PLACE YOUR AD HERE AT LOWEST PRICE
ಕೆಜಿಎಫ್:ಹಣದ ವಿಚಾರವಾಗಿ ಜೆಸಿಬಿ ಮಾಲೀಕ ಕೂಲಿ ಕಾರ್ಮಿಕನ ಮೇಲೆ ತೀರ್ವ ಹಲ್ಲೆ ನಡೆಸಿರುವ ಘಟನೆ ಬೇತಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೇತಮಂಗಲ ಗ್ರಾಮದ ಜೆಸಿಬಿ ಮೋಹನ್ ಎಂದು ಕರೆಯುವ ಕೂಲಿ ಕಾರ್ಮಿಕನ ಮೇಲೆ ನಾಗಲೇಹಳ್ಳಿ ಜೆಸಿಬಿ ಮಾಲೀಕ ಮಲ್ಲೇಶ್ ರೆಡ್ಡಿ ಎಂಬುವವರು ಹಣದ ವಿಷಯಕ್ಕಾಗಿ ಜಗಳ ತೆಗೆದು ಹಲ್ಲೆ ನಡೆಸಿರುವುದಾಗಿ ದೂರು ನೀಡಲಾಗಿದೆ.
ಬೇತಮಂಗಲ ಗ್ರಾಮದ ಹಳೆ ಬಡಾವಣೆಯ ರಸ್ತೆ ಕಾಮಗಾರಿಯಲ್ಲಿ ಮೋಹನ್ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಬಂದ ಮಲ್ಲೇಶ್ ರೆಡ್ಡಿ ಅವಾಚ್ಯ ಶಬ್ಧಗಳಿಂದ ಬೈದು ತೀರ್ವವಾಗಿ ಹಲ್ಲೆ ನಡೆಸಿರುವುದಾಗಿ ತಿಳಿಸಲಾಗಿದೆ. ಕೂಲಿ ಕಾರ್ಮಿಕ ಮೋಹನ್ಗೆ ಕೈ, ಕಾಲು ಸೇರಿದಂತೆ ದೇಹದ ಹಲವು ಭಾಗದಲ್ಲಿ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ದಾಖಲಾಗುವ ಸಂಭವಿದೆ.
ಕೂಲಿ ಕಾರ್ಮಿಕ ಮೋಹನ್ ಅವರ ಮೇಲೆ ನಡೆದಿರುವ ಹಲ್ಲೆಯನ್ನು ಅಂಬೇಡ್ಕರ್ ಯುವ ವೇದಿಕೆ ಸಂಘಟನೆಯ ಸಂಸ್ಥಾಪಕ ಶ್ರೀನಿವಾಸ್ ಖಂಡಿಸಿ, ಸೂಕ್ತ ಕಾನೂನು ಕ್ರಮ ಕೈಗೊಂಡಿರುವ ಬೇತಮಂಗಲ ಪೊಲೀಸ್ ಇಲಾಖೆಯ ಅಧಿಕಾರಿಗಳನ್ನು ಅಭಿನಂದಿಸಿದ್ದಾರೆ.
ಬೇತಮಂಗಲ ಪೊಲೀಸರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಕೂಲಿ ಕಾರ್ಮಿಕ ಮೋಹನ್ ಅವರಿಂದ ಮಾಹಿತಿ ಪಡೆದು, ದೂರು ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.