• Fri. Mar 29th, 2024

PLACE YOUR AD HERE AT LOWEST PRICE

ಕೋಲಾರ / ಜೂನ್ ೦೬ : ರಾಜ್ಯ ಯುವ ಪ್ರಶಸ್ತಿ ವಿಜೇತ ಜಾನಪದ ಗಾರುಡಿಗ ಜನ್ನಘಟ್ಟ ಕೃಷ್ಣಮೂರ್ತಿ ರವರ ವೈಕುಂಠ ಸಮಾರಾದನೆ ಕಾರ್ಯಕ್ರಮವನ್ನು ಜೂನ್ ೮ರಂದು ಗುರುವಾರ ಮೃತರ ಸ್ವಗೃಹ ಕೋಲಾರ ತಾಲ್ಲೂಕು ಜನ್ನಘಟ್ಟ ಗ್ರಾಮದಲ್ಲಿ ನಡೆಯಲಿದೆ. ಇದೇ ದಿನ ರಾತ್ರಿ ೮-೦೦ ಗಂಟೆ ಜಿಲ್ಲೆಯ ಕಲಾವಿದರಿಂದ ಜಾನಪದ ಗಾಯನ, ತತ್ವಪದ ಗಾಯನ, ಭಜನೆ ಪದ, ಕಿರು ನಾಟಕ ಇನ್ನೂ ಮುಂತಾದ ಸಾಂಸ್ಕೃತಿ ಕಾರ್ಯಕ್ರಮಗಳು ನಡೆಯಲಿದೆ.

ದಯಮಾಡಿ ಕರ್ನಾಟಕ ರಾಜ್ಯದ ಹಾಗೂ ವಿಶೇಷವಾಗಿ ಕೋಲಾರ ಜಿಲ್ಲೆಯ ಕಲಾವಿದರು ಹಾಗೂ ಎಲ್ಲಾ ನಾಗರೀಕ ಬಂಧುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಬೇಕೆಂದು ಜನ್ನಘಟ್ಟ ಕೃಷ್ಣಮೂರ್ತಿರವರ ತಾಯಿ ಚೌಡಮ್ಮ ಮತ್ತು ತಂಗಿ ಕಲಾವಿದೆ ರೇಣುಕಾ ರವರು ಕೋರಿದ್ದಾರೆ.

 

 

Leave a Reply

Your email address will not be published. Required fields are marked *

You missed

error: Content is protected !!