PLACE YOUR AD HERE AT LOWEST PRICE
ಕೆಜಿಎಫ್:ಬೇತಮಂಗಲ-ವಿ.ಕೋಟ ಮುಖ್ಯ ರಸ್ತೆಯ ಬೆಟ್ಕೂರು ಕ್ರಾಸ್ ಬಳಿ ಬೀಕರ ಅಪಘಾತ ಸಂಭವಿಸಿ ಸ್ಥಳದಲ್ಲಿಯೇ ದ್ವಿಚಕ್ರ ವಾಹನ ಸವಾರ ವೆಂಕಟರೆಡ್ಡಿ ಮೃತ ಪಟ್ಟಿರುವ ಘಟನೆ ನಡೆದಿದೆ.
ಬೆಟ್ಕೂರು ಕ್ರಾಸ್ ಬಳಿ ಕಾರಿಡಾರ್ ರಸ್ತೆ ಕಾಮಗಾರಿಗೆ ಮಣ್ಣು ಸರಬರಾಜು ಮಾಡುತ್ತಿರುವ ಟಿಪ್ಪರ್ ಲಾರಿ ವಾಹನ ಸವಾರನ ಮೇಲೆ ಹಾರಿದ ಪರಿಣಾಮ ವಾಹನ ಸವಾರ ಕೊಡಪಲ್ಲಿ ವೆಂಕಟರೆಡ್ಡಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ.
ಕಾರಿಡಾರ್ ರಸ್ತೆ ಕಾಮಗಾರಿಯ ಟಿಪ್ಪರ್ ಲಾರಿ ವಾಹನ ಸವಾರನನ್ನು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ವಾಹನ ಸವಾರ ವೆಂಕಟರೆಡ್ಡಿ ವಾಹನದಿಂದ ಕೆಳಗ ಬಿದ್ದಿದ್ದು, ಟಿಪ್ಪರ್ ಲಾರಿ ಆತನ ದೇಹದ ಮೇಲೆ ಹರಿದು ಹೋಗಿದೆ.
ಬೇತಮಂಗಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡು ಮೃತ ದೇಹವನ್ನು ಕೆಜಿಎಫ್ ಸಾರ್ವಜನಿಕರ ಆಸ್ಪತ್ರೆ ಶವಗಾರಕ್ಕೆ ಸಾಗಿಸಲಾಯಿತು.
ಕೆಜಿಎಫ್ ತಾಲ್ಲೂಕಿನಲ್ಲಿ ಕಾರಿಡಾರ್ ರಸ್ತೆ ಕಾಮಗಾರಿ ಪ್ರಾರಂಭವಾದಗಿನಿಂದಲ್ಲೂ ನಿತ್ಯ ವಾಹನ ಸವಾರರಿಗೆತೊಂದರೆಯಾಗುತ್ತಿದ್ದು, ಅನೇಕರು ಅಪಘಾತಗಳಿಗೆ ತುತ್ತಾಗಿದ್ದಾರೆ. ಇಂತಹ ಕಾರಿಡಾರ್ ರಸ್ತೆಯ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮಕೂಗೊಳ್ಳಬೇಕೆಂದು ಸಾರ್ವಜನಿಕರು ಆಕ್ರೋಶ ಹೊರ ಹಾಕಿದರು.