PLACE YOUR AD HERE AT LOWEST PRICE
ಬಂಗಾರಪೇಟೆ:ತಾಲ್ಲೂಕಿಗೆ ಬಿ.ಜೆ.ಪಿ ಮತ್ತು ಜೆ.ಡಿ.ಎಸ್ ಪಕ್ಷದ ಅಭ್ಯರ್ಥಿಗಳ ಕೊಡುಗೆ ಏನು ಎಂದು ಕಾಂಗ್ರೇಸ್ ಅಭ್ಯರ್ಥಿ ಎಸ್.ಎನ್. ನಾರಾಯಣಸ್ವಾಮಿ ಪ್ರಶನಿಸಿದರು.
ತಾಲ್ಲೂಕಿನ ಮಾವಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಾವಹಳ್ಳಿ, ಚಲಗಾನಹಳ್ಳಿ, ವಾದಂಡಹಳ್ಳಿ, ನಾಯಕರಹಳ್ಳಿ, ಮಂಚಹಳ್ಳಿ, ಆಲಗಾನಹಳ್ಳಿ, ಕಾಮಾಂಡಹಳ್ಳಿ ಗ್ರಾಮಗಳಲ್ಲಿ ಮತಯಾಚನೆ ಮಾಡಿ ಅವರು ಮಾತನಾಡಿದರು.
ಚುನಾವಣೆ ಬಂದಾಗ ನಿಮ್ಮ ಗ್ರಾಮಗಳಿಗೆ ಬರುವ ಮುಖಂಡರುಗಳು ನಿಮಗೆ ಬೇಕಾ, ಕಷ್ಟಗಳು ಬಂದಾಗ ನಿಮ್ಮ ಕಷ್ಟಗಳಿಗೆ ಸ್ಪಂದಿಸುವ ವ್ಯಕ್ತಿ ಬೇಕಾ ಆಯ್ಕೆ ನಿಮ್ಮ ಕೈಯಲ್ಲಿದೆ ಎಂದರು.
ಹತ್ತು ವರ್ಷಗಳ ಹಿಂದೆ ನಿಮ್ಮ ಗ್ರಾಮದ ಸ್ವರೂಪ ಮತ್ತು ಈಗಿರುವ ಸ್ವರೂಪ ಹೇಗಿದೆ ಅಭಿವೃದ್ಧಿ ಆಗಿದೆಯೇ ಇಲ್ಲವೆ ಎಂಬುದನ್ನು ನೀವೇ ಮೆಲುಕು ಹಾಕಬೇಕು.
ನಿಮ್ಮ ಗ್ರಾಮಗಳಿಗೆ ಸಿ.ಸಿ ರಸ್ತೆ, ಚರಂಡಿ, ಟಾರು ರಸ್ತೆ, ಹೈಮಾಸ್ಟ್ ದೀಪ, ಶುದ್ದ ನೀರಿನ ಘಟಕ ಹತ್ತು ಹಲವಾರು ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದೇನೆ.
ನಾನು ಮಾಡಿರುವ ಅಭಿವೃದ್ದಿ ಕೆಲಸಗಳನ್ನು ತಮ್ಮ ಮುಂದೆ ಇಟ್ಟು ತಮ್ಮಲ್ಲಿ ಮತಯಾಚನೆ ಮಾಡುತ್ತಿದ್ದೇನೆ.
ಈ ಹಿಂದೆ ಕಾಂಗ್ರೇಸ್ ಸರ್ಕಾರ ಪ್ರಾರಂಬಿಸಿದ್ದ ಕೃಷಿಭಾಗ್ಯ, ಅನ್ನಭಾಗ್ಯ, ಕ್ಷೀರಭಾಗ್ಯ, ವಿದ್ಯಾಸಿರಿ ಭಾಗ್ಯಗಳನ್ನು ಪುನಃ ಪ್ರಾರಂಬಿಸಲಿದ್ದೇವೆ.
ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಅಧಿಕಾರ ವಹಿಸಿಕೊಂಡಾಗ ಮಾತ್ರ ಏನಾದರೂ ಸಾಧನೆ ಮಾಡಲು ಸಾದ್ಯ. ಎಂದರು.
ಅನ್ಯ ಪಕ್ಷದ ಮುಖಂಡರುಗಳು ಗ್ರಾಮಗಳಿಗೆ ಬಂದು ಯುವಕರನ್ನು ಪ್ರಚೋದನೆ ಮಾಡಿ ಹಾಳು ಮಾಡುತ್ತಿದ್ದಾರೆ.
ಹಿಂದಿನ ದಿನಗಳಲ್ಲಿ ಪ್ರಚೋದನೆ ಮಾಡಿ ರೌಡಿಸಂ ಮಾಡುತ್ತಿದ್ದವರು ಈಗ ಇದ್ದಾರಾ? ಅದೆಲ್ಲವೂ ಶಾಶ್ವತವಲ್ಲ. ನಾನು ಶಾಸಕನಾದ ಮೇಲೆ ಯಾರಿಗೂ ತೊಂದರೆ ನೀಡಿಲ್ಲ,
ರೌಡಿಸಂ ಮಾಡಲು ಬಿಡಲಿಲ್ಲ. ಸ್ಥಳೀಯವಾಗಿ ಗಲಾಟೆ ನಡೆದರೂ ಯಾರಿಗೂ ತೊಂದರೆ ನೀಡಿಲ್ಲ. ಯಾರು ಎಷ್ಟೇ ತೊಂದರೆಗಳನ್ನು ನೀಡಿದ್ದರು ಎಲ್ಲರನ್ನೂ ಸಮಾನವಾಗಿ ಕರೆದೊಯ್ಯುತ್ತಿದ್ದೇನೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅದ್ಯಕ್ಷ ಎಸ್. ನಾರಾಯಣಗೌಡ, ಪಿ.ೆಲ್.ಡಿ ಬ್ಯಾಂಕ್ ಅದ್ಯಕ್ಷ ಹೆಚ್.ಕೆ ನಾರಾಯಣಸ್ವಾಮಿ, ಕಾರಹಳ್ಳಿ ಮೇಸ್ತ್ರೀ ಸೀನಪ್ಪ, ಆನಂದ ಗೌಡ, ತಿಮ್ಮಪ್ಪ, ಅಮರೇಶ್, ಕೆಂಪಣ್ಣ ಮೊದಲಾದವರಿದ್ದರು.