• Sat. Apr 20th, 2024

PLACE YOUR AD HERE AT LOWEST PRICE

ಬಂಗಾರಪೇಟೆ.ಪಟ್ಟಣದ ಪಟ್ಟಾಭಿಶೇಕೋದ್ಯಾನವನದಲ್ಲಿ ದಶಕಗಳಿಂದ ವಾಲಿಬಾಲ್ ಆಡುತ್ತಿದ್ದವರಿಗೆ ಪುರಸಭೆ ಯಾವುದೇ ನೋಟಿಸ್ ನೀಡದೆ ಏಕಾಏಕಿ ವಾಲಿಬಾಲ್ ಕೋರ್ಟ್‍ನ್ನು ತೆರವುಗೊಳಿಸಿರುವುದನ್ನುಕ್ರೀಡಾ ಪ್ರೇಮಿಗಳು ತೀವ್ರವಾಗಿ ಖಂಡಿಸಿದ್ದಾರೆ.

ಈ ವೇಳೆ  ಜಿಲ್ಲಾ ವಾಲಿಬಾಲ್ ಸಂಘದ ಅಧ್ಯಕ್ಷ ಪಲ್ಲವಿಮಣಿ ಮಾತನಾಡಿ, ಪಟ್ಟಣದ ನಾಗರೀಕರಿಗೆ ಅನುಕೂಲವಾಗಲೆಂದು ದಾನಿಯೊಬ್ಬರು ನೀಡಿದ್ದಉದ್ಯಾನವನ ಜಾಗದಲ್ಲಿ ಎಲ್ಲಾ ವರ್ಗದವರು ಆಟವಾಡಲು ಅನುಕೂಲವಾಗಿತ್ತು..

ಆದರೆ ಪುರಸಭೆ ಪಾರ್ಕ್‍ನಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣಕ್ಕೆ ಮುಂದಾದಾಗ ಸಾರ್ವಜನಿಕರೊಬ್ಬರು ಕೋರ್ಟ್ ಮೆಟ್ಟಿಲೇರಿ ಪಾರ್ಕ್‍ಗಾಗಿ ಇರುವ ಜಾಗದಲ್ಲಿ ಕಟ್ಟಡಗಳು ಕಟ್ಟದಂತೆ ಯಥಾಸ್ಥಿತಿ ಕಾಪಾಡುವಂತೆ ಕೋರ್ಟ್‍ನಿಂದ ತಡೆ ತಂದಿದ್ದರು.

ಆದರೆ ದಶಕಗಳಿಂದ ಪಾರ್ಕ್‍ನಲ್ಲಿ ವಾಲಿಬಾಲ್ ಆಡುತ್ತಿದ್ದವರು ಯಾವುದೇ ಕಟ್ಟಡ ಕಟ್ಟದೆ ಇರುವ ಜಾಗದಲ್ಲೆ ನಿತ್ಯ ಅಭ್ಯಾಸ ಮಾಡುತ್ತಿದ್ದರು. ಆದರೆ ಪುರಸಭೆ ಪಾರ್ಕ್‍ನಲ್ಲಿ ಇಂದಿರಾ ಕ್ಯಾಂಟೀನ್,ರಂಗಮಂದಿರ ನಿರ್ಮಾಣ ಮಾಡುತ್ತಿದೆ, ಬೃಹತ್ ನೀರಿನ ಟ್ಯಾಂಕ್ ನಿರ್ಮಾಣ ಮಾಡಿದೆ.

ಕೋರ್ಟ್ ಈ ಕಟ್ಟಡಗಳನ್ನು ತೆರವುಗೊಳಿಸಲು ಆದೇಶ ನೀಡಿದರೆ ಅದನ್ನು ಮುಟ್ಟದೆ ವಾಲಿಬಾಲ್ ಆಡುವವರನ್ನು ಮಾತ್ರ ತೆರವು ಮಾಡಿರುವುದರ ಹಿಂದೆ ಕಾಣದ ರಾಜಕೀಯ ವ್ಯಕ್ತಿಗಳ ಕೈವಾಡವಿದೆ ಎಂದು ಆರೋಪಿಸಿದರು. ಪಾರ್ಕ್ ಇರುವುದೇ ಆಡಲು ಅದನ್ನು ಬೇಡವೆನ್ನಲು ಪುರಸಭೆಗೆ ಅಧಿಕಾರವಿಲ್ಲ ಎಂದು ಕಿಡಿಕಾರಿದರು.

