• Thu. Sep 28th, 2023

PLACE YOUR AD HERE AT LOWEST PRICE

ಕೋಲಾರ ನಗರದ ಹೃತ್ವಿಕ್ ಬಾಬು ಬೆಂಗಳೂರು ವಿಶ್ವವಿದ್ಯಾಲಯ ಬಾಡಿ ಬಿಲ್ಡಿಂಗ್ ಉತ್ಸವ್-೨೦೨೩ ಕಾಂಪಿಟೇಶನ್ ನಲ್ಲಿ ತೃತೀಯ ಸ್ಥಾನ ಪಡೆಯುವ ಮೂಲಕ ಜಿಲ್ಲೆಗೂ ಹಾಗೂ ಕರ್ನಾಟಕ ರಾಜ್ಯಕ್ಕೂ ಕೀರ್ತಿಯನ್ನು ತಂದಿದ್ದಾರೆ.

ಕೋಲಾರ ನಗರದ ಕಠಾರಿಪಾಳ್ಯದ ರಾಜ್ಯಮಟ್ಟದ ಕುಸ್ತಿಪಟು ರಮೇಶ್ ಅವರ ಸುಪುತ್ರ ಆರ್ ಹೃತ್ವಿಕ್ ಬಾಬು ಪ್ರಥಮ ಬಿಎಸ್ಸಿ ವಿದ್ಯಾರ್ಥಿ ಬೆಂಗಳೂರಿನ ಬಸವನಗುಡಿಯಲ್ಲಿರುವ ಬಿ ಎಂ ಎಸ್ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ನಡೆದ ಪಂದ್ಯಾವಳಿಯಲ್ಲಿ ಅವರು ಈ ಸಾಧನೆ ಮಾಡಿದ್ದಾರೆ.

ಕೋಲಾರ ನಗರದ ಚೈತನ್ಯ ವಿದ್ಯಾಸಂಸ್ಥೆಯಲ್ಲಿ ಪ್ರಥಮ ಬಿಎಸ್ಸಿ ವ್ಯಾಸಂಗ ಮಾಡುತ್ತಿರುವ ಹೃತ್ವಿಕ್ ಬಾಬು ಕೋಲಾರ ವ್ಯಾಯಾಮ ಶಾಲೆ(ಗರಡಿ ಮನೆ)ಯಲ್ಲಿ ನಿರಂತರ ಅಭ್ಯಾಸ ಮಾಡುವ ಮೂಲಕ ಬಾಡಿ ಬಿಲ್ಡಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಲು ಮುಂದಾಗಿದ್ದಾರೆ. ಇವರ ಈ ಸಾಧನೆಗೆ ಗರಡಿ ಮನೆಯ ಕ್ರೀಡಾಪಟುಗಳು, ನಗರವಾಸಿಗಳು ಹಾಗೂ ಚೈತನ್ಯ ವಿದ್ಯಾಸಂಸ್ಥೆಯವರು ಹೃತ್ವಿಕ್ ಬಾಬು ನನ್ನು ತುಂಬು ಹೃದಯದಿಂದ ಅಭಿನಂದಿಸಿದ್ದಾರೆ.

 

Leave a Reply

Your email address will not be published. Required fields are marked *

You missed

error: Content is protected !!