PLACE YOUR AD HERE AT LOWEST PRICE
ಧರ್ಮ ರಕ್ಷಣೆಗೆ ಕೆಲಸ ಮಾಡುತ್ತಿರುವ ಬಜರಂಗದಳವನ್ನು ಪಿಎಫ್ಐಗೆ ಸಮಾನವಾಗಿ ಕಾಣುವ ಕಾಂಗ್ರೆಸ್ ಪಕ್ಷ ತಾಕತ್ತಿದ್ದರೆ ನಿಷೇಧ ಮಾಡಲಿ – ಬಜರಂಗದಳದ ಬಾಲಾಜಿ ಸವಾಲು
ಕೋಲಾರ: ಧರ್ಮ ರಕ್ಷಣೆಗೆ ಕಂಕಣ ತೊಟ್ಟುಕೆಲಸ ಮಾಡುತ್ತಿರುವ ಬಜರಂಗದಳವನ್ನು ಪಿಎಫ್ಐಗೆ ಸಮಾನವಾಗಿ ಕಾಣುವ ಕಾಂಗ್ರೆಸ್ ಪಕ್ಷ ತಾಕತ್ತಿದ್ದರೆ ನಿಷೇಧ ಮಾಡಲಿ ಎಂದು ಜಿಲ್ಲಾ ಬಜರಂಗದಳ ಮುಖಂಡ ಬಾಲಾಜಿ ಸವಾಲು ಹಾಕಿದ್ದಾರೆ.
ರಾಷ್ಟ್ರೀಯತೆ ಹಾಗೂ ಧರ್ಮದ ಪರವಾಗಿ ಬಹುಸಂಖ್ಯಾತರ ನೇತೃತ್ವ ವಹಿಸಿ ಕೆಲಸ ಮಡುವ ಬಜರಂಗದಳವನ್ನು ನಿಷೇಧ ಮಾಡುವುದಾಗಿ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡುವ ಮೂಲಕ ಕಾಂಗ್ರೆಸ್ ವಿನಾಶದ ಅಂಚಿಗೆ ತಲುಪಿದ್ದು, ಬಜರಂಗದಳವನ್ನು ನಿಷೇದ ಮಾಡಿದರೆ ಅದಕ್ಕೆ ತಕ್ಕ ಪಾಠ ಕಲಿಸಿ ಉತ್ತರ ನೀಡುತ್ತೇವೆ ಎಂದ ಅವರು, ಈ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಹಿಂದೂ ಧರ್ಮ ವಿರೋಧಿ ನೀತಿಯನ್ನು ಸಮಾಜದ ಪ್ರತಿಯೊಬ್ಬರೂ ಗಮನಿಸಬೇಕು ಎಂದು ತಿಳಿಸಿರುವ ಅವರು, ಬಜರಂಗದಳ ಎಲ್ಲಾದರೂ ರಾಷ್ಟçವಿರೋಧಿ, ಭಯೋತ್ಪಾದನೆ ಸಂಘಟನೆಯಾಗಿದೆಯೇ ಎಂದು ಪ್ರಶ್ನಿಸಿ, ಇದು ಧರ್ಮ ರಕ್ಷಣೆಗೆ ಹುಟ್ಟಿರುವ ಸಂಘಟನೆಯಾಗಿದ್ದು, ಕಾಂಗ್ರೆಸ್ ಪಕ್ಷದ ಇಂತಹ ಪ್ರಯತ್ನಗಳಿಗೆ ತಕ್ಕ ಉತ್ತರ ನೀಡುತ್ತದೆ ಎಂದು ತಿಳಿಸಿದ್ದಾರೆ.