• Sun. May 5th, 2024

PLACE YOUR AD HERE AT LOWEST PRICE

ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ

ಕೋಲಾರ,ಏಪ್ರಿಲ್.೨೫ : ಸಾರ್ವಜನಿಕರಿಗೆ ಸುಳ್ಳು ಆಶ್ವಾಸನೆಗಳನ್ನು ನೀಡಿ ಅಧಿಕಾರ ಪಡೆದ ನಂತರ ವಂಚಿಸುವ ವಚನ ಭ್ರಷ್ಟ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ ಎಂದು ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿ ಕೆ.ವಿ.ಗೌತಮ್ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ಧಿಗೋಷ್ಟಿ ನಡೆಸಿ ಅವರು ಮಾತನಾಡುತ್ತಿದ್ದರು. ಕಳೆದ ೧೦ ವರ್ಷಗಳಿಂದ ಆಡಳಿತದಲ್ಲಿದ್ದು, ೨೦೧೪ರ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದಂತೆ ಸ್ವಿಸ್ ಬ್ಯಾಂಕ್‌ನಲ್ಲಿರುವ ಕಪ್ಪು ಹಣವನ್ನು ಪ್ರತಿಯೊಬ್ಬ ಭಾರತೀಯ ಪ್ರಜೆಯ ಖಾತೆಗೆ ೧೫ ಲಕ್ಷ ರೂಪಾಯಿ ಜಮಾ ಮಾಡುತ್ತೇವೆಂದು ಹೇಳಿ ವಚನ ಭಷ್ಠರಾಗಿದ್ದಾರೆ. ವರ್ಷಕ್ಕೆ ೨ ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿ ವಂಚಿಸಲಾಗಿದೆ. ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ನುಡಿದಂತೆ ನಡೆದುಕೊಂಡಿದೆ. ಕೇವಲ ೧೦ ತಿಂಗಳ ಅವಧಿಯಲ್ಲೇ ಭರವಸೆಕೊಟ್ಟಿದ್ದ ಐದಕ್ಕೆ ಐದೂ ಗ್ಯಾರೆಂಟೀಗಳನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದರು.

ಇನ್ನೂ ಮೋದಿ ನೇತೃತ್ವದ ಸರ್ಕಾರ ಅಡುಗೆ ಅನಿಲ ಬೆಲೆಯನ್ನು ೪೬೦ ರೂಗಳಿಂದ ೧೨೦೦ ರೂಪಾಯಿಗಳ ವರೆಗೆ ಏರಿಸಿದೆ. ಪೆಟ್ರೋಲ್ ಡೀಸೆಲ್ ಬೆಲೆ ಸಹ ೫೬ ಇದ್ದದ್ದನ್ನು ಇಂದು ನೂರರ ಗಡಿ ದಾಟಿಸಿದೆ. ಮತ್ತೊಂದು ಕಡೆ ದೇಶದ ಒಟ್ಟಾರೆ ಸಾಲದಲ್ಲಿ ಕಳೆದ ೭೫ ವರ್ಷಗಳಲ್ಲಿ ಹಿಂದಿನ ಎಲ್ಲಾ ಸರ್ಕಾರಗಳು ಮಾಡಿದ ಸಾಲ ಕೇವಲ ೫೪ ಸಾವಿರ ಕೋಟಿಗಳು, ಆದರೆ, ಮೋದಿ ಅಧಿಕಾರಕ್ಕೆ ಬಂದ ನಂತರ ದೇಶದ ಸಾಲ ಒಂದು ಲಕ್ಷ ಐವತ್ತಾರು ಸಾವಿರ ಕೋಟಿ ದಾಟಿದೆ ಅಂದರೆ ಕೇವಲ ಹತ್ತು ವರ್ಷಗಳಲ್ಲಿ ಒಂದು ಲಕ್ಷ ಕೋಟಿ ಸಾಲದ ಹೊರಯನ್ನು ದೇಶದ ಜನರ ತಲೆಯ ಮೇಲೆ ಇರಿಸಲಾಗಿದೆ ಎಂದು ಆರೋಪಿಸಿದರು.