ಅಲ್ಲದೆ ಕೋರ್ಟ್ ಆದೇಶದ ಪ್ರತಿ ನೀಡಿ ಎಂದರೆ ನೀಡದೆ ಸಬೂಬು ಹೇಳುವರು ಎಂದು ಮುಖ್ಯಾಧಿಕಾರಿ ಚಲಪತಿ ಧೋರಣೆಯನ್ನು ಖಂಡಿಸಿದರು. ಕೋರ್ಟ್ ಸೂಚನೆಯಲ್ಲಿ ಪಾರ್ಕ್‍ನಲ್ಲಿ ವಾಲಿಬಾಲ್ ಆಡಬಾರದೆಂದು ಆದೇಶವಿದ್ದರೆ ನಾವು ಅದನ್ನು ಗೌರವಿಸುವೆವು.

ಅದು ಬಿಟ್ಟು ಕೋರ್ಟ್ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲು ಆದೇಶ ನೀಡಿ 14ವರ್ಷಗಳ ನಂತರ ಈಗ ದಿಡೀರನೆ ಪುರಸಭೆಗೆ ಜಾÐನೋದಯವಾಗಿ ಕಟ್ಟಡಗಳನ್ನು ತೆರವು ಮಾಡದೆ ಕ್ರಿಡಾಭ್ಯಾಸ ಮಾಡುವವರನ್ನು ಎತ್ತಂಗಡಿ ಮಾಡಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ನಾವು ಯಾರ ವಿರುದ್ದವೂ ಹೋರಾಟ ಮಾಡಲ್ಲ ನ್ಯಾಯಕ್ಕಾಗಿ ನ್ಯಾಯಾಂಗದಲ್ಲೆ ಹೋರಾಟ ಮಾಡುವೆವು. ಕೆಜಿಎಫ್‍ನಲ್ಲಿಯೂ ಸಹ ಪಾರ್ಕ್‍ನಲ್ಲಿ ಅಕ್ರಮ ಕಟ್ಟಡ ಕಟ್ಟಿದ ಪರಿಣಾಮ ತೆರವಿಗೆ ಹೈಕೋರ್ಟ್ ಆರು ತಿಂಗಳು ಗಡುವು ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು ಎಂದು ತಿಳಿಸಿದರು.

ಪುರಸಭೆ ದಿಡೀರನೆ ವಾಲಿಬಾಲ್ ಕೋರ್ಟ್ ತೆರವು ಮಾಡಿರುವುದರ ವಿರುದ್ದ ಸಿಡಿದೆದ್ದಿರುವ ಡಾಃಅಂಬೇಡ್ಕರ್ ವಾಲಿಬಾಲ್ ಕ್ಲಬ್ ಹಾಗೂ ಕ್ರೀಡಾ ಪ್ರೇಮಿಗಳು ಪುರಸಭೆ ಮುಖ್ಯಾಧಿಕಾರಿಗೆ ಕೋರ್ಟ್ ಆದೇಶ ಪ್ರತಿ ನೀಡಬೇಕೆಂದು ಪಟ್ಟುಹಿಡಿದು ಮನವಿ ನೀಡಿ ಕೆಲಕಾಲ ಆಟದ ಮೈದಾನದಲ್ಲಿ ಕುಳಿತು ಆಕ್ರೋಶವ್ಯಕ್ತಪಡಿಸಿದರು

Related Post

2024ರ ಲೋಕಸಭಾ ಚುನಾವಣೆ ಸಂವಿಧಾನ ಪರ ಮತ್ತು ಸಂವಿಧಾನ ವಿರೋಧಿ ಧೋರಣೆ ಹಾಗೂ ಮನಸ್ಥಿತಿಗಳ ನಡುವಿನ ಯುದ್ಧವಾಗಿದೆ – ಎಂ.ಎಲ್.ಸಿ. ಸುಧಾಮದಾಸ್
ಶೇ.೯೦ ರಷ್ಟು ದೇಶದ ಸಮುದಾಯಗಳು ಮುಖ್ಯವಾಹಿನಿ ಮಾದ್ಯಮಗಳಲ್ಲಿ, ಕಾರ್ಪೋರೇಟ್ ವಿಭಾಗದಲ್ಲಿ ಮತ್ತು ಅತ್ಯುನ್ನತ ಸರ್ಕಾರಿ ಹುದ್ದೆಗಳಲ್ಲಿ ಭಾಗವಹಿಸುವಿಕೆ ಇಲ್ಲ! : ರಾಹುಲ್ ಗಾಂಧಿ
ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಅನ್ಯಾಯ ಮಾಡಿವೆ : ಸಮುದಾಯ ಮುಖಂಡರ ಆಕ್ರೋಶ,

Leave a Reply

Your email address will not be published. Required fields are marked *

You missed

error: Content is protected !!