• Sat. May 4th, 2024

PLACE YOUR AD HERE AT LOWEST PRICE

ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ರವರಿಗೆ ಜಿಲ್ಲಾ ದಲಿತ ಸಂಘಟನೆಗಳ ಸಂಯುಕ್ತ ರಂಗ ಬೆಂಬಲ : ಡಾ.ಎಂ. ಚಂದ್ರಶೇಖರ್
ಕೋಲಾರ, ಏ.23: ಕೋಲಾರ ಜಿಲ್ಲಾ ದಲಿತ ಸಂಘಟನೆಗಳ ಷರತ್ತುಗಳಿಗೆ ಕಾಂಗ್ರೆಸ್ ಪಕ್ಷ  ಬದ್ಧವಾಗಿರುತ್ತದೆ ಎಂದು ಭಾವಿಸಿ ಕೋಲಾರ ಮೀಸಲು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ರವರಿಗೆ ಜಿಲ್ಲಾ ದಲಿತ ಸಂಘಟನೆಗಳ ಸಂಯುಕ್ತ ರಂಗ ಬೆಂಬಲ ಷೋಷಿಸಿ ಅವರ ಗೆಲುವಿಗೆ ಶ್ರಮಿಸಲಿದೆಯೆಂದು ಸಂಯುಕ್ತ ರಂಗದ ಸ್ಥಾಪನಾಧ್ಯಕ್ಷ ಡಾ.ಎಂ. ಚಂದ್ರಶೇಖರ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುಮಾರು 25 ದಲಿತ ಸಂಘಟನೆಗಳ ಮುಖಂಡರುಗಳು ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಾ ದಲಿತ ಸಂಘಟನೆಗಳ ಜಿಲ್ಲಾ ಮಟ್ಟದ ಸರ್ವ ಸದಸ್ಯರ ಸಭೆಯಲ್ಲಿ ಆದ ತೀರ್ಮಾನದಂತೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಾಗುವುದು. ಕಾಂಗ್ರೆಸ್ ಪಕ್ಷ ಭಾರತ ಸಂವಿಧಾನ ರಕ್ಷಣೆ, ದೀನ ದಲಿತ,ಹಿಂದುಳಿದ ಅಲ್ಪಸಂಖ್ಯಾತರ ರಕ್ಷಣೆ ಮಾಡುವ ಭರವಸೆ ನೀಡಿದ್ದು,ನಮ್ಮ ಸಂಯುಕ್ತ ರಂಗ ವಿಧಿಸಿರುವ ಎಲ್ಲಾ ಷರತ್ತು,ಬೇಡಿಕೆಗಳನ್ನು ಈಡೇರಿಸುವ ಭರವಸೆ ಇದೆಯೆಂದರು.
ಪ್ರಮುಖ ಬೇಡಿಕೆಗಳಾಗಿ ಸಂವಿಧಾನದ ರಕ್ಷಣೆ ಅಲ್ಲದೆ ಸಮರ್ಪಕ ಅನುಷ್ಠಾನ, ಅಭಿವೃದ್ಧಿಗೆ ಆದ್ಯತೆ ನೀಡಬೇಕು,ಜಾತಿ ಸಮೀಕ್ಷೆ ಮತ್ತು ಒಳ
ಮೀಸಲಾತಿ ಅನುಷ್ಠಾನ ತರುವುದು.ಕಾಂಗ್ರೆಸ್  ಪಕ್ಷದ ಪ್ರಣಾಳಿಕೆಯ ಎಲ್ಲಾ ಘೋಷಣೆಗಳನ್ನು ಅನುಷ್ಠಾನಕ್ಕೆ ತರುವುದು.ರಾಜ್ಯದಲ್ಲಿ ತಂದಿರುವ ಎಲ್ಲಾ ಗ್ಯಾರೆಂಟಿಗಳನ್ನು ಮುಂದುವರೆಸುವುದು,ವಿದ್ಯಾಕ್ಷೇತ್ರದಲ್ಲಿ ದಲಿತರ ಅಭಿವೃದ್ಧಿ ಕಾರ್ಯಗಳನ್ನು ಮರು ಸ್ಥಾಪಿಸುವುದು, ಖಾಸಗಿ ಮಾಡಿರುವ ಸರ್ಕಾರಿ ಸಂಸ್ಥೆಗಳಲ್ಲಿ ಹಾಗೂ ಖಾಸಗಿ ವಲಯದಲ್ಲಿ ಮೀಸಲಾತಿ ಅಳವಡಿಸುವುದು, ಎಸ್.ಸಿ, ಎಸ್.ಟಿ ಗುತ್ತಿಗೆದಾರಿಗೆ ಸರ್ಕಾರದ ಟೆಂಡರ್ ಗಳಲ್ಲಿ ಶೇ 30 ರಷ್ಟು ಮೀಸಲಾತಿ ಕಾಯ್ದಿರಿಸುವುದು,ಗ್ಯಾರೆಂಟಿ ಕಾರ್ಯಕ್ರಮಗಳಿಗೆ ಬಳಸಿರುವ ಎಸ್.ಸಿ, ಎಸ್.ಟಿ ಮೀಸಲಾತಿ ಹಣವನ್ನು ಮತ್ತೆ ಜನಾಂಗದ ಅಭಿವೃದ್ಧಿಗೆ ಮರು ಹಂಚಿಕೆ ಮಾಡುವುದು,ಇನಾಂ ಜಮೀನುಗಳನ್ನು ಮರು ಮಂಜೂರು ಮಾಡುವುದು,ಐ.ಎ.ಎಸ್, ಐ.ಪಿ.ಎಸ್,ಕೆ.ಎ.ಎಸ್ ಪರೀಕ್ಷಾ ಪೂರ್ವ ತಯಾರಿ ತರಭೇತಿ ಕೋರ್ಸ್ ಗಳ ವೆಚ್ಚವನ್ನು ಸರ್ಕಾರ ಭರಿಸುವುದು ಸೇರಿದಂತೆ ಇನ್ನೂ ಹಲವಾರು ಷರತ್ತುಗಳನ್ನು ಕಾಂಗ್ರೆಸ್ ಪಕ್ಷಕ್ಕೆ ವಿಧಿಸಿರುವುದಾಗಿ ಅವರು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ದಲಿತ ಸಂಘಟನೆಗಳ ಸಂಯುಕ್ತರಂಗ ಒಕ್ಕೂಟದ ಜಿಲ್ಲಾಧ್ಯಕ್ಷ ಡಿ.ಪಿ.ಎಸ್  ಮುನಿರಾಜು, ಎಸ್.ನಾರಾಯಣ ಸ್ವಾಮಿ, ಶ್ರೀರಂಗ, ಖಾದ್ರಿಪುರ ಬಾಬು, ಡಿ.ಎಸ್.ಎಸ್.ಮಂಜುಳಾ, ಡಿ.ಪಿ.ಎಸ್ ಎಂ.ಮಂಜುನಾಥ್, ಎಂ.ನಾರಾಯಣ ಸ್ವಾಮಿ, ಗಂಗಾಧರರೆಡ್ಡಿ, ಎನ್.ಅಯ್ಯಪ್ಪ, ಆರ್.ನಾರಾಯಣಪ್ಪ ಮತ್ತಿತರರು ಹಾಜರಿದ್ದರು.

ಕೋಲಾರ ಜಿಲ್ಲಾ ಕಾಂಗ್ರೆಸ್‌ನಲ್ಲಿನ ಎಡ,ಬಲ ಗೊಂದಲ ಸುಖಾಂತ್ಯವಾಗಿದ್ದು ಎಲ್ಲ ಕಾಂಗ್ರೆಸ್ ಮುಖಂಡರೂ ಒಗ್ಗಟ್ಟಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಜಿಎಫ್ ಶಾಸಕಿ ರೂಪಕಲಾ ಅವರು ಉರಿಬಿಸಿಲಿನಲ್ಲಿ ಬೆಂಬಲಿಗರೊಡಗೂಡಿ ಪ್ರಚಾರ ನಡೆಸುತ್ತಿದ್ದು ಇಡೀ ಜಿಲ್ಲೆಯಲ್ಲೇ ಹೆಚ್ಚಿನ ಲೀಡ್ ದೊರಕಿಸುವ ಆಶಯ ಹೊಂದಿದ್ದಾರೆ. ಸಚಿವ ಕೆ.ಎಚ್.ಮುನಿಯಪ್ಪ ಅವರು ಗೌತಮ್ ನಾಮಪತ್ರ ಸಲ್ಲಿಕೆಗೆ ಜತೆಯಾಗುವ ಮೂಲಕ ಆಶೀರ್ವಾದ ಮಾಡಿದ್ದು ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ನಿಶ್ಚಿತ.

– ಡಿಪಿಎಸ್ ಮುನಿರಾಜು, ರಾಜ್ಯಾಧ್ಯಕ್ಷರು, ಡಿಪಿಎಸ್

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!