PLACE YOUR AD HERE AT LOWEST PRICE
ತೆಲಂಗಾಣದಲ್ಲಿ ನೂತನವಾಗಿ ನಿರ್ಮಿಸಿರುವ ವಿಶ್ವ ಪ್ರಸಿದ್ಧಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ೧೨೫ ಅಡಿಗಳ ಪುತ್ಥಳಿಯನ್ನು ವೀಕ್ಷಿಸಲು ಹಾಗೂ ತೆಲಂಗಾಣ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಲು ಕೋಲಾರ ಜಿಲ್ಲಾ ದಲಿತ ಸಂಘಟನೆಗಳ ಮುಖಂಡರು ನಗರದ ಬಂಗಾರಪೇಟೆ ವೃತ್ತದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ತೆಲಂಗಾಣಕ್ಕೆ ಹೊರಟರು.
ಈ ವೇಳೆ ದಲಿತ ಮುಖಂಡ ದಲಿತ ನಾರಾಯಣಸ್ವಾಮಿ ಮಾತನಾಡಿ, ವಿಶ್ವದಲ್ಲೇ ಪ್ರಸಿದ್ಧಿ ಪಡೆದಿರುವ ಡಾ.ಬಿ.ಆರ್.ಅಂಬೇಡ್ಕರ್ ರವರ ೧೨೫ ಅಡಿಗಳ ಪ್ರತಿಮೆಯನ್ನು ವೀಕ್ಷಿಸಲು ದಲಿತ ಮುಖಂಡರು ಸೇರಿದಂತೆ ಅನೇಕ ಮಂದಿ ತೆಲಂಗಾಣಕ್ಕೆ ಹೊರಟಿದ್ದೇವೆ. ಅಂಬೇಡ್ಕರ್ ಅವರ ಪುತ್ಥಳಿ ನಿರ್ಮಾಣದ ಅತ್ಯುತ್ತಮ ಕಾರ್ಯ ಮಾಡಿರುವ ತೆಲಂಗಾಣ ರಾಜ್ಯ ಸರ್ಕಾರವನ್ನು ಅಭಿನಂದಿಸಿದರು.
ಕೋಲಾರ ಜಿಲ್ಲೆ ದಲಿತ ಹೋರಾಟಗಾರರ ತವರೂರು, ಇಲ್ಲಿಯೂ ಸಹ ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಮಾಡಿ. ಆಕರ್ಷಕ ಭವನವನ್ನು ಕಟ್ಟಲು ಸಂಸದ ಎಸ್.ಮುನಿಸ್ವಾಮಿಯವರು ಮುಂದಾಗಬೇಕು. ಸರ್ಕಾರದ ಜಾಗವನ್ನು ಗುರುತಿಸಿ ಶೀಘ್ರವಾಗಿ ಕಾರ್ಯರೂಪಕ್ಕೆ ತರಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಅಪ್ಪಿ ನಾರಾಯಣಸ್ವಾಮಿ, ಎಚ್.ಎನ್.ಮೂರ್ತಿ, ಎಂ.ಆರ್.ಚೇತನ್ ಬಾಬು, ಮತ್ತಿಕುಂಟೆ ಕೃಷ್ಣ , ಅಂಬೇಡ್ಕರ್ ನಗರ ಸೋಮಣ್ಣ, ದಿಂಬ ಚಾಮನಹಳ್ಳಿ ಅಂಬರೀಶ್, ಸಾಹುಕಾರ್ ಶಂಕ್ರಪ್ಪ, ಖಾದ್ರಿಪುರ ಚಲಪತಿ, ರವಿಚಂದ್ರ ಮುಂತಾದವರಿದ್ದರು.