• Fri. May 10th, 2024

PLACE YOUR AD HERE AT LOWEST PRICE

ಬಂಗಾರಪೇಟೆ:ತಾಲ್ಲೂಕಿನ ಕಾಮಸಮುದ್ರ ಹೋಬಳಿ ದೊಡ್ಡಪೊನ್ನಾಂಡಹಳ್ಳಿ ಮೊರಾರ್ಜಿ ದೇಸಾಯಿ ವಸತಿ ನಿಲಯದಲ್ಲಿ ಕುಡಿಯುವ ನೀರಿನಲ್ಲಿ ವಿಷಕಾರಿ ಇಲಿ ಪಾಶಾಣ ಹಾಕಿರುವುದನ್ನು ಕರ್ನಾಟಕ ದಲಿತ ರೈತಸೇನೆ ಸಂಸ್ಥಾಪಕ ಅಧ್ಯಕ್ಷ  ಹುಣಸನಹಳ್ಳಿ ವೆಂಕಟೇಶ್ ಖಂಡಿಸಿದರು.

ವಸತಿ ಶಾಲೆಯ ಬಳಿ ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದ ಅವರು ನ.೨೭ರಂದು ಕುಡಿಯುವ ನೀರಿನ ಫಿಲ್ಟರ್‌ನಲ್ಲಿ ಯಾರೋ ಇಲಿ ಪಾಶಾಣವನ್ನು ಹಾಕಿದ್ದು, ಇದನ್ನು ತಿಳಿಯದೇ ಮೂರು ವಿದ್ಯಾರ್ಥಿಗಳು ನೀರನ್ನು ಅಸ್ವಸ್ಥರಾಗಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ರವಾಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ತಿಳಿದುಬಂದಿರುತ್ತದೆ.

ವಸತಿ ನಿಲಯಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳ ಕುರಿತು ಪರಿಶೀಲಿಸಿದೆವು. ಶಾಲೆಯ ಪ್ರಾಂಶುಪಾಲ ತೋಟಪ್ಪ ಮತ್ತು ಶಿಕ್ಷಕರಾದ ವೆಂಕಟರಾಮಪ್ಪ ಹಾಗೂ ನರೇಂದ್ರಬಾಬು ಅವರ ನಡುವೆ ಒಳ ಜಗಳಗಳಿದ್ದು, ತೋಟಪ್ಪನವರ ಹುದ್ದೆಯನ್ನು ಕಸಿಯುವ ಉದ್ದೇಶದಿಂದ ಒಂದಲ್ಲಾ ಒಂದು ರೀತಿಯಾಗಿ ಇಲ್ಲಿ ಅನಾಹುತಗಳು ನಡೆಯುತ್ತಿರುವುದು ತಿಳಿದುಬಂದಿರುತ್ತದೆ.

ಆದರೆ ನೆನ್ನೆ ನಡೆದಂತಹ ಘಟನೆಗೆ ಕಾಮಸಮುದ್ರ ಪೊಲೀಸ್ ಉಪ ನಿರೀಕ್ಷಕರು ಹಾಗೂ ವೃತ್ತ ನಿರೀಕ್ಷಕರ ಸಮಯ ಪ್ರಜ್ಞೆಯಿಂದ ಮತ್ತು ಅಹಿತಕರ ಘಟನೆ ನಡೆಯದಂತೆ ಕಾನೂನಿನ ಚೌಕಟ್ಟಿನಲ್ಲಿ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಿ, ಅಲ್ಲಿನ ವಿದ್ಯಾರ್ಥಿಯೇ ಈ ಕೃತ್ಯ ಎಸಗಿದ್ದಾನೆಂದು ತನಿಖೆಯಲ್ಲಿ ತಿಳಿಸಿದ್ದಾರೆ.

ಆದರೆ ವಿದ್ಯಾರ್ಥಿಗೆ ಇಲಿ ಪಾಶಾಣವನ್ನು ನೀಡಿದ್ಯಾರು?, ಇಲಿ ಪಾಶಾಣವನ್ನು ನೀರಿನಲ್ಲಿ ಹಾಕಲು ತಿಳಿಸಿದ್ಯಾರು? ಎಂಬುದು ನಿಗೂಢವಾಗಿದೆ. ಈ ಬಗ್ಗೆ ಪೊಲೀಸರು ಇನ್ನೂ ಹೆಚ್ಚಿನ ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ  ಶಿಕ್ಷೆಯಾಗುವಂತೆ ಮಾಡಬೇಕು ಎಂದು ಒತ್ತಾಯಿಸಿದರು.

ಜೊತೆಗೆ ತೋಟಪ್ಪ, ವೆಂಕಟರಾಮಪ್ಪ, ನರೇಂದ್ರ ಬಾಬು ರವರನ್ನು ಈ ಕೂಡಲೇ ಅಮಾನತ್ತು ಮಾಡಿ ಹೆಚ್ಚಿನ ವಿಚಾರಣೆಗೊಳಪಡಿಸಬೇಕು. ಈ ವಸತಿ ನಿಲಯಕ್ಕೆ ಸಿಸಿ ಕ್ಯಾಮೆರಾ ಅಳವಡಿಸಿ, ಇನ್ನು ಮುಂದೆ ಈ ರೀತಿಯಾಗದಂತೆ ಸೂಕ್ತ ಕ್ರಮವಹಿಸಲು ಜಿಲ್ಲಾಡಳಿತಕ್ಕೆ ಒತ್ತಾಯಿಸುತ್ತೇವೆ, ಇಲ್ಲವಾದಲ್ಲಿ ವಸತಿ ಶಾಲೆ ಮುಂಭಾಗದಲ್ಲಿ ಹೋರಾಟವನ್ನು ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಹುಳದೇನಹಳ್ಳಿ ವೆಂಕಟೇಶ್, ರಾಜ್ಯ ಸಮಿತಿ ಸದಸ್ಯ ಸೇಟ್ ಕಾಂಪೌಂಡ್ ಮಾರಿ, ತಾಲ್ಲೂಕು ಅಧ್ಯಕ್ಷ ಹಿರೇಕರಪನಹಳ್ಳಿ ಮುನಿರಾಜು, ಹೋಬಳಿ ಅಧ್ಯಕ್ಷ ಕೊಂಡೇನಹಳ್ಳಿ ರವಿಕುಮಾರ್, ಅಂಬೇಡ್ಕರ್ ವೀರ ಸೇನೆ ಭಟ್ರಕುಪ್ಪ ಅರುಣ್, ಮಾದ್ಯಮ ಸಲಹೆಗಾರ ಜಿ9 ಲೋಕೇಶ್ ಹಾಜರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!