PLACE YOUR AD HERE AT LOWEST PRICE
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಜಿಲ್ಲೆಯ ಹಿರಿಯ ಪತ್ರಕರ್ತ ಎಸ್.ಚಂದ್ರಶೇಖರ್ ಸೇರಿ 15 ಮಂದಿಗೆ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಲಾಗಿದೆ.
ಬುಧವಾರ ನಡೆಯಲಿರುವ ಕರ್ನಾಟಕ ರಾಜ್ಯೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ತಿಳಿಸಿದರು.
ಪ್ರಶಸ್ತಿ ಪುರಸ್ಕೃತರು: ಮಾಲೂರಿನ ಎ.ಎಸ್.ಎನ್.ತ್ಯಾಗರಾಜಾಚಾರ್ಯ (ಶಿಲ್ಪಕಲೆ), ಕೆಜಿಎಫ್ನ ಶಾಂತಮ್ಮ (ಸಹಕಾರ) ಕೋಲಾರದ ಸೌಭಾಗ್ಯಮ್ಮ, ರುಮಾನ ಕೌಸರ್ (ಕ್ರೀಡೆ), ಬಿ.ಎಸ್.ಗೋವಿಂದರಾಜು– ವಾಸವಿ ಅನ್ನದಾನ ಸೇವಾ ಟ್ರಸ್ಟ್ (ಸಮಾಜ ಸೇವೆ), ಸುನಂದಮ್ಮ (ಜಾನಪದ), ಎನ್.ಆರ್.ಜ್ಞಾನಮೂರ್ತಿ (ಗಮನಕ ಕಲೆ), ಡಾ.ನಾರಾಯಣಸ್ವಾಮಿ (ಸಂಗೀತ/ನಾದಸ್ವರ), ಸುರೇಶ್ ಕುಮಾರ್ (ವಿಜ್ಞಾನ), ಅ.ಕೃ.ಸೋಮಶೇಖರ್ (ಕನ್ನಡಪರ ಸಂಘಟನೆ ಹೋರಾಟಗಾರರು), ಮಾಲೂರಿನ ಸಂಪತ್ ಕುಮಾರ್ (ಸಾವಯವ ಕೃಷಿ), ಕೋಲಾರದ ಬಿ.ಸುರೇಶ್ (ಕೈಗಾರಿಕೆ ಮತ್ತು ವಾಣಿಜ್ಯ), ಹ.ಮಾ.ರಾಮಚಂದ್ರ (ಶಿಕ್ಷಣ), ಎಸ್.ಚಂದ್ರಶೇಖರ್ (ಮಾಧ್ಯಮ) ಹಾಗೂ ಮುಳಬಾಗಲು ತಾಲ್ಲೂಕು ಡಾ.ಡಿ.ಎಂ.ದೊಡ್ಡಭದ್ರೇಗೌಡ (ವೈದ್ಯಕೀಯ).