• Sat. Jul 27th, 2024

ಸಿವಿಲ್ ಜಡ್ಜ್ ಆಗಿ ಆಯ್ಕೆಗೊಂಡಿರುವ ಗಾಯಿತ್ರಿರನ್ನು ಕಾರಹಳ್ಳಿಯಲ್ಲಿ ಬಿಜೆಪಿ  ಮುಖಂಡರು ಸನ್ಮಾನಿಸಿದರು.

PLACE YOUR AD HERE AT LOWEST PRICE

ಬಡ ಕುಟುಂಬದಲ್ಲಿ ಜನಿಸಿ ಸರ್ಕಾರಿ ಪ್ರಾಥಮಿಕ, ಪ್ರೌಢ, ಕಾಲೇಜುಗಳಲ್ಲಿ ಓದಿ ತನ್ನ 25ನೇ ವಯಸ್ಸಿಗೆ ಸಿವಿಲ್ ಜಡ್ಜ್ ಆಗಿ ಆಯ್ಕೆಗೊಂಡ ಕುಮಾರಿ ಎನ್.ಗಾಯಿತ್ರಿರನ್ನು ಕಾರಹಳ್ಳಿಯಲ್ಲಿ ಬಿಜೆಪಿ ಮುಖಂಡರು ಸನ್ಮಾನಿಸಿದರು.
ತಾಲೂಕಿನ ಕಾರಹಳ್ಳಿ ಗ್ರಾಮದ ನಾರಾಯಣಸ್ವಾಮಿ ವೆಂಕಟರತ್ನಮ್ಮ  ದಂಪತಿಗಳ ಮಗಳಾದ ಕುಮಾರಿ
ಎನ್.ಗಾಯಿತ್ರಿರವರು ಸಿವಿಲ್ ಜಡ್ಜ್ ಆಗಿ ಆಯ್ಕೆಯಾಗಿ ಸರ್ಕಾರಿ ಶಾಲೆಗಳಲ್ಲಿ ಓದುವ ಎಲ್ಲಾ  ಮಕ್ಕಳಿಗೆ ಮಾದರಿಯಾಗಿದ್ಸಾರೆ ಎಂದು ಮುಖಂಡರು ಬಣ್ಣಿಸಿದರು.
ಗಾಯಿತ್ರಿರವರ ಸಾಧನೆಯಿಂದಾಗಿ ಅವರ ಹೆತ್ತವರಿಗಲ್ಲದೆ ತಾಲ್ಲೂಕಿಗೆ ಉತ್ತಮ ಹೆಸರು ಬಂದಿದ್ದು ಗಾಯಿತ್ರಿರವರಿಗೆ ಪಾಠ ಕಲಿಸಿದ  ಗುರುಗಳಿಗೆ ಮತ್ತು ವಕೀಲರಾದ ಮೇಲೆ ಮಾರ್ಗದರ್ಶನ ನೀಡಿದವರಿಗೆ ಅಭಿನಂದನೆ ಸಲ್ಲಿಸುವುದಾಗಿ ಮುಖಂಡರು ಹೇಳಿದರು.
ಈ ವೇಳೆ ಮುಖಂಡರಾದ ಕೆ.ಚಂದ್ರಾರೆಡ್ಡಿ, ಬಿ.ವಿ.ಮಹೇಶ್, ಗ್ರಾಪಂ ಮಾಜಿ ಸದಸ್ಯ ಪ್ರತಾಪ್, ಗ್ರಾಪಂ ಮಾಜಿ ಅದ್ಯಕ್ಷ ಹಚ್.ಆರ್. ಶ್ರೀನಿವಾಸ್ ಮೊದಲಾದವರಿದ್ದರು.

Leave a Reply

Your email address will not be published. Required fields are marked *

You missed

error: Content is protected !!