PLACE YOUR AD HERE AT LOWEST PRICE
ಬಂಗಾರಪೇಟೆ: ದೊಡ್ಡವಲಗಮದಿ ಗ್ರಾಮದಲ್ಲಿ ನಡೆದ ಕೂಲಿ ಕಾರ್ಮಿಕನ ಹಲ್ಲೆ ಖಂಡಿಸಿ ದಲಿತ ಸಂಘಟನೆಗಳ ಒಕ್ಕೂಟದಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರದ ಹೂವರಸನಹಳ್ಳಿ ರಾಜಪ್ಪ ಮಾತನಾಡಿ, ಕೂಲಿ ಕಾರ್ಮಿಕ ತನ್ನ ಕೂಲಿ ಹಣವನ್ನು ಕೇಳಿದ್ದಕ್ಕೆ, ಆ ಗ್ರಾಮದ ಸವರ್ಣಿಯರ ಸಮುದಾಯಕ್ಕೆ ಸೇರಿದವರು ಮೂರು ಜನ ಅಣ್ಣ ತಮ್ಮಂದಿರು ಸೇರಿಕೊಂಡು ಕಾರ್ಮಿಕನನ್ನು ಮಾರಣಾಂತಿಕ ಹಲ್ಲೇ ನಡೆಸಿ ಕೊಲೆ ಮಾಡುವ ಹಂತಕ್ಕೆ ತಲುಪಿದ್ದಾರೆ.
ಆ ವಿಚಾರವಾಗಿ ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತ ಸರಿಯಾದ ರೀತಿ ಸ್ಪಂದಿಸುತ್ತಿಲ್ಲ, ಜಿಲ್ಲಾಧಿಕಾರಿ ಯರಗೋಳಕೆ ಬಂದ ಸಮಯದಲ್ಲಿ ಫೋನಿನ ಮುಖಾಂತರ ಕರೆ ಮಾಡಿ ಆಸ್ಪತ್ರೆ ಬಳಿ ಬನ್ನಿ ಎಂದರು ಸಹ ಬರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದಲಿತರ ಮೇಲೆ ಹಲ್ಲೆ, ದೌರ್ಜನ್ಯ, ಜಾತಿನಿಂದನೆ ನಡೆದಿದ್ದು, ಹಾಗೂ ಜಿಲ್ಲಾದ್ಯಂತ ಸರಣಿ ಕೊಲೆಗಳು ನಡೆದಿದ್ದರೂ ತಾಲ್ಲೂಕು ಹಾಗೂ ಜಿಲ್ಲಾಡಳಿತ ರಕ್ಷಣೆ ಮಾಡುವಲ್ಲಿ ವಿಫಲವಾಗಿದ್ದು ಸಂಬಂಧಪಟ್ಟ ಅಧಿಕಾರಿಗಳನ್ನು ಈ ಕೂಡಲೇ ಜಿಲ್ಲೆಯಿಂದ ವರ್ಗಾವಣೆ ಮಾಡಬೇಕೆಂದು ಒತ್ತಾಯ ಮಾಡಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಸೂಲಿಕುಂಟೆ ರಮೇಶ್,ಹುಣಸನಹಳ್ಳಿ ವೆಂಕಟೇಶ್, ಕೆ.ಮದಿವಣನ್, ಕಲಾವಿದ ಎಲ್ಲಪ್ಪ, ಹಿರೇಕರಪನಹಳ್ಳಿ ರಾಮಪ್ಪ, ಮಾರುತಿ ಪ್ರಸಾದ್, ರಾಜ್ ಕುಮಾರ್, ದೊಡ್ಡವಲಗಮದಿ ಗ್ರಾಮ ಪಂಚಾಯಿತಿಯ ಸದಸ್ಯ ಮುನಿರಾಜು, ಹಾಗೂ ದೊಡ್ಡ ವಲಗಮಾದಿ ಗ್ರಾಮಸ್ಥರು ಭಾಗವಹಿಸಿದ್ದರು.