ಕಸಂದ್ರ ದಲ್ಲಿ ನೂತನವಾಗಿ ಕೈಗಾರಿಕಾ ಪ್ರದೇಶವನ್ನು ನಿರ್ಮಿಸಲಾಗುವುದು.

ಎಲೆಕ್ಟ್ರಾನಿಕ್ ಮ್ಯಾನಿಫ್ಯಾಕ್ಚರಿಂಗ್ ಕ್ಲಸ್ಟರ್ ಅನ್ನು ಸ್ಥಾಪಿಸಿ ಸಂಪೂರ್ಣವಾಗಿ ನಿರುದ್ಯೋಗದ ಸಮಸ್ಯೆಯನ್ನು ನಿವಾರಿಸುವ ಪರಮೋಚ್ಚ ಗುರಿಯನ್ನು ಬಿಜೆಪಿ ಸರ್ಕಾರ ಹೊಂದಿದೆ, ಶೌಚಾಲಯ, ಕುಡಿಯುವನೀರು, ಮನೆಗಳ ನಿರ್ಮಾಣ, ನಿರುದ್ಯೋಗ ಸಮಸ್ಯೆ ನಿವಾರಣೆ ಮಹಿಳೆಯರ ರೈತರ ಸಬಲೀಕರಣಕ್ಕೆ ರಾಜ್ಯ ಬಿಜೆಪಿ ಬದ್ಧವಾಗಿದ್ದು ಚೆನ್ನೈ ಎಕ್ಸ್ಪ್ರೆಸ್ ಕಾರಿಡಾರ್ ರಸ್ತೆಯನ್ನು ನಿರ್ಮಿಸುವುದರೊಂದಿಗೆ ಪ್ರತಿಯೊಂದು ಗ್ರಾಮದಲ್ಲೂ ಸಮರ್ಪಕವಾದ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದ್ದು ಇತಿಹಾಸ ಪುಟದಲ್ಲಿ ಅವಿಸ್ಮರಣೆಯವಾಗಿ ಉಳಿದಿದೆ ಎಂದರು.

ಸಿದ್ದರಾಮಯ್ಯನವರು ಜಾತ್ಯಾತೀತ ಸಮಾಜವಾದ ತತ್ವದ ಉಪದೇಶಗಳನ್ನು ನೀಡುತ್ತಾರೆಯೇ ಹೊರತು ಅನುಸರಿಸುವುದಿಲ್ಲ, ಕಾಂಗ್ರೆಸ್ ಪಕ್ಷವೆಂದರೆ ವಂಶಪಾರಂಪರ್ಯ ಸ್ವಾರ್ಥರಾಜಕಾರಣದ ಪ್ರತಿರೂಪ, ಸಿದ್ದರಾಮಯ್ಯನವರು ವರುಣಾ ಕ್ಷೇತ್ರವನ್ನು ಆಸ್ತಿ ದಾನ ಮಾಡುವಂತೆ ತನ್ನ ಮಗನಿಗೆ ನೀಡಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಪ್ಪು ಚುಕ್ಕೆಯಂತಿದೆ.  ಸಿದ್ದರಾಮಯ್ಯನವರಿಗೆ ಕ್ಷೇತ್ರ ಇಲ್ಲದಂತಾಗಿದ್ದು ವರುಣ ಕ್ಷೇತ್ರದಿಂದ ಚಾಮುಂಡೇಶ್ವರಿ, ಬಾದಾಮಿ, ಬೆಂಗಳೂರು, ಹೀಗೆ ಸುತ್ತಾಡಿ ಕಡೆಗೆ ಕೋಲಾರದಲ್ಲಿ ಸ್ಪರ್ಧಿಸಲು ಸಿದ್ದರಾಗಿದ್ದಾರೆ, ಈ ಬಾರಿ ಬಿಜೆಪಿ ಪಕ್ಷದ ವತಿಯಿಂದ ಪ್ರಬಲ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದ್ದು ಸಿದ್ದರಾಮಯ್ಯನವರನ್ನು ಸೋಲಿಸುವುದು ನಿಶ್ಚಿತ ಎಂದರು.

ಈ ಕಾರ್ಯಕ್ರಮದಲ್ಲಿ ದೆಹಲಿ ಸಂಸದರಾದ ಮನೋಜ್ ತಿವಾರಿ.  ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ.  ಸಂಸದರಾದ ಎಸ್ ಮುನಿಸ್ವಾಮಿ, ಪಿ.ಸಿ ಮೋಹನ್. ಮಾಜಿ ಶಾಸಕರಾದ ಬಿ,. ವೆಂಕಟಮುರಿಯಪ್ಪ, ಎಂ ನಾರಾಯಣಸ್ವಾಮಿ. ವಿಧಾನ ಪರಿಷತ್ ಸದಸ್ಯ ಚಲವಾದಿ ನಾರಾಯಣಸ್ವಾಮಿ.  ಮುಖಂಡರಾದ ಕೆ ಚಂದ್ರಾರೆಡ್ಡಿ ಬಿವಿ ಮಹೇಶ್ ಅಮರೇಶ್ ನಾಗೇಶ್ ಹೊಸ ರಾಯಪ್ಪ ಚೌಡಪ್ಪ ಮಧುಸೂದನ್ ಕಪಾಲಿ ಶಂಕರ್ ಬಿಂದು ಮಾಧವ ಮಹದೇವಪ್ಪ ಹಾಗೂ ಅಪಾರ ಪ್ರಮಾಣದ ಕಾರ್ಯಕರ್ತರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You missed

error: Content is protected !!