ಕೆಜಿಎಫ್
ಕೋಲಾರ
ತಾಲ್ಲೂಕು ಸುದ್ದಿ
ದೇಶ
ನಮ್ಮ ಕೋಲಾರ
ಪ್ರಪಂಚ
ಬಂಗಾರಪೇಟೆ
ಮಕ್ಕಳ ಸುದ್ದಿ
ಮಾಲೂರು
ಮುಳಬಾಗಿಲು
ರಾಜಕೀಯ
ರಾಜ್ಯ ಸುದ್ದಿ
ಶ್ರೀನಿವಾಸಪುರ
PLACE YOUR AD HERE AT LOWEST PRICE
ಬಂಗಾರಪೇಟೆ:ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಸಾವನಪ್ಪಿರುವ ಘಟನೆ ತಾಲ್ಲೂಕಿನ ಮಾಕಾರಹಳ್ಳಿಯಲ್ಲಿ ನಡೆದಿದೆ.
ತಾಲ್ಲೂಕು ಮಾಕಾರಹಳ್ಳಿ ಗ್ರಾಮದ ಷಂಶೇಂದ್ರ (17) ಮತ್ತು ದರ್ಶನ್ (16) ಮೃತ ವಿಧ್ಯಾರ್ಥಿಗಳಾಗಿದ್ದು, ಇಬ್ಬರೂ ಸಹ ಪ್ರಥಮ ಪಿಯುಸಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದರು.
ಬೇಸಿಗೆ ಆರಂಭವಾಗಿದ್ದರಿಂದ ಕಳೆದೊಂದು ವಾರದಿಂದ ಗ್ರಾಮದ ಕೆರೆಯಲ್ಲಿ ಈಜಲು ಇಬ್ಬರೂ ಸಹ ಹೋಗುತ್ತಿದ್ದರು.
ಷಂಶೇಂದ್ರಗೆ ಈಜು ಬರದ ಕಾರಣ ಸೊಂಟಕ್ಕೆ ಡಬ್ಬ ಕಟ್ಟಿಕೊಂಡು ಈಜು ಕಲಿಯಲು ನೀರಿಗೆ ಇಳಿದಿದ್ದಾನೆ.
ಸ್ವಲ್ಪ ಆಳಕ್ಕೆ ಹೋಗುತ್ತಿದ್ದಂತೆ ಸೊಂಟಕ್ಕೆ ಕಟ್ಟಿದ್ದ ಡಬ್ಬ ಕಳಚಿ ಕೆರೆಯಿಂದ ಹೊರಬರಲು ಸಾಧ್ಯವಾಗದೆ ಒದ್ದಾಡಿದ್ದಾನೆ.
ದರ್ಶನ್ಗೆ ಈಜು ಬರುತ್ತಿದ್ದು, ಸ್ನೇಹಿತನನ್ನು ರಕ್ಷಿಸಲು ಹೋಗಿ ಕೆರೆಯಿಂದ ಹೊರಬರಲು ಸಾಧ್ಯವಾಗದೆ ಇಬ್ಬರೂ ಸಹ ಸಾವನ್ನಪ್ಪಿದ್ದಾರೆ.
ಅಗ್ನಿಶಾಮಕದಳ ಮತ್ತು ಕಾಮಸಮುದ್ರ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಮೃತ ದೇಹಗಳನ್ನು ಹೊರತೆಗೆದಿದ್ದಾರೆ.