೨೦೨೪ರ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸಿ ಸಂಸತ್ತಿಗೆ ಆಯ್ಕೆ ಮಾಡಿದರೆ, ಕೋಲಾರ ಲೋಕಸಭಾ ಕ್ಷೇತ್ರವನ್ನು ಅಭಿವೃದ್ದಿ ಪಡಿಸುವ ತಮ್ಮದೇ ಕನಸುಗಳ ಬಗ್ಗೆ ಮಾತನಾಡುತ್ತಾ, ಕೋಲಾರ-ಕೆ.ಆರ್.ಪುರಂ ನೇರ ಮೆಮು ರೈಲು ಕಾರ್ಯಾರಂಭ, ಶ್ರೀನಿವಾಸಪುರದಲ್ಲಿ ಈ ಹಿಂದೆ ಮಂಜೂರು ಮಾಡಲಾಗಿದ್ದ ಕೋಚ್ ಫ್ಯಾಕ್ಟರಿಯನ್ನು ಮರಳಿ ಜಿಲ್ಲೆಗೆ ತರುವುದು, ಇದೀಗ ಪ್ರಸ್ತಾವನೆಗೆ ಬಂದಿರುವ ರೈಲ್ವೆ ವರ್ಕ್ಶಾಪ್‌ಗೆ ಬೇಕಾದ ರಾಜ್ಯ ಸರ್ಕಾರದ ಸಹಕಾರವನ್ನು ಪಡೆದು ಕಾಮಗಾರಿ ಆರಂಭಿಸುವುದು. ಎತ್ತಿನಹೊಳೆ ಯೋಜನೆ ಜಿಲ್ಲೆಗೆ ಮುಟ್ಟಿಸುವುದು, ಯರಗೋಳ್ ನೀರನ್ನು ಮನೆ ಮನೆಗೆ ತಲುಪಿಸುವುದು. ಕೆ.ಸಿ.ವ್ಯಾಲಿ ನೀರನ್ನು ೩ನೇ ಹಂತದ ಶುದ್ದೀಕರಣಕ್ಕೆ ಒತ್ತು ನೀಡುವುದು. ಕೆ.ಜಿ.ಎಫ್‌ನಲ್ಲಿ ಇ.ಎಸ್.ಐ. ಮಾದರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಈಗಾಗಲೇ ಮುಚ್ಚಿರುವ ಬಿಜೆಎಂಎಲ್ ಆಸ್ಪತ್ರೆಯನ್ನು ಪುನಶ್ಚೇತನಗೊಳಿಸುವುದು. ಕೆಜಿಎಫ್ ಇಂಟಿಗ್ರೇಟೆಡ್ ಟೌನ್‌ಶಿಪ್ ಮೂಲಕ ಜಿಲ್ಲೆಯನ್ನು ಮೇಲ್ದರ್ಜೆಗೆ ಏರಿಸುವುದನ್ನು ಸೇರಿ ಹಲವು ಅಭಿವೃದ್ದಿ ಕೆಲಸಗಳನ್ನು ಮಾಡಲು ಕನಸು ಇದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಮಾದ್ಯಮ ಕಾರ್ಯದರ್ಶಿ ನಸೀರ್ ಅಹಮದ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷಿö್ಮನಾರಾಯಣ್, ಕಾಂಗ್ರೆಸ್ ಪಕ್ಷದ ಜಿಲ್ಲಾ ಮಾದ್ಯಮ ಸಂಚಾಲಕ ದಯಾನಂದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಬಾಬು, ಕೆಪಿಸಿಸಿ ಕಾರ್ಯದರ್ಶಿ ನಾರಾಯಣಸ್ವಾಮಿ, ವಕ್ಕಲೇರಿ ರಾಜಪ್ಪ, ಮಹಮದ್ ಅಕ್ರಮ್ ,ಹನೀಫ್, ನಗರಸಭೆ ಸದಸ್ಯ ಅಂಬರೀಶ್, ಶ್ರೀಕೃಷ್ಣ ಇದ್ದರು.

 

 

 

 

 

 

 

 

 

 

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ
ತಳಸಮುದಾಯವರು ಇಂದಿನ ಸುಳ್ಳುಗಳ ಜೊತೆಗೆ ಟ್ಯಾಗ್ ಆಗುತ್ತಿರುವುದು ದುರಂತ – ಎಲ್.ಎನ್.ಮುಕು0ದರಾಜ್

Leave a Reply

Your email address will not be published. Required fields are marked *

You missed

error: Content is protected !!