PLACE YOUR AD HERE AT LOWEST PRICE
ಕೆಜಿಎಫ್:ತಾಲ್ಲೂಕಿನ ಟಿ.ಗೊಲ್ಲಹಳ್ಳಿ ಗ್ರಾಪಂಯ ಕಳ್ಳಿಕುಪ್ಪ ಗ್ರಾಮದ ಗ್ರಾಮ ದೇವತೆ ಗಂಗಮ್ಮ ದೇಗುಲ ಜಿರ್ಣೋಧ್ಧಾರಗೊಂಡು 48 ದಿನಗಳು ಪೂರ್ಣಗೊಂಡ ಹಿನ್ನಲೆ ಗ್ರಾಮದಲ್ಲಿ ಅಖಂಡ ಪೂಜೆ ನಡೆಸಲಾಯಿತು.
ಗ್ರಾಮ ದೇವತೆ ಗಂಗಮ್ಮ ದೇವಿಗೆ ವಿವಿಧ ಬಗೆಯ ಹೂಗಳಿಂದ ಅಲಂಕಾರ ಮಾಡಿ, ಅಭಿಷೇಕ, ವಿಶೇಷ ಪೂಜೆ ಸಲ್ಲಿಸಿ ಮಹಾಮಂಗಳಾರತಿ ನಡೆಯಿತು, ಅಖಂಡ ಪೂಜೆಯ ಪ್ರಯುಕ್ತ ದೇವಾಲಯವನ್ನು ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು.
ಗ್ರಾಮಸ್ಥರು ಅಖಂಡ ಪೂಜೆಯನ್ನು ಸಡಗರ ಸಂಭ್ರಮದಿಂದ ಟಗರುಗಳನ್ನು ಬಲಿ ನೀಡಿ ಪ್ರತಿ ಮನೆ-ಮನೆಯ ಬಳಿಯೂ ಸಂಬಂಧಿಕರಿಗೆ ಹಾಗೂ ಬೆಂಬಲಿಗರಿಗಾಗಿ ಭರ್ಜರಿ ಬಾಡೂಟವನ್ನು ಏರ್ಪಡಿಸಲಾಗಿತ್ತು.
ಗ್ರಾಮ ದೇವತೆ ಗಂಗಮ್ಮ ದೇವಾಲಯಕ್ಕೆ ಕ್ಷೇತ್ರದ ಶಾಸಕಿ ರೂಪಕಲಾ ಶಶಿಧರ್, ಮಾಜಿ ಶಾಸಕ ವೈ.ಸಂಪಂಗಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ, ಬಿಜೆಪಿ ಟಿಕೆಟ್ ಆಕಾಂಕ್ಷಿ ವಿ.ಮೋಹನ್ ಕೃಷ್ಣ, ಜಿಪಂ ಮಾಜಿ ಸದಸ್ಯರಾದ ಅ.ಮು.ಲಕ್ಷ್ಮೀನಾರಾಯಣ್, ವಿಜಯ ಶಂಕರ್, ಅಮರೇಶ್, ಟಿಎಪಿಎಂಎಸ್ ಅಧ್ಯಕ್ಷ ಪ್ರವೀಣ್ ಕುಮಾರ್, ಉಪಾಧ್ಯಕ್ಷ ಲಕ್ಷ್ಮೀಪತಿ, ಎಪಿಎಂಸಿ ಅಧ್ಯಕ್ಷ ವಿಜಯರಾಘವರೆಡ್ಡಿ, ತಾಪಂ ಮಾಜಿ ಅಧ್ಯಕ್ಷರಾದ ಹಂಗಳ ಮಮತ ಗಣೇಶ್, ರಾಮಕೃಷ್ಣರೆಡ್ಡಿ ಮೊದಲಾದವರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.