PLACE YOUR AD HERE AT LOWEST PRICE
ಕೆಜಿಎಪ್ ನಲ್ಲಿ ಮತ್ತೆ ಮಚ್ಚು ಲಾಂಗು ಝಳಪಳಿಸಿದ್ದು ಮಾರಕಾಸ್ತ್ರಗಳಿಂದ ವ್ಯಕ್ತಿಯನ್ನ ಕೊಚ್ಚಿ ಕೊಲೆ ಮಾಡಿರುವ ಘಟನೆ ಜರುಗಿದೆ.
ಕೆಜಿಎಫ್ ನಗರದ ತಾಲ್ಲೂಕು ಕಛೇರಿ ಹಿಂಬಾಗ ಈ ದುರ್ಘಟನೆ ನಡೆದಿದ, 33 ವರ್ಷದ ರಾಜೇಶ್ ಕುಮಾರ್ ಕೊಲೆಯಾದ ಮೃತ ದುರ್ದೈವಿಯಾಗಿದ್ದು, ಮೃತ ವ್ಯಕ್ತಿ ಕೆಜಿಎಫ್ನ ಅಂಬೇಡ್ಕರ್ ನಗರದ ನಿವಾಸಿಯಾಗಿದ್ದು ಪೇಂಟರ್ ಕೆಲ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಮೃತ ರಾಜೇಶ್ ಕುಮಾರ್ ನೆನ್ನೆ ಸಂಜೆ ಮನೆಯಿಂದ ಸ್ನೇಹಿತರೊಂದಿಗೆ ಹೊರಗೆ ತೆರೆದಿದ್ದು, ಹಳೇ ದ್ವೇಷದ ಹಿನ್ನೆಲೆ ಮಾರಕಾಸ್ತ್ರಗಳಿಂದ ಪೈಟರ್ ರಾಜೇಶ್ ಕುಮಾರ್ ನನ್ನು ಕೊಚ್ಚಿ ಕೊಲೆ ಮಾಡಲಾಗಿದೆ.
ಕೇವಲ ಮೂರು ದಿನದ ಅಂತರದಲ್ಲಿ ಎರಡನೇ ಕೊಲೆ ಇದಾಗಿದ್ದು ಕೆಜಿಎಫ್ ನಗರದ ಜನತೆ ಬೆಚ್ಚಿ ಬಿದ್ದಿದ್ದಾರೆ. ಘಟನಾ ಸ್ಥಳಕ್ಕೆ ಕೆಜಿಎಫ್ ಎಸ್ಟಿ ಧರಣೀದೇವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೆಜಿಎಫ್ ನ ರಾಬರ್ಟ್ ಸನ್ ಪೇಟ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕೊಲೆ ಆರೋಪಿಗಳಿಗೆ ತೀವ್ರ ಶೋದ ನಡೆಸುತ್ತಿದ್ದಾರೆ.