• Sat. Apr 27th, 2024

PLACE YOUR AD HERE AT LOWEST PRICE

: ಹರಿದು ಮೂವರು .

ಕರ್ನಾಟಕ ಮೂಲದ ಮೂವರು ಬಾಲಕರು ಚೆನ್ನೈನ ಹೊರವಲಯದ ಉರಪಕ್ಕಂ ಬಳಿ ರೈಲು ಹರಿದು ಮೃತಪಟ್ಟ ಘಟನೆ ನಡೆದಿದೆ.

ಮೃತರನ್ನು ಮಂಜುನಾಥ್ (11), ರವಿ (12), ಸುರೇಶ್ (14) ಎಂದು ಗುರುತಿಸಲಾಗಿದೆ.

ಹಳಿ ದಾಟುವಾಗ ಈ ದುರ್ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಇಬ್ಬರು ಬಾಲಕರು ಸಹೋದರರಾಗಿದ್ದಾರೆ. ಅವರಿಗೆ ವಾಕ್‌ ಮತ್ತು ಶ್ರವಣ ದೋಷ ಇತ್ತು. ಇನ್ನೊಬ್ಬ ಬಾಲಕನಿಗೆ ಮಾತು ಬರುತ್ತಿರಲಿಲ್ಲ ಎಂದು ಹೇಳಲಾಗಿದೆ. ಮೂವರು ಕೂಡ 11ರಿಂದ 15ರ ಹರೆಯದವರಾಗಿದ್ದಾರೆ.

ಮೃತ ಬಾಲಕರ ಪೋಷಕರು ಚೆನ್ನೈನಲ್ಲಿ ದಿನಗೂಲಿ ಮಾಡುತ್ತಿದ್ದರು. ಈ ಕುರಿತು ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಟೈಮ್ಸ್‌ ಆಫ್‌ ಇಂಡಿಯಾ ವರದಿಯು, ಮೃತ ಬಾಲಕರು ಕರ್ನಾಟಕದ ಹುಬ್ಬಳ್ಳಿಯ ನಿವಾಸಿಗಳು ಎಂದು ಹೇಳಿದೆ.

ಸೋಮವಾರ ಮಧ್ಯಾಹ್ನದ ವೇಳೆ ಘಟನೆ ನಡೆದಿದೆ. ವಂಡಲೂರು- ಉರಪ್ಪಕ್ಕಂ ನಡುವಿನ ರೈಲ್ವೆ ಹಳಿಯಲ್ಲಿ ಮೂವರು ಬಾಲಕರು ಆಟವಾಡುತ್ತಿದ್ದಾಗ ಚೆನ್ನೈ ಬೀಚ್‌ನಿಂದ ಚೆಂಗಲ್‌ಪೇಟ್‌ಗೆ ಹೋಗುತ್ತಿದ್ದ ಇಎಂಯು ರೈಲು ಢಿಕ್ಕಿಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.

ಮಕ್ಕಳು ಆಟವಾಡುತ್ತಿರುವುದನ್ನು ಗಮನಿಸಿದ ಲೋಕೋ ಪೈಲಟ್ ಹಾರ್ನ್ ಮಾಡಿದ್ದಾರೆ. ಆದರೆ ಮಕ್ಕಳಿಗೆ ವಾಕ್‌ ಮತ್ತು ಶ್ರವಣ ದೋಷ ಇದ್ದ ಕಾರಣ ಇದು ಕೇಳಿಸಿಲ್ಲ. ಇದರಿಂದ ದುರ್ಘಟನೆ ನಡೆದಿದೆ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!