PLACE YOUR AD HERE AT LOWEST PRICE
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕೋಲಾರ ಫೋಕಸ್ ಟ್ರಸ್ಟ್ ಬಂಗಾರಪೇಟೆ ಜಾನಪದ ಕಲಾತಂಡ ಜಂಟಿಯಾಗಿ ಕರ್ನಾಟಕ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಜನಜಾಗೃತಿ ಕಾರ್ಯಕ್ರಮ ಬಂಗಾರಪೇಟೆ ತಾಲೂಕು ಹತ್ತು ಗ್ರಾಮ ಪಂಚಾಯಿತಿಗಳನ್ನು ಒಳಗೊಂಡಂತೆ 20 ಗ್ರಾಮಗಳಲ್ಲಿ ಬೆಳಗ್ಗೆ ಒಂದು ಸಾಯಂಕಾಲ ಒಂದು ಜನಪದ ತಂಡದ ವತಿಯಿಂದ ಜಾಗೃತಿ ಕಾರ್ಯಕ್ರಮ ನಡೆಸಿಕೊಡಲಾಗುತ್ತಿದೆ.
ಈ ಕಾರ್ಯಕ್ರಮದ ಮೂಲಕ ಗ್ರಾಮೀಣ ಪ್ರದೇಶದ ಜನರಲ್ಲಿ ಬದುಕಿನ ನೋವು ನಲಿವುಗಳನ್ನು ಸರ್ಕಾರ ಬಗೆಹರಿಸಿ ನಾನ ಯೋಜನೆಗಳ ಮೂಲಕ ರೈತರಿಗೆ ಬಡವರಿಗೆ ಯುವಕರಿಗೆ ಶಕ್ತಿ ತುಂಬುವಂತಹ ಐದು ಗ್ಯಾರಂಟಿ ಯೋಜನೆಗಳನ್ನು ಕರ್ನಾಟಕ ಸರ್ಕಾರ ಜಾರಿಗೆ ಮಾಡಿದ್ದು, ಒಂದು ಬಡವರು ರೈತರಿಗೆ ಗೃಹ ಜ್ಯೋತಿ ಯೋಜನೆ.
ಶಕ್ತಿ ಯೋಜನೆ ಅಡಿ ಉಚಿತ ಪ್ರಯಾಣ. ಪದವಿ ಪಡೆದ ನಿರುದ್ಯೋಗಿ ಯುವಕ ಯುವತಿಯರಿಗೆ ಯುವ ನಿಧಿ ಯೋಜನೆ. ಪ್ರತಿ ಪಡಿತದಾರರಿಗೆ ತಲಾ ಹತ್ತು ಕೆಜಿ ಅಕ್ಕಿ ಅನ್ನ ಭಾಗ್ಯ ಯೋಜನೆ. ಈ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಸವಿಸ್ತಾರವಾಗಿ ತಿಳುವಳಿಕೆ ಮೂಡಿಸಲಾಗುತ್ತಿದೆ. ಈ ಯೋಜನೆಗಳ ಬಗ್ಗೆ ಹಳ್ಳಿ ಹಳ್ಳಿಗಳಲ್ಲಿ ಜಾನಪದ ತಂಡದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಈ ತಂಡದಲ್ಲಿ ತಂಡದ ನಾಯಕರಾದ ಕಲಾವಿದ ಎಲ್ಲಪ್ಪ. ಲಲಿತಮ್ಮ. ಶಾಂತಮ್ಮ. ಎರನಾಗನಹಳ್ಳಿ ರವಿ ಚಂದ್ರ ಮೊದಲಾದವರಿದ್ದಾರೆ.