• Thu. Apr 18th, 2024

PLACE YOUR AD HERE AT LOWEST PRICE

ಬಂಗಾರಪೇಟೆ:ಚಿನ್ನದ ಒಡವೆಗಳ ಆಸೆಗೆ ಮಹಿಳೆಯೊಬ್ಬರನ್ನು ಕೊಲೆಮಾಡಿ ಮೋರಿಯಲ್ಲಿ ಬಚ್ಚಿಟ್ಟಿದ್ದ ಪ್ರಕರಣ ಬೇಧಿಸಿರುವ ಬಂಗಾರಪೇಟೆ ಪೊಲೀಸರು ಕೊಲೆ ಆರೋಪಿಗಳನ್ನು ಬಂಧಿಸುವನ್ನು ಯಶಸ್ವಿಯಾಗಿದ್ದಾರೆ.

ಬಂಗಾರಪೇಟೆ ಪಟ್ಟಣದ ಕುಪ್ಪಸ್ವಾಮಿ ಮೊದಲಿಯಾರ್ ಬಡಾವಣೆಯ ವಾಸಿ 38 ವರ್ಷದ ಪ್ರಮೀಳಮ್ಮ ಕೊಲೆಯಾದ ಮಹಿಳೆಯಾಗಿದ್ದು, ಬಂಗಾರಪೇಟೆ ಪಟ್ಟಣದ ದೇಶಿಹಳಿಯ ವಾಸಿ ಸ್ವಾತಿ @ ಸಾಕಮ್ಮ, ಮತ್ತು ವಿಜಯನಗರದ ವಾಸಿ ಅನಿಲ್ ಕೊಲೆ ಮಾಡಿದ ಆರೋಪಿಗಳಾಗಿದ್ದಾರೆ.

ಕೊಲೆಯಾದ ಪ್ರಮೀಳಮ್ಮ ತಾಲ್ಲೂಕಿನ ರಾಮಲಿಂಗಾಪುರದವರಾಗಿದ್ದು, ಬಂಗಾರಪೇಟೆ  ಕೋಲಾರ ಮುಖ್ಯ ರಸ್ತೆಯ ಚೌಡೇಶ್ವರಿ ಮೆಡಿಕಲ್ಸ್ ಬಳಿ ಫುಟ್ ಪಾತ್ ನಲ್ಲಿ ಬಳೆ ವ್ಯಾಪಾರ ಮಾಡಿ ಜೀವನ ನಡೆಸುತ್ತಿದ್ದರು.

ಮೃತಳ ತಂದೆ ವೆಂಕಟಪ್ಪ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೆಜಿಎಫ್ ಎಸ್.ಪಿ ಡಾ.ಧರಣಿದೇವಿರ ಆದೇಶದಂತೆ ಡಿ.ವೈ.ಎಸ್.ಪಿ ರಮೇಶ್ ರ ಮಾರ್ಗದರ್ಶದಲ್ಲಿ ವೃತ್ತ ನಿರೀಕ್ಷಕ ಸಂಜೀವರಾಯಪ್ಪ ನೇತೃತ್ವದ ತಂಡ ಕೊಲೆ ಆರೋಪಿಗಳನ್ನು  ಕೊಲೆ ನಡೆದ 3 ದಿನಗಳಲ್ಲಿ ಪತ್ತೆ ಮಾಡಿದ್ದಾರೆ.

ಮೃತಳ ಬಳಿಯಿದ್ದ ಒಡವೆಗಳನ್ನು ಲಪಟಾಯಿಸುವ ಉದ್ದೇಶದಿಂದ ಈ ಕೊಲೆ ನಡೆದಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದರು. ಕೊಲೆ ಮಾಡಿದ ಆರೋಪಿಗಳನ್ನು ಬಂಧಸಿ ಒಡವೆಗಳನ್ನುಅಮಾನತ್ತುಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ವೇಳೆ ಕೆಜಿಎಫ್ ಎಸ್.ಪಿ ಡಾ.ಧರಣಿದೇವಿ, ಡಿ.ವೈ.ಎಸ್.ಪಿ ರಮೇಶ್, ವೃತ್ತ ನಿರೀಕ್ಷಕ ಸಂಜೀವರಾಯಪ್ಪ ಮೊದಲಾದವರಿದ್ದರು.

Related Post

ಶೇ.೯೦ ರಷ್ಟು ದೇಶದ ಸಮುದಾಯಗಳು ಮುಖ್ಯವಾಹಿನಿ ಮಾದ್ಯಮಗಳಲ್ಲಿ, ಕಾರ್ಪೋರೇಟ್ ವಿಭಾಗದಲ್ಲಿ ಮತ್ತು ಅತ್ಯುನ್ನತ ಸರ್ಕಾರಿ ಹುದ್ದೆಗಳಲ್ಲಿ ಭಾಗವಹಿಸುವಿಕೆ ಇಲ್ಲ! : ರಾಹುಲ್ ಗಾಂಧಿ
ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಅನ್ಯಾಯ ಮಾಡಿವೆ : ಸಮುದಾಯ ಮುಖಂಡರ ಆಕ್ರೋಶ,
ಸಂವಿಧಾನ ಉಳಿಸಲು ದೇಶದ ಸಮಗ್ರತೆ ಕಾಪಾಡಲು ಬಿಜೆಪಿಯನ್ನು ಸೋಲಿಸಿ: ಮಂಜುನಾಥ್ ಅಣ್ಣಯ್ಯ

Leave a Reply

Your email address will not be published. Required fields are marked *

You missed

error: Content is protected !!