PLACE YOUR AD HERE AT LOWEST PRICE
ಕೆಜಿಎಫ್: ಬೇತಮಂಗಲ ಹೊಸ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಶ್ರೀ ಸಪ್ಲಮ್ಮ ದೇಗುಲ ನಿರ್ಮಾಣಕ್ಕೆ ಸಮಾಜ ಸೇವಕ ಹಾಗೂ ಾರ್.ಕೆ.ಫೌಂಟಡೇಷನ್ ಅದ್ಯಕ್ಷ ವಿ.ಮೋಹನ್ ಕೃಷ್ಣ ಆರ್ಥಿಕ ನೆರವು ನೀಡಿದರು.
ಸಪ್ಲಮ್ಮ ದೇಗುಲ ನಿರ್ಮಾಣ ಕಾಮಗಾರಿಗೆ ಬುಧವಾರ ಬೆಳಿಗ್ಗೆ ಗ್ರಾಮದ ಹಿರಿಯರು ಹಾಗೂ ದೇಗುಲ ಸಮತಿಯಿಂದ ಪೂಜೆ ಸಲ್ಲಿಸಿ, ಕಾಮಗಾರಿ ಪ್ರಾರಂಭಿಸಿದ ವೇಳೆ ಮೋಹನಕೃಷ್ಣ ಮಾತನಾಡಿ, ಗ್ರಾಮಗಳಲ್ಲಿ ದೇಗುಲ ನಿರ್ಮಾಣದಿಂದ ಶಾಂತಿ-ಸುವ್ಯವಸ್ಥೆ ಸೃಷ್ಠಿಯಾಗಲಿದೆ, ಈಗಾಗಲೇ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ದೇವಾಲಯಗಳ ನಿರ್ಮಾಣಕ್ಕೆ ಕೈಲಾದಷ್ಟು ಆರ್ಥಿಕ ಸಹಾಯ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷರಾದ ಗೋಪಾಲಪ್ಪ, ಗ್ರಾಪಂ ಸದಸ್ಯರಾದ ಅನಂದ್, ರೇಣುಕಾ ಸೋಮಣ್ಣ, ಸೊಸೈಟಿ ಉಪಾಧ್ಯಕ್ಷ ಮೇಸ್ತ್ರಿ ವೆಂಕಟೇಶ್, ಗ್ರಾಪಂ ಮಾಜಿ ಸದಸ್ಯ ವೆಂಕಟೇಶ್, ದೇಗುಲ ಸಮಿತಿಯ ತಾಯಪ್ಪ, ವೆಂಕಟೇಶಪ್ಪ, ರಾಮಚಂದ್ರಪ್ಪ, ನಾಗರಾಜ್, ಗಂಗಿರೆಡ್ಡಿ, ಕೃಷ್ಣಪ್ಪ, ನಂದೀಶ್ ಮೊದಲಾದವರಿದ್ದರು.