• Tue. Apr 30th, 2024

PLACE YOUR AD HERE AT LOWEST PRICE

ಕೆಜಿಎಫ್:ಇತ್ತೀಚೆಗೆ ರಾಬರ್ಟ್ಸನ್‌ಪೇಟೆ ಪೊಲೀಸ್ ಠಾಣಾ ಸರಹದ್ದಿನ ಬ್ಯಾಂಕ್‌ಗಳಲ್ಲಿ ಹೆಚ್ಚಿಗೆ ಹಣ ಡ್ರಾ ಮಾಡುವ ವ್ಯಕ್ತಿಗಳನ್ನು ಹಿಂಬಾಲಿಸಿ ಅವರ ಬಳಿ ಇದ್ದ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ 2 ಕಳವು ಪ್ರಕರಣಗಳು ದಾಖಲಾಗಿದ್ದು, ಸದರಿ ಕಳ್ಳರ ತಂಡವನ್ನು ಪತ್ತೆ ಮಾಡುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ.

ಕೆಜಿಫ್ ಎಸ್.ಪಿ ಕೆ.ಎಂ. ಶಾಂತರಾಜು ಮತ್ತು ಡಿ.ವೈ.ಎಸ್.ಪಿ ವಿ.ಎಲ್. ರಮೇಶ್ ರ  ಮಾರ್ಗದರ್ಶನದಲ್ಲಿ ರಾಬರ್ಟ್ಸನ್‌ಪೇಟೆ ವೃತ್ತ ನಿರೀಕ್ಷಕರ ಕುಮಾರಸ್ವಾಮಿ.ಟಿ.ಆರ್ ರ  ಮುಂದಾಳತ್ವದಲ್ಲಿ 2 ಪ್ರಕರಣಗಳಲ್ಲಿ ಮೂರು ಜನ ಆರೋಪಿಗಳನ್ನು ದಸ್ತಗಿರಿ ಮಾಡಿ ಇವರಿಂದ ಕೃತ್ಯಕ್ಕೆ ಬಳಸಿದ 2 ಪಲ್ಸರ್ ದ್ವಿ-ಚಕ್ರ ವಾಹನಗಳು ಮತ್ತು 4 ಲಕ್ಷ (ನಾಲ್ಕು ಲಕ್ಷ) ರೂ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ದಾಳಿ ತಂಡದಲ್ಲಿ ರಾಬರ್ಟ್ಸನ್‌ಪೇಟೆ ಎಸ್.ಐ ತ್ಯಾಗರಾಜ್.ಎಂ, ಎ.ಎಸ್.ಐ ವೆಂಕಟೇಶ್, ಸಿಬ್ಬಂದಿ ಗೋಪಿನಾಥ್, ಮಂಜುನಾಥರೆಡ್ಡಿ, ರಘು, ಧನ್‌ಸಿಂಗ್, ಮುರಳಿ, ಚೇತನ್ ಯಾದವ್ ಇದ್ದರು. ತಂಡವು ಉತ್ತಮ ಕಾರ್ಯವನ್ನು ಮಾಡಿದೆ ಎಂದು ಎಸ್.ಪಿ ಕೆ.ಎಂ. ಶಾಂತರಾಜು ಅಭಿನಂದಿಸಿದ್ದಾರೆ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!