PLACE YOUR AD HERE AT LOWEST PRICE
ಬಂಗಾರಪೇಟೆ:ವ್ಯಕ್ತಿಯೊಬ್ಬ ಗೋಣಿಚೀಲದಲ್ಲಿ ಒಣಗಾಂಜಾವನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ಮಾಹಿತಿ ಪಡೆದ ಅಬಕಾರಿ ಪೋಲೀಸರು ಆ ವ್ಯಕ್ತಿಯನ್ನು ಬಂಧಿಸಿರುವ ಘಟನೆ ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆದಿದೆ.
ಪಟ್ಟಣದ ಬಸ್ ನಿಲ್ದಾಣದಲ್ಲಿ ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶಶದಿಂದ 0.950 ಗ್ರಾಮ ಹೂ ಸೊಪ್ಪು ಮತ್ತು ಬೀಜಗಳಿಂದ ಕೂಡಿದ ಒಣಗಾಂಜಾವನ್ನು ಸಾಗಾಣಿಕೆ ಮಾಡುತ್ತಿರುವುದು ಕಂಡು ಬಂದಿತ್ತು.
ಆರೋಪಿಯಾದ ಅಭಿಮನ್ಯು ಪನಿಗ್ರಹಿ ಎಂಬುವರ ವಿರುದ್ಧ ಅಬಕಾರಿ ಪೋಲಿಸರು ಎನ್ಡಿಪಿಎಸ್ ಕಾಯ್ದೆ 1985 ರಡಿ ಮೊಕದ್ದಮೆ ದಾಖಲು ಮಾಡಿ ಆರೋಪಿಯನ್ನು ದಸ್ತಗಿರಿಪಡಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.
ಪಟ್ಟಣದ ಅಬಕಾರಿ ಇಲಾಖೆಯ ಸರ್ಕಲ್ ಇನ್ಸ್ಪೆಕ್ಟರ್ ಆರ್.ರವೀಂದ್ರರ ನೇತೃತ್ವದಲ್ಲಿ ಖಚಿತ ಮಾಹಿತಿಯೊಂದಿಗೆ ಅಬಕಾರಿ ಸಿಬ್ಬಂದಿಗಳಾದ ಲಕ್ಷ್ಮಣ, ,ಹನುಮಂತ, ನವೀನ್ ಹಾಗೂ ವಾಹನ ಚಾಲಕರಾದ ಭರತ್ ದಾಳಿ ನಡೆಸಿ ಮಾಲು ಸಮೇತ ಆರೋಪಿಯನ್ನು ಬಂಧಿಸಿ ಪಟ್ಟಣದ ಸಿವಿಲ್ ನ್ಯಾಯಾಲಯದ ಮುಂದೆ ಹಾಜರಿಪಡಿಸಿದ್ದಾರೆ